ಆ್ಯಪ್ನಗರ

1.95 ಕೋಟಿ ಹೊಸ ಮನೆ, 1 ಕೋಟಿ ಉದ್ಯೋಗ ಸೃಷ್ಟಿ

ಗ್ರಾಮಾಂತರ ಪ್ರದೇಶಗಳಲ್ಲಿ 1.95 ಕೋಟಿಗೂ ಅಧಿಕ ಮನೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಲಿರುವ ಯೋಜನೆ ಹಾಗೂ ದಿಲ್ಲಿ ಸುತ್ತುಮುತ್ತಲಿನ ಪ್ರದೇಶಗಳಲ್ಲಿ 30,000 ಕೋಟಿ ರೂ. ವೆಚ್ಚದಲ್ಲಿ ತ್ವರಿತ ಸಾರಿಗೆ ವ್ಯವಸ್ಥೆಯ ಯೋಜನೆಗೆ ಮತ್ತು ತೈಲ ಶೋಧ ವಲಯವನ್ನು ಆಕರ್ಷಗೊಳಿಸುವ ಯೋಜನೆಗೆ ಸಮ್ಮತಿಸಲಾಗಿದೆ.

Vijaya Karnataka Web 21 Feb 2019, 7:30 am
ಹೊಸದಿಲ್ಲಿ: ದೇಶದ ಗ್ರಾಮೀಣ ಪ್ರದೇಶಗಳಲ್ಲಿ 1.95 ಕೋಟಿಗೂ ಅಧಿಕ ಹೊಸ ಮನೆಗಳ ನಿರ್ಮಾಣ ಹಾಗೂ 1 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಗೆ ಪೂರಕವಾಗುವ ಕ್ರಾಂತಿಕಾರಕ ನೀತಿಗಳನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.
Vijaya Karnataka Web Parliament


ಹೊಸ ಎಲೆಕ್ಟ್ರಾನಿಕ್ಸ್‌ ನೀತಿಗೆ ಸಂಪುಟ ಅನುಮೋದಿಸಿದ್ದು, ಇದರಿಂದ 1 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಜತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ 1.95 ಕೋಟಿಗೂ ಅಧಿಕ ಮನೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಲಿರುವ ಯೋಜನೆ ಹಾಗೂ ದಿಲ್ಲಿ ಸುತ್ತುಮುತ್ತಲಿನ ಪ್ರದೇಶಗಳಲ್ಲಿ 30,000 ಕೋಟಿ ರೂ. ವೆಚ್ಚದಲ್ಲಿ ತ್ವರಿತ ಸಾರಿಗೆ ವ್ಯವಸ್ಥೆಯ ಯೋಜನೆಗೆ ಮತ್ತು ತೈಲ ಶೋಧ ವಲಯವನ್ನು ಆಕರ್ಷಗೊಳಿಸುವ ಯೋಜನೆಗೆ ಸಮ್ಮತಿಸಲಾಗಿದೆ.

ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಸಮಿತಿಯು ಕಲ್ಲಿದ್ದಲು ಗಣಿಗಳಲ್ಲಿ ಶೇ.25ರಷ್ಟು ಉತ್ಪನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲೂ ಅನುಮತಿ ನೀಡಿದೆ. 40,000 ಮೆಗಾ ವ್ಯಾಟ್‌ ಛಾವಣಿ ಸೌರ ವಿದ್ಯುತ್‌ ಯೋಜನೆಗೂ ಹಸಿರು ನಿಶಾನೆ ತೋರಿಸಿದೆ. ರೈತರಿಗೆ ಹೊಸ ಸೌರ ವಿದ್ಯುತ್‌ ಯೋಜನೆ ಜಾರಿಯಾಗಲಿದೆ. ಕೇಂದ್ರ ಸಚಿವ ಸಂಪುಟ ಒಟ್ಟು 27 ನಿರ್ಣಯಗಳನ್ನು ಅನುಮೋದಿಸಿದೆ. ಒಂದು ಸಲ ಚುನಾವಣೆ ಘೋಷಣೆಯಾದ ನಂತರ ಮಹತ್ವದ ಘೋಷಣೆಗಳನ್ನು ಹೊರಡಿಸಲಾಗುವುದಿಲ್ಲ.

'' ಕೆಲವೊಂದು ನಿರ್ಣಯಗಳು ಕೆಲವು ತಿಂಗಳುಗಳಿಂದ ಸಂಪುಟದ ಮುಂದಿದ್ದವು. ಪ್ರತಿಯೊಂದನ್ನೂ ಚರ್ಚಿಸಿ ನಿರ್ಧರಿಸಲಾಗಿದೆ'' ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದರು.

ಹೊಸ ಎಲೆಕ್ಟ್ರಾನಿಕ್‌ ನೀತಿಯಿಂದ ಭಾರತವು ಎಲೆಕ್ಟ್ರಾನಿಕ್‌ ಉತ್ಪಾದನೆ ಹಾಗೂ ರಫ್ತಿನಲ್ಲಿ ಮುಂಚೂಣಿಗೆ ಬರುವ ನಿರೀಕ್ಷೆ ಇದೆ. ಸೆಮಿಕಂಡಕ್ಟರ್‌ ಘಟಕ, ಚಿಪ್‌ ಡಿಸೈನ್‌, ಹೈಟೆಕ್‌ ಯೋಜನೆಗಳಿಗೆ ಭಾರಿ ಉತ್ತೇಜನ ಸಿಗಲಿದೆ.

ಲೋಕಸಭೆಯಲ್ಲಿ ಅಂಗೀಕಾರವಾಗಿದ್ದರೂ, ರಾಜ್ಯಸಭೆಯಲ್ಲಿ ಬಾಕಿಯಾಗಿದ್ದ 4 ವಿಧೇಯಕಗಳಿಗೆ ಸಂಬಂಧಿಸಿದ ಸುಗ್ರೀವಾಜ್ಞೆಗಳಿಗೂ ಸಂಪುಟ ಅನುಮೋದಿಸಿದೆ. ಇದರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ವಿಧೇಯಕ, ಅನಿಯಂತ್ರಿತ ಠೇವಣಿ ಯೋಜನೆಗಳ ನಿಯಂತ್ರಣ ವಿಧೇಯಕ, ತ್ರಿವಳಿ ತಲಾಖ್‌ ಕುರಿತ ಮುಸ್ಲಿಮ್‌ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ವಿಧೇಯಕ ಸೇರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ