ಆ್ಯಪ್ನಗರ

Ashwini Vaishnav - ಸ್ಮಾರ್ಟ್ ಫೋನನ್ನು ನೆಲದ ಮೇಲೆ ಬೀಳಿಸಿ ಗುಣಮಟ್ಟ ಅಳೆದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್

ದಶಕಗಳ ಹಿಂದೆ ಭಾರತವು ಐಟಿ ರಂಗದಲ್ಲಿ ದೊಡ್ಡ ಸಾಧನೆಯನ್ನು ಮಾಡಿದೆ. ಆದರೀಗ, ಭಾರತವನ್ನು ಹಾರ್ಡ್ ವೇರ್ ನಲ್ಲೂ ಸ್ವಾವಲಂಬಿ ರಾಷ್ಟ್ರವನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಒಂದು ಭಾಗವಾಗಿ, ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ತಯಾರಿಕೆಗೆ ಒತ್ತು ನೀಡಲಾಗಿದೆ. ಆದರೆ, ಅದು ನೆಪಮಾತ್ರಕ್ಕೆ ಮಾತ್ರ ಎನ್ನುವಂತಾಗಬಾರದು. ಭಾರತದಲ್ಲಿ ತಯಾರಾಗುವ ಎಲ್ಲಾ ಸ್ಮಾರ್ಟ್ ಫೋನ್ ಗಳು ಉತ್ತಮ ಗುಣಮಟ್ಟವುಳ್ಳವಾಗಿರಬೇಕು ಎಂಬುದು ಕೇಂದ್ರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಅಶ್ವಿನಿ ವೈಷ್ಣವ್ ಅವರು ಐಎಂಸಿ 2022ರಲ್ಲಿ ಮೊಬೈಲನ್ನು ಕೆಳಗೆ ಬೀಳಿಸಿ ಅದನ್ನು ಪರೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

Authored byಚೇತನ್ ಓ.ಆರ್. | Vijaya Karnataka Web 4 Oct 2022, 10:15 pm
ಹೊಸದಿಲ್ಲಿ: ಇದೇ ತಿಂಗಳ 1ರಿಂದ ಆರಂಭವಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2022 ಸಮ್ಮೇಳನಕ್ಕೆ ಮಂಗಳವಾರ ಭೇಟಿ ನೀಡಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಅಲ್ಲಿ ಸ್ಟಾಲ್ ಒಂದರಲ್ಲಿ ಇರಿಸಲಾಗಿದ್ದ ಸ್ವದೇಶಿ ನಿರ್ಮಿತ ಸ್ಮಾರ್ಟ್ ಫೋನ್ ಒಂದನ್ನು ಕೈಯ್ಯಲ್ಲಿ ಹಿಡಿದು ಅದನ್ನು ನೆಲಕ್ಕೆ ಬಿಸಾಕಿದ್ದಾರೆ. ಆ ಮೂಲಕ, ಆ ಸ್ಮಾರ್ಟ್ ಫೋನ್ ನ ಗುಣಮಟ್ಟವನ್ನು ಅವರು ಪರೀಕ್ಷಿಸಿದ್ದಾರೆ. ಅದರ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದೆ.
Vijaya Karnataka Web ashwini vaishnav
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್.


ವಿಡಿಯೋದಲ್ಲೇನಿದೆ?

ವಿಡಿಯೋದಲ್ಲಿ ಅವರು ಸ್ಮಾರ್ಟ್ ಫೋನ್ ಸ್ಟಾಲ್ ಗೆ ಆಗಮಿಸಿ ಅಲ್ಲಿನ ಸಿಬ್ಬಂದಿಯ ಜತೆಗೆ ಮಾತನಾಡುತ್ತಾರೆ. ಆನಂತರ, ಅಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಮೊಬೈಲ್ ಫೋನನ್ನು ಕೈಯ್ಯಲ್ಲಿ ಹಿಡಿದು ಅದನ್ನು ಮೊದಲು ಕಣ್ಣಲ್ಲೇ ಪರೀಕ್ಷಿಸುತ್ತಾರೆ. ಆನಂತರ, ಅದನ್ನು ನೋಡನೋಡುತ್ತಿದ್ದಂತೆ ಕೆಳಕ್ಕೆ ಹಾಕುತ್ತಾರೆ. ತಕ್ಷಣವೇ ಅಲ್ಲಿದ್ದ ಒಬ್ಬ ಸಿಬ್ಬಂದಿ ಅದನ್ನು ಎತ್ತಿ ಸಚಿವರಿಗೆ ನೀಡುತ್ತಾರೆ. ಆನಂತರ, ಪುನಃ ಆ ಮೊಬೈಲ್ ಅನ್ನು ಪರೀಕ್ಷಿಸುವ ಅವರು, ಅದರ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ.


ಕೇಂದ್ರದ ಮಹತ್ವಾಕಾಂಕ್ಷೆ
ದಶಕಗಳ ಹಿಂದೆ ಭಾರತವು ಐಟಿ ರಂಗದಲ್ಲಿ ದೊಡ್ಡ ಸಾಧನೆಯನ್ನು ಮಾಡಿದೆ. ಆದರೀಗ, ಭಾರತವನ್ನು ಹಾರ್ಡ್ ವೇರ್ ನಲ್ಲೂ ಸ್ವಾವಲಂಬಿ ರಾಷ್ಟ್ರವನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಒಂದು ಭಾಗವಾಗಿ, ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ತಯಾರಿಕೆಗೆ ಒತ್ತು ನೀಡಲಾಗಿದೆ. ಆದರೆ, ಅದು ನೆಪಮಾತ್ರಕ್ಕೆ ಮಾತ್ರ ಎನ್ನುವಂತಾಗಬಾರದು. ಭಾರತದಲ್ಲಿ ತಯಾರಾಗುವ ಎಲ್ಲಾ ಸ್ಮಾರ್ಟ್ ಫೋನ್ ಗಳು ಉತ್ತಮ ಗುಣಮಟ್ಟವುಳ್ಳವಾಗಿರಬೇಕು ಎಂಬುದು ಕೇಂದ್ರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಅಶ್ವಿನಿ ವೈಷ್ಣವ್ ಅವರು ಐಎಂಸಿ 2022ರಲ್ಲಿ ಮೊಬೈಲನ್ನು ಕೆಳಗೆ ಬೀಳಿಸಿ ಅದನ್ನು ಪರೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ