ಹೊಸದಿಲ್ಲಿ: ಕೆಲಸಕ್ಕಾಗಿ ಭೂಮಿ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಪಟನಾದಲ್ಲಿರುವ ನಿವಾಸದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ವಿಚಾರಣೆಗೆ ಒಳಪಡಿಸಿದ ಮರುದಿನ, ಅವರ ಪತಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಕೂಡ ಅದೇ ಪ್ರಕರಣದಲ್ಲಿ ವಿಚಾರಣೆ ನಡೆಸಲು ಸಿಬಿಐ, ಅವರ ಮಗಳು ಮಿಸಾ ಭಾರ್ತಿ ಅವರ ಮನೆಗೆ ಮಂಗಳವಾರ ತೆರಳಿದೆ. ಲಾಲು ಪ್ರಸಾದ್ ಯಾದವ್ ಅವರು ಯುಪಿಎ ಸರಕಾರದ ಮೊದಲ ಅವಧಿಯಲ್ಲಿ 2004- 2009ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ, ಅವರು ಮತ್ತು ಅವರ ಕುಟುಂಬದವರು ಉದ್ಯೋಗಗಳನ್ನು ನೀಡಲು ಅದಕ್ಕೆ ಪ್ರತಿಯಾಗಿ ಕಡಿಮೆ ದರದಲ್ಲಿ ಜಮೀನುಗಳನ್ನು ಖರೀದಿಸಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ, ಹೆಣ್ಣುಮಕ್ಕಳಾದ ಮಿಸಾ ಮತ್ತು ಹೇಮಾ ಹಾಗೂ ಇತರರನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ.
ಬಿಹಾರದ ಮಾಜಿ ಸಿಎಂ ದಂಪತಿ, ಅವರ ಹೆಣ್ಣುಮಕ್ಕಳಲ್ಲದೆ, 2022ರ ಮೇ ತಿಂಗಳಲ್ಲಿ ದಾಖಲಾದ ಎಫ್ಐಆರ್ನಲ್ಲಿ 12 ಮಂದಿಯನ್ನು ಹೆಸರಿಸಲಾಗಿದೆ. ಇವರು ಜಮೀನು ವಿನಿಮಯಕ್ಕೆ ಪ್ರತಿಯಾಗಿ ಕೆಲಸ ಗಿಟ್ಟಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಇದೇ ಪ್ರಕರಣದಲ್ಲಿ ಲಾಲು ಅವರ ಆಪ್ತ ಮತ್ತು ಮಾಜಿ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್ಡಿ) ಭೋಲಾ ಯಾದವ್ ಅವರನ್ನು ಕಳೆದ ಜುಲೈನಲ್ಲಿ ಸಿಬಿಐ ಬಂಧಿಸಿತ್ತು.
ಬಿಜೆಪಿಯು ತನ್ನ ರಾಜಕೀಯ ಉದ್ದೇಶಗಳಿಗಾಗಿ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕೆಲವು ದಿನಗಳ ಹಿಂದಷ್ಟೇ ಎಂಟು ವಿಪಕ್ಷಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇವರಲ್ಲಿ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ಅವರ ಮಗ ಹಾಗೂ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಕೂಡ ಸೇರಿದ್ದರು.
ಏನಿದು ಪ್ರಕರಣ?
ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಕೊಡಿಸಲು ಅವರಿಂದ ಭೂಮಿ ರೂಪದಲ್ಲಿ ಲಂಚ ಪಡೆಯಲಾಗಿತ್ತು. ಇದರಲ್ಲಿ ಲಾಲು ಅವರ ಕುಟುಂಬ ಭಾಗಿಯಾಗಿತ್ತು ಎಂದು ಆರೋಪಿಸಲಾಗಿದೆ. ಸಂಚು ಹಾಗೂ ಭ್ರಷ್ಟಾಚಾರದ ಆರೋಪಗಳ ಅಡಿಯಲ್ಲಿ ಕಳೆದ ವರ್ಷ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.
ಪಟನಾ ನಿವಾಸಿಗಳಾಗಿದ್ದರೂ ಕೆಲವು ವ್ಯಕ್ತಿಗಳನ್ನು ಮುಂಬಯಿ, ಜಬಲ್ಪುರ, ಕೋಲ್ಕತಾ, ಜೈಪುರ ಮತ್ತು ಹಾಜಿಪುರ ರೈಲ್ವೆ ವಲಯಗಳಲ್ಲಿನ ಗ್ರೂಪ್- ಡಿ ಉಪ ಸಿಬ್ಬಂದಿಯನ್ನಾಗಿ ನೇಮಕ ಮಾಡಲಾಗಿತ್ತು. ಅದಕ್ಕೆ ಉಡುಗೊರೆಯಾಗಿ ಈ ವ್ಯಕ್ತಿಗಳು ತಮ್ಮ ಮಾಲೀಕತ್ವದ ಜಮೀನುಗಳನ್ನು ಲಾಲು ಕುಟುಂಬದ ಸದಸ್ಯರ ಹೆಸರಿಗೆ ಹಾಗೂ ಕುಟುಂಬ ನಡೆಸುತ್ತಿರುವ ಕಂಪೆನಿಗೆ ಬರೆದುಕೊಟ್ಟಿದ್ದರು.
ಕೆಲವು ಪ್ರಕರಣಗಳಲ್ಲಿ, ತೀರಾ ಅಗ್ಗದ ಬೆಲೆಗೆ ಯಾದವ್ ಕುಟುಂಬಕ್ಕೆ ಜಮೀನುಗಳನ್ನು ವರ್ಗಾವಣೆ ಮಾಡಲಾಗಿದೆ. ರೈಲ್ವೆ ಇಲಾಖೆಯು ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಈ ನೇಮಕಾತಿಗಳನ್ನು ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ.
ಈ ಆರೋಪಗಳನ್ನು ಆರ್ಜೆಡಿ ನಾಯಕರು ಅಲ್ಲಗಳೆದಿದ್ದಾರೆ. ತಮ್ಮನ್ನು ಥಳಕು ಹಾಕಿರುವುದು ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ. "ಬಿಹಾರದಲ್ಲಿ ಲಾಲು ಅವರ ಬಗ್ಗೆ ಬಿಜೆಪಿ ಹೆದರಿಕೊಂಡಿದೆ. ನಾವು ಓಡಿಹೋಗುವುದಿಲ್ಲ. ಕಳೆದ 30 ವರ್ಷಗಳಿಂದಲೂ ನಾವು ಆರೋಪಗಳನ್ನು ಎದುರಿಸುತ್ತಲೇ ಇದ್ದೇವೆ" ಎಂದು ಕಳೆದ ವಾರ ರಾಬ್ರಿ ದೇವಿ ಹೇಳಿದ್ದರು.
ಬಿಹಾರದ ಮಾಜಿ ಸಿಎಂ ದಂಪತಿ, ಅವರ ಹೆಣ್ಣುಮಕ್ಕಳಲ್ಲದೆ, 2022ರ ಮೇ ತಿಂಗಳಲ್ಲಿ ದಾಖಲಾದ ಎಫ್ಐಆರ್ನಲ್ಲಿ 12 ಮಂದಿಯನ್ನು ಹೆಸರಿಸಲಾಗಿದೆ. ಇವರು ಜಮೀನು ವಿನಿಮಯಕ್ಕೆ ಪ್ರತಿಯಾಗಿ ಕೆಲಸ ಗಿಟ್ಟಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಇದೇ ಪ್ರಕರಣದಲ್ಲಿ ಲಾಲು ಅವರ ಆಪ್ತ ಮತ್ತು ಮಾಜಿ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್ಡಿ) ಭೋಲಾ ಯಾದವ್ ಅವರನ್ನು ಕಳೆದ ಜುಲೈನಲ್ಲಿ ಸಿಬಿಐ ಬಂಧಿಸಿತ್ತು.
ಬಿಜೆಪಿಯು ತನ್ನ ರಾಜಕೀಯ ಉದ್ದೇಶಗಳಿಗಾಗಿ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕೆಲವು ದಿನಗಳ ಹಿಂದಷ್ಟೇ ಎಂಟು ವಿಪಕ್ಷಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇವರಲ್ಲಿ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ಅವರ ಮಗ ಹಾಗೂ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಕೂಡ ಸೇರಿದ್ದರು.
ಏನಿದು ಪ್ರಕರಣ?
ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಕೊಡಿಸಲು ಅವರಿಂದ ಭೂಮಿ ರೂಪದಲ್ಲಿ ಲಂಚ ಪಡೆಯಲಾಗಿತ್ತು. ಇದರಲ್ಲಿ ಲಾಲು ಅವರ ಕುಟುಂಬ ಭಾಗಿಯಾಗಿತ್ತು ಎಂದು ಆರೋಪಿಸಲಾಗಿದೆ. ಸಂಚು ಹಾಗೂ ಭ್ರಷ್ಟಾಚಾರದ ಆರೋಪಗಳ ಅಡಿಯಲ್ಲಿ ಕಳೆದ ವರ್ಷ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.
ಪಟನಾ ನಿವಾಸಿಗಳಾಗಿದ್ದರೂ ಕೆಲವು ವ್ಯಕ್ತಿಗಳನ್ನು ಮುಂಬಯಿ, ಜಬಲ್ಪುರ, ಕೋಲ್ಕತಾ, ಜೈಪುರ ಮತ್ತು ಹಾಜಿಪುರ ರೈಲ್ವೆ ವಲಯಗಳಲ್ಲಿನ ಗ್ರೂಪ್- ಡಿ ಉಪ ಸಿಬ್ಬಂದಿಯನ್ನಾಗಿ ನೇಮಕ ಮಾಡಲಾಗಿತ್ತು. ಅದಕ್ಕೆ ಉಡುಗೊರೆಯಾಗಿ ಈ ವ್ಯಕ್ತಿಗಳು ತಮ್ಮ ಮಾಲೀಕತ್ವದ ಜಮೀನುಗಳನ್ನು ಲಾಲು ಕುಟುಂಬದ ಸದಸ್ಯರ ಹೆಸರಿಗೆ ಹಾಗೂ ಕುಟುಂಬ ನಡೆಸುತ್ತಿರುವ ಕಂಪೆನಿಗೆ ಬರೆದುಕೊಟ್ಟಿದ್ದರು.
ಕೆಲವು ಪ್ರಕರಣಗಳಲ್ಲಿ, ತೀರಾ ಅಗ್ಗದ ಬೆಲೆಗೆ ಯಾದವ್ ಕುಟುಂಬಕ್ಕೆ ಜಮೀನುಗಳನ್ನು ವರ್ಗಾವಣೆ ಮಾಡಲಾಗಿದೆ. ರೈಲ್ವೆ ಇಲಾಖೆಯು ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಈ ನೇಮಕಾತಿಗಳನ್ನು ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ.
ಈ ಆರೋಪಗಳನ್ನು ಆರ್ಜೆಡಿ ನಾಯಕರು ಅಲ್ಲಗಳೆದಿದ್ದಾರೆ. ತಮ್ಮನ್ನು ಥಳಕು ಹಾಕಿರುವುದು ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ. "ಬಿಹಾರದಲ್ಲಿ ಲಾಲು ಅವರ ಬಗ್ಗೆ ಬಿಜೆಪಿ ಹೆದರಿಕೊಂಡಿದೆ. ನಾವು ಓಡಿಹೋಗುವುದಿಲ್ಲ. ಕಳೆದ 30 ವರ್ಷಗಳಿಂದಲೂ ನಾವು ಆರೋಪಗಳನ್ನು ಎದುರಿಸುತ್ತಲೇ ಇದ್ದೇವೆ" ಎಂದು ಕಳೆದ ವಾರ ರಾಬ್ರಿ ದೇವಿ ಹೇಳಿದ್ದರು.