ಆ್ಯಪ್ನಗರ

ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ ಸಿವಿಸಿ ವರದಿ ಕಹಿ: ನ.20ಕ್ಕೆ ಮುಂದಿನ ವಿಚಾರಣೆ

ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಕಡ್ಡಾಯ ರಜೆ ಮೇಲೆ ತೆರಳಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಪಾಲಿಗೆ ಕೇಂದ್ರ ಜಾಗೃತ ಆಯೋಗದ ವರದಿ ಕಹಿಯಾಗಿದೆ.

TIMESOFINDIA.COM 16 Nov 2018, 2:18 pm
ಹೊಸದಿಲ್ಲಿ: ಕೇಂದ್ರ ಜಾಗೃತ ಆಯೋಗ (ಸಿವಿಸಿ) ತನಗೆ ಸಲ್ಲಿಸಿರುವ ವಿಚಾರಣಾ ವರದಿಯಲ್ಲಿರುವ 'ಅತೃಪ್ತಿಕರ ಅಂಶಗಳ ಬಗ್ಗೆ' ನವೆಂಬರ್ 19ರ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಇದರೊಂದಿಗೆ ಅಲೋಕ್ ವರ್ಮಾಗೆ ಸಿವಿಸಿ ಕ್ಲೀನ್‌ಚಿಟ್‌ ಕೊಟ್ಟಿಲ್ಲ ಎಂಬ ಅಂಶವೂ ಬಹಿರಂಗವಾಗಿದೆ. ಸಿಬಿಐ ವರ್ಸಸ್‌ ಸಿಬಿಐ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನ.20ಕ್ಕೆ ನಿಗದಿಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಮುಂದೆ ಸಿವಿಸಿ ಸಲ್ಲಿಸಿದ ವರದಿಯಲ್ಲಿ ವರ್ಮಾ ಪಾಲಿಗೆ ಬಹಳಷ್ಟು 'ಅತೃಪ್ತಿಕರ ಅಂಶಗಳಿವೆ' ಎಂಬುದು ಈಗ ಬಹಿರಂಗವಾಗಿದೆ.

ಸಾರ್ವಜನಿಕರ ದೃಷ್ಟಿಯಲ್ಲಿ ಸಿಬಿಐ ವರ್ಚಸ್ಸು ಕಾಪಾಡುವುದಕ್ಕಾಗಿ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ನೀಡಲಾಗಿದ್ದು ರಹಸ್ಯ ಕಾಯ್ದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ತಮ್ಮನ್ನು ಕರ್ತವ್ಯಮುಕ್ತಗೊಳಿಸಿದ ಕೇಂದ್ರದ ತೀರ್ಮಾನ ಪ್ರಶ್ನಿಸಿ ವರ್ಮಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ.

ವೀಡಿಯೋ: ಅಲೋಕ್‌ ವರ್ಮಾಗೆ ಸಿವಿಸಿ ಕ್ಲೀನ್‌ ಚಿಟ್‌ ಇಲ್ಲ

ಸಿವಿಸಿ ವರದಿಯನ್ನು ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರಿಗೂ ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. ಆದರೆ ತನಿಖಾ ವರದಿಯನ್ನು ಸಿಬಿಐ ವಿ‍ಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರಿಗೆ ನೀಡಲು ಕೋರ್ಟ್ ನಿರಾಕರಿಸಿತ್ತು.

ಪೋರ್ಟ್ ಬ್ಲೇರ್‌ಗೆ ವರ್ಗಾವಣೆಗೊಂಡ ಸಿಬಿಐ ಡಿಎಸ್‌ಪಿ ಎ.ಕೆ ಬಸ್ಸಿ ಅವರ ಅರ್ಜಿ ಹಾಗೂ ಅಲೋಕ್ ವರ್ಮಾರನ್ನು ರಜೆ ಮೇಲೆ ಕಳುಹಿಸಿದ ಕೇಂದ್ರದ ತೀರ್ಮಾನ ಪ್ರಶ್ನಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅರ್ಜಿ ಬಗ್ಗೆ ನಂತರ ನಿರ್ಧರಿಸುವುದಾಗಿ ಕೋರ್ಟ್‌ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ