ಆ್ಯಪ್ನಗರ

ಕಾವೇರಿ ಸ್ಕೀಮ್‌: ಮತ್ತೆ 2 ವಾರ ಟೈಂ ಕೇಳಿದ ಕೇಂದ್ರ

ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯದವರೆಗೆ ಕಾವೇರಿ ನೀರು ಹಂಚಿಕೆ 'ಸ್ಕೀಂ' ರಚಿಸದಿರಲು ಕೇಂದ್ರ ಸರಕಾರ ತಂತ್ರ ಹೆಣೆಯುತ್ತಿರುವುದು ಸ್ಪಷ್ಟವಾಗಿದೆ. ಕಳೆದ ಬಾರಿಯ ವಿಚಾರಣೆಯಲ್ಲಿ ವಿಧಿಸಿದ್ದ ಮೇ 3ರ ಅಂತಿಮ ಗಡುವನ್ನು ಇನ್ನೂ ಎರಡು ವಾರ ಕಾಲ ವಿಸ್ತರಿಸುವಂತೆ ಅದು ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದೆ. ಕೇಂದ್ರದ ಮನವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಈ ಹಿಂದೆ ನಿಗದಿಯಾದಂತೆ ಮೇ 3ರಂದು ಅರ್ಜಿ ವಿಚಾರಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

Vijaya Karnataka 28 Apr 2018, 7:40 am
ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯದವರೆಗೆ ಕಾವೇರಿ ನೀರು ಹಂಚಿಕೆ 'ಸ್ಕೀಂ' ರಚಿಸದಿರಲು ಕೇಂದ್ರ ಸರಕಾರ ತಂತ್ರ ಹೆಣೆಯುತ್ತಿರುವುದು ಸ್ಪಷ್ಟವಾಗಿದೆ. ಕಳೆದ ಬಾರಿಯ ವಿಚಾರಣೆಯಲ್ಲಿ ವಿಧಿಸಿದ್ದ ಮೇ 3ರ ಅಂತಿಮ ಗಡುವನ್ನು ಇನ್ನೂ ಎರಡು ವಾರ ಕಾಲ ವಿಸ್ತರಿಸುವಂತೆ ಅದು ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದೆ. ಕೇಂದ್ರದ ಮನವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಈ ಹಿಂದೆ ನಿಗದಿಯಾದಂತೆ ಮೇ 3ರಂದು ಅರ್ಜಿ ವಿಚಾರಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
Vijaya Karnataka Web Supreme Court


ಸುಪ್ರೀಂಕೋರ್ಟ್‌ ಕಳೆದ ಫೆಬ್ರವರಿ 16ರಂದು ನೀಡಿದ ತೀರ್ಪಿನಲ್ಲಿ 200 ವರ್ಷಗಳಷ್ಟು ಹಳೆಯ ಕಾವೇರಿ ಜಲ ವಿವಾದಕ್ಕೆ ಬಹುತೇಕ ಸೌಹಾರ್ದ ಎನ್ನಬಹುದಾದ ಪರಿಹಾರ ಸೂತ್ರವೊಂದನ್ನು ಪ್ರಕಟಿಸಿ, ಮಾರ್ಚ್‌ 29ರೊಳಗೆ ಪರಿಹಾರ ಸೂತ್ರದ ಜಾರಿಗೆ ಸ್ಕೀಂ ರೂಪಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು. ಕೇಂದ್ರ ಸ್ಕೀಂ ರಚಿಸದಿರುವುದನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ ದಾವೆಯನ್ನು ಏಪ್ರಿಲ್‌ 9ರಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಮೇ 3ಕ್ಕೆ ಮತ್ತೊಂದು ಗಡುವನ್ನು ವಿಧಿಸಿತ್ತು.

ಈ ಮಧ್ಯೆ ಕೇಂದ್ರ ಸರಕಾರ ಇನ್ನೆರಡು ವಾರಗಳ ಕಾಲಾವಕಾಶ ಕೋರಿದೆ. ಕಳೆದ ಬಾರಿಯ ವಿಚಾರಣೆಯಲ್ಲೇ ಕರ್ನಾಟಕ ಚುನಾವಣೆಯನ್ನು ಮುಂದಿಟ್ಟು ಹೆಚ್ಚಿನ ಸಮಯ ಕೇಳಿದ್ದ ಕೇಂದ್ರ ಈ ಬಾರಿಯೂ ಅದೇ ತಂತ್ರಕ್ಕೆ ಮೊರೆ ಹೋಗಿದೆ. ಮೇ 3ರ ಬಳಿಕ ಎರಡು ವಾರ ಅಂದರೆ ಕರ್ನಾಟಕ ಚುನಾವಣೆ (ಮೇ 12) ಮುಗಿದಿರುತ್ತದೆ.

ಸುಪ್ರೀಂ ನಿರಾಕರಣೆ: ಆದರೆ, ಸುಪ್ರೀಂಕೋರ್ಟ್‌ ಕೇಂದ್ರದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದೆ. ''ನಾವು ತುಂಬ ಕಷ್ಟಪಟ್ಟು ಅಧ್ಯಯನ ನಡೆಸಿ ಈ ತೀರ್ಪನ್ನು ನೀಡಿದ್ದೇವೆ. ಅದಕ್ಕಾಗಿ ಸಾಕಷ್ಟು ಸಮಯ ವ್ಯಯಿಸಿದ್ದೇವೆ. ನೀವು ಈಗಾಗಲೇ ಸ್ಕೀಂ ರೂಪಿಸಬೇಕಿತ್ತು. ನೀವು ಮಾಡಿಲ್ಲ ಎನ್ನುವುದು ನಮಗೆ ಆಶ್ಚರ್ಯ ಉಂಟು ಮಾಡುತ್ತಿದೆ. ನೀವು ನಮ್ಮ ತೀರ್ಪನ್ನು ಜಾರಿಗೊಳಿಸಲೇಬೇಕು,'' ಎಂದು ಸಿಜೆಐ ಅವರು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರಿಗೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ