ಹೊಸದಿಲ್ಲಿ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರ ವಿರುದ್ಧದ ಪ್ರಕರಣದ ತನಿಖೆಯಿಂದ ಸಿಬಿಐ ಜಂಟಿ ನಿರ್ದೇಶಕ ವಿ. ಮುರುಗೇಶನ್ ಅವರನ್ನು ಶುಕ್ರವಾರ ಕೈಬಿಡಲಾಗಿದೆ. ಸಿಬಿಐ ಹಂಗಾಮಿ ಮುಖ್ಯಸ್ಥ ಎಂ. ನಾಗೇಶ್ವರ ರಾವ್ ಅವರು, ಆಸ್ಥಾನಾ ಪ್ರಕರಣದ ತನಿಖೆಯ ನೇತೃತ್ವ ವಹಿಸಲು ಮುರುಗೇಶನ್ ಅವರನ್ನು ನಿಯೋಜಿಸಿದ್ದರು. ಆದರೆ, ಡಿಢೀರ್ ಬೆಳವಣಿಗೆಯಲ್ಲಿ ಮುರುಗೇಶನ್ ಅವರನ್ನು ಕಲ್ಲಿದ್ದಲು ಹಗರಣ ಪ್ರಕರಣದ ತನಿಖೆಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಆಸ್ಥಾನಾ ಪ್ರಕರಣದ ತನಿಖೆಯ ಹೊಣೆಯನ್ನು ಜಂಟಿ ನಿರ್ದೇಶಕ ಜಿ.ಕೆ. ಗೋಸ್ವಾಮಿ ಅವರಿಗೆ ವಹಿಸಲಾಗಿದೆ.
ಆಸ್ಥಾನಾ ಪ್ರಕರಣ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಬದಲು
ಡಿಢೀರ್ ಬೆಳವಣಿಗೆಯಲ್ಲಿ ಮುರುಗೇಶನ್ ಅವರನ್ನು ಕಲ್ಲಿದ್ದಲು ಹಗರಣ ಪ್ರಕರಣದ ತನಿಖೆಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಆಸ್ಥಾನಾ ಪ್ರಕರಣದ ತನಿಖೆಯ ಹೊಣೆಯನ್ನು ಜಂಟಿ ನಿರ್ದೇಶಕ ಜಿ.ಕೆ. ಗೋಸ್ವಾಮಿ ಅವರಿಗೆ ವಹಿಸಲಾಗಿದೆ.
Vijaya Karnataka 5 Jan 2019, 5:00 am