ಆ್ಯಪ್ನಗರ

ಬಿಹಾರ ಬಾಲಿಕಾಗೃಹ ಅತ್ಯಾಚಾರ ಪ್ರಕರಣ: ನಿತೀಶ್‌ ವಿರುದ್ಧ ಸಿಬಿಐ ತನಿಖೆ

ಮುಜಪ್ಫರ್‌ಪುರ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಧರ್ಮೇಂದ್ರ ಸಿಂಗ್‌ ಹಾಗೂ ಸಾಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತುಲ್‌ ಪ್ರಸಾದ್‌ ವಿರುದ್ಧವೂ ತನಿಖೆಗೆ ನ್ಯಾಯಾಲಯ ಆದೇಶ ನೀಡಿದೆ.

Vijaya Karnataka 17 Feb 2019, 5:00 am
ಪಟನಾ: ಬಿಹಾರದ ಬಾಲಿಕಾಗೃಹ ಅತ್ಯಾಚಾರ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಇಲ್ಲಿನ ವಿಶೇಷ ಪೋಕ್ಸೊ ನ್ಯಾಯಾಲಯ ಆದೇಶಿಸಿದೆ.
Vijaya Karnataka Web nitish kumar 2


ಮುಜಪ್ಫರ್‌ಪುರ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಧರ್ಮೇಂದ್ರ ಸಿಂಗ್‌ ಹಾಗೂ ಸಾಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತುಲ್‌ ಪ್ರಸಾದ್‌ ವಿರುದ್ಧವೂ ತನಿಖೆಗೆ ನ್ಯಾಯಾಲಯ ಆದೇಶ ನೀಡಿದೆ.

ವಿಶೇಷವೆಂದರೆ, ಈ ಪ್ರಕರಣದ ಆರೋಪಿಯಾಗಿರುವ ಅಶ್ವಿನ್‌ ಎಂಬಾತನ ಅರ್ಜಿಯ ಮೇರೆಗೆ ಸಿಬಿಐ ತನಿಖೆಗೆ ಆದೇಶ ನೀಡಲಾಗಿದೆ.

''ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುವ ಮುನ್ನ ಅವರಿಗೆ ಮತ್ತು ಬರುವ ಇಂಜಿಕ್ಷನ್‌ ನೀಡುತ್ತಿದ್ದ ಆರೋಪ ಎದುರಿಸುತ್ತಿದ್ದ ಅಶ್ವಿನ್‌, ಸಿಬಿಐ ತನಿಖೆಯಲ್ಲಿ ಕೆಲವೊಂದು ವಾಸ್ತವ ಅಂಶಗಳನ್ನು ಮರೆಮಾಚುತ್ತಿದೆ. ಪ್ರಕರಣದಲ್ಲಿ ಸಿಎಂ ನಿತೀಶ್‌ ಕುಮಾರ್‌, ಜಿಲ್ಲಾ ಮ್ಯಾಜಿಸ್ಪ್ರೇಟ್‌ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಪಾತ್ರದ ಬಗ್ಗೆ ತನಿಖೆ ನಡೆಸಿದರೆ, ನಿಜಾಂಶ ಹೊರಬೀಳಿದೆ. ಹೀಗಾಗಿ ಅವರನ್ನೂ ತನಿಖೆಗೆ ಒಳಪಡಿಸುವಂತೆ ಆದೇಶಿಸಬೇಕು,'' ಎಂದು ಅಶ್ವಿನ್‌ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ.

ಬಿಹಾರ ಬಾಲಿಕಾಗೃಹದ ಪ್ರಕರಣದಲ್ಲಿ ಸೂಕ್ತ ವಿವರಗಳನ್ನು ಸಲ್ಲಿಸದ ನಿತೀಶ್‌ ಸರಕಾರವನ್ನು ಫೆ.7ರಂದು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಪ್ರಕರಣ ವಿಚಾರಣೆಯನ್ನು ಮುಜಫ್ಫರ್‌ಪುರದಿಂದ ದಿಲ್ಲಿಯ ಸಾಕೇತ್‌ ಕೋರ್ಟ್‌ಗೆ ವರ್ಗಾಯಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ