ಆ್ಯಪ್ನಗರ

ಭ್ರಷ್ಟಾಚಾರದ ಕಳಂಕ ಹೊತ್ತಿದ್ದ 12 ಹಿರಿಯ ಅಧಿಕಾರಿಗಳಿಗೆ ಗೇಟ್‌ಪಾಸ್‌

ಭ್ರಷ್ಟಾಚಾರ ಕಳಂಕ ಹೊತ್ತಿದ್ಧ 12 ಹಿರಿಯ ಅಧಿಕಾರಿಗಳನ್ನು ಆದಾಯ ತೆರಿಗೆ ಇಲಾಖೆ ಸೋಮವಾರ ಸೇವೆಯಿಂದ ಕಿತ್ತುಹಾಕಿದೆ.

PTI 11 Jun 2019, 5:00 am
ಹೊಸದಿಲ್ಲಿ: ವೃತ್ತಿ ಧರ್ಮ ಪಾಲಿಸದೇ ದುರ್ವರ್ತನೆ ತೋರಿದ ಹಾಗೂ ಭ್ರಷ್ಟಾಚಾರ ಕಳಂಕ ಹೊತ್ತಿದ 12 ಹಿರಿಯ ಅಧಿಕಾರಿಗಳನ್ನು ಆದಾಯ ತೆರಿಗೆ ಇಲಾಖೆ ಸೋಮವಾರ ಸೇವೆಯಿಂದ ಕಿತ್ತುಹಾಕಿದೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ, ಹಲವು ಪ್ರಕರಣಗಳಲ್ಲಿ ಪಾರು ಮಾಡಲು ಉದ್ಯಮಿಗಳಿಂದ ಲಂಚ ಪಡೆದ, ಅಧಿಕಾರ ದುರ್ಬಳಕೆ ಮಾಡಿಕೊಂಡು ಉದ್ಯಮಿಗಳನ್ನು ಸುಲಿಗೆ ಮಾಡಿದ, ಹವಾಲಾ ದಂಧೆಗೆ ಸಾಥ್‌ ನೀಡಿದ ಹೀಗೆ ಹಲವು ರೀತಿಯ ಕಳಂಕ ಹೊತ್ತಿದ ಆಯುಕ್ತರು, ಜಂಟಿ ಆಯುಕ್ತರು ಶ್ರೇಣಿಯ 12 ಹಿರಿಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ಹೇಳಿವೆ. ಜಂಟಿ ಆಯುಕ್ತರು ಶ್ರೇಣಿಯ ಅಧಿಕಾರಿಯೊಬ್ಬರ ಮೇಲೆ ಸ್ವಯಂ ಘೋಷಿತ ದೇವಮಾನವ ಚಂದ್ರಸ್ವಾಮಿಗೆ ಸಹಾಯ ಮಾಡಿದ ಉದ್ಯಮಿಯಿಂದ ಹಣ ವಸೂಲಿ ಮಾಡಿದ ಆರೋಪವಿತ್ತು. ನೊಯ್ಡಾದಲ್ಲಿ ಆಯುಕ್ತರ (ಮೇಲ್ಮನವಿ ಪ್ರಾಧಿಕಾರ) ಶ್ರೇಣಿಯ ಐಆರ್‌ಎಸ್‌ ಅಧಿಕಾರಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ಮತ್ತೊಬ್ಬ ಐಆರ್‌ಎಸ್‌ ಅಧಿಕಾರಿ ಮೇಲೆ 3.17 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆಯ ಪ್ರಕರಣ ದಾಖಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ