ಜಮ್ಮು: ನಿಯಂತ್ರಣ ರೇಖೆಯಾಚೆಗೆ ಏಳು ಪಾಕಿಸ್ತಾನಿ ಸೇನಾ ಠಾಣೆಗಳನ್ನು ಭಾರತೀಯ ಸೇನೆ ನಾಶಪಡಿಸಿದೆ. ಪಾಕ್ ಪಡೆಗಳ ಅಪ್ರಚೋದಿತ ಗುಂಡಿನ ದಾಳಿಗೆ ತೀಕ್ಷ್ಣ ತಿರುಗೇಟು ನೀಡಿದ ಭಾರತೀಯ ಯೋಧರು ರಜೌರಿ ಮತ್ತು ಪೂಂಛ್ ಜಿಲ್ಲೆಗಳ ಎಲ್ಓಸಿ ಬಳಿ ಪಾಕ್ ಸೇನಾಠಾಣೆಗಳನ್ನು ಪುಡಿಗುಟ್ಟಲಾಗಿದೆ. ಈ ಕಾರ್ಯಾಚರಣೆಯಲ್ಲಿ ಹಲವು ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪಾಕ್ ಶೆಲ್ ದಾಳಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೂಂಛ್ ಮತ್ತು ರಜೌರಿ ಜಿಲ್ಲೆಯ ಗಡಿ ರೇಖೆ ಸಮೀಪದ ಎಲ್ಲ ಶಾಲೆಗಳನ್ನು ಮುಚ್ಚಲಾಗಿದೆ.
ಸೋಮವಾರ ಗುಂಡಿನ ಕಾಳಗದಲ್ಲಿ ಒಬ್ಬ ಬಿಎಸ್ಸೆಫ್ ಇನ್ಸ್ಪೆಕ್ಟರ್ ಮತ್ತು 5 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದರು. ಇತರ 24 ಮಂದಿ ಗಾಯಗೊಂಡಿದ್ದರು.
ಪೂಂಛ್ ಜಿಲ್ಲೆಯ ಎಲ್ಓಸಿ ಮತ್ತು ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ಬಳಿ ಮಂಗಳವಾರ ಬೆಳಗಿನಿಂದಲೇ ಪಾಕ್ ಪಡೆಗಳು ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿವೆ.
ತಕ್ಕ ಶಾಸ್ತಿ: 10 ಪಾಕ್ ಸೈನಿಕರನ್ನು ಕೊಂದು ಕೆಡಹಿದ ಭಾರತೀಯ ಸೇನೆ
ಪೂಂಚ್ ಮತ್ತು ನೌಶೇರಾದ ಶಾನ್ಪುರ ಉಪ ಸೆಕ್ಟರ್ನಲ್ಲೂ ಪಾಕ್ ಪಡೆಗಳು ಗುಂಡಿನ ದಾಳಿ ನಡೆಸುತ್ತಿವೆ.
ಇದಕ್ಕೆ ಪ್ರತೀಕಾರವಾಗಿ ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರದ ರಾಖ್ಚಿಕ್ರಿ ಮತ್ತು ರಾವಲ್ಕೋಟ್ ಮುಂಚೂಣಿಯ 7 ಪಾಕ್ ಸೇನಾ ಠಾಣೆಗಳನ್ನು ಧ್ವಂಸ ಮಾಡಿದ್ದಾರೆ.
ಭಾರತೀಯ ಸೇನೆಯ ಪ್ರತಿದಾಳಿಗೆ ಪಾಕ್ ಯೋಧರು ಮೃತಪಟ್ಟಿರುವುದನ್ನು ಪಾಕಿಸ್ತಾನದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ದೃಢಪಡಿಸಿದೆ.
ಪಾಕಿಸ್ತಾನ 120 ಎಂಎಂ ಮೋರ್ಟರ್ ಬಾಂಬ್ಗಳನ್ನು ಬಳಸಿ ನಾಗರಿಕ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಎಲ್ಓಸಿ ಬಳಿಯ ಗ್ರಾಮಸ್ಥರು ತಿಳಿಸಿದ್ದಾರೆ.
ಪಾಕ್ ಶೆಲ್ ದಾಳಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೂಂಛ್ ಮತ್ತು ರಜೌರಿ ಜಿಲ್ಲೆಯ ಗಡಿ ರೇಖೆ ಸಮೀಪದ ಎಲ್ಲ ಶಾಲೆಗಳನ್ನು ಮುಚ್ಚಲಾಗಿದೆ.
ಸೋಮವಾರ ಗುಂಡಿನ ಕಾಳಗದಲ್ಲಿ ಒಬ್ಬ ಬಿಎಸ್ಸೆಫ್ ಇನ್ಸ್ಪೆಕ್ಟರ್ ಮತ್ತು 5 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದರು. ಇತರ 24 ಮಂದಿ ಗಾಯಗೊಂಡಿದ್ದರು.
ಪೂಂಛ್ ಜಿಲ್ಲೆಯ ಎಲ್ಓಸಿ ಮತ್ತು ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ಬಳಿ ಮಂಗಳವಾರ ಬೆಳಗಿನಿಂದಲೇ ಪಾಕ್ ಪಡೆಗಳು ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿವೆ.
ತಕ್ಕ ಶಾಸ್ತಿ: 10 ಪಾಕ್ ಸೈನಿಕರನ್ನು ಕೊಂದು ಕೆಡಹಿದ ಭಾರತೀಯ ಸೇನೆ
ಪೂಂಚ್ ಮತ್ತು ನೌಶೇರಾದ ಶಾನ್ಪುರ ಉಪ ಸೆಕ್ಟರ್ನಲ್ಲೂ ಪಾಕ್ ಪಡೆಗಳು ಗುಂಡಿನ ದಾಳಿ ನಡೆಸುತ್ತಿವೆ.
ಇದಕ್ಕೆ ಪ್ರತೀಕಾರವಾಗಿ ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರದ ರಾಖ್ಚಿಕ್ರಿ ಮತ್ತು ರಾವಲ್ಕೋಟ್ ಮುಂಚೂಣಿಯ 7 ಪಾಕ್ ಸೇನಾ ಠಾಣೆಗಳನ್ನು ಧ್ವಂಸ ಮಾಡಿದ್ದಾರೆ.
ಭಾರತೀಯ ಸೇನೆಯ ಪ್ರತಿದಾಳಿಗೆ ಪಾಕ್ ಯೋಧರು ಮೃತಪಟ್ಟಿರುವುದನ್ನು ಪಾಕಿಸ್ತಾನದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ದೃಢಪಡಿಸಿದೆ.
ಪಾಕಿಸ್ತಾನ 120 ಎಂಎಂ ಮೋರ್ಟರ್ ಬಾಂಬ್ಗಳನ್ನು ಬಳಸಿ ನಾಗರಿಕ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಎಲ್ಓಸಿ ಬಳಿಯ ಗ್ರಾಮಸ್ಥರು ತಿಳಿಸಿದ್ದಾರೆ.