ಆ್ಯಪ್ನಗರ

ವಲಸೆ ಕಾರ್ಮಿಕರಿಂದ ಟಿಕೆಟ್ ದರ ವಸೂಲಿ ಮಾಡುವುದಾಗಿ ಹೇಳಿಯೇ ಇಲ್ಲ: ಕೇಂದ್ರ!

ವಲಸೆ ಕಾರ್ಮಿಕರಿಂದ, ಪ್ರವಾಸಿಗರಿಂದ ಹಾಗೂ ವಿದ್ಯಾರ್ಥಿಗಳಿಂದ ರೈಲು ಟಿಕೆಟ್ ದರ ವಸೂಲಿ ಮಾಡುವುದಾಗಿ ಕೇಂದ್ರ ಸರ್ಕಾರ ಎಲ್ಲಿಯೂ ಹೇಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಟಿಕೆಟ್ ದರಗಳನ್ನು ಶೇ.85ರಷ್ಟು ರೈಲ್ವೆ ಇಲಾಖೆ ಹಾಗೂ ಶೇ.15ರಷ್ಟು ರಾಜ್ಯ ಸರ್ಕಾರಗಳು ಭರಿಸುವ ಕುರಿತು ಒಪ್ಪಂದವಾಗಿದೆ ಎಂದು ಸರ್ಕಾರ ಹೇಳಿದೆ.

Vijaya Karnataka Web 4 May 2020, 6:04 pm
ನವದೆಹಲಿ: 'ಶ್ರಮಿಕ' ರೈಲುಗಳ ಟಿಕೆಟ್ ದರ ವಸೂಲಿ ಕುರಿತು ಭುಗಿಲೆದ್ದಿರುವ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ವಲಸೆ ಕಾರ್ಮಿಕರಿಂದ ಟಿಕೆಟ್ ದರ ವಸೂಲಿ ಮಾಡುವುದಾಗಿ ತಾನು ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
Vijaya Karnataka Web train
ಸಂಗ್ರಹ ಚಿತ್ರ


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್, ವಲಸೆ ಕಾರ್ಮಿಕರಿಂದ, ಪ್ರವಾಸಿಗರಿಂದ ಹಾಗೂ ವಿದ್ಯಾರ್ಥಿಗಳಿಂದ ರೈಲು ಟಿಕೆಟ್ ದರ ವಸೂಲಿ ಮಾಡುವುದಾಗಿ ಕೇಂದ್ರ ಸರ್ಕಾರ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಶ್ರಮಿಕ'ರಿಂದ ಟಿಕೆಟ್ ದರ: ಕೇಂದ್ರದ ನಡೆ ಟೀಕಿಸಿ ಸಚಿವರಿಂದ ಸ್ಪಷ್ಟತೆ ಪಡೆದುಕೊಂಡ ಸ್ವಾಮಿ!

'ಶ್ರಮಿಕ' ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರ ಮಾಡಿದಾಗಲೇ ರೈಲು ಟಿಕೆಟ್ ದರಗಳನ್ನು ಶೇ.85ರಷ್ಟು ರೈಲ್ವೆ ಇಲಾಖೆ ಹಾಗೂ ಶೇ.15ರಷ್ಟು ರಾಜ್ಯ ಸರ್ಕಾರಗಳು ಭರಿಸುವ ಕುರಿತು ಒಪ್ಪಂದವಾಗಿತ್ತು. ಈ ಮಧ್ಯೆ ವಲಸೆ ಕಾರ್ಮಿಕರಿಂದ ಹಣ ವಸೂಲಿ ಮಾಡುವ ಪ್ರಶ್ನೆ ಎಲ್ಲಿಂದ ಬಂತು ಎಂದು ಲವ್ ಅಗರ್‌ವಾಲ್ ಪ್ರಶ್ನಿಸಿದ್ದಾರೆ.


ವಲಸೆ ಕಾರ್ಮಿಕರಿಂದ ಎಲ್ಲಿಯೂ ರೈಲು ಟಿಕೆಟ್ ದರ ವಸೂಲಿ ಮಾಡುತ್ತಿಲ್ಲ. ಅವರನ್ನು ಉಚಿತವಾಗಿಯೇ ಅವರ ಸ್ವಂತ ರಾಜ್ಯಗಳಿಗೆ ಕಳುಹಿಸಲಾಗುತ್ತಿದ್ದು, ಈ ಕುರಿತು ಯಾವುದೇ ಗೊಂದಲ ಬೇಡ ಎಂದು ಲವ್ ಅಗರ್‌ವಾಲ್ ಮನವಿ ಮಾಡಿದರು.

ವಲಿಸಿಗರ ರೈಲು ಟಿಕೆಟ್ ದರ ಕಾಂಗ್ರೆಸ್ ಭರಿಸುತ್ತದೆ: ಕೇಂದ್ರದ ವಿರುದ್ಧ ಸೋನಿಯಾ ಗರಂ!

ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಂದ ರೈಲು ಟಿಕೆಟ್ ದರ ವಸೂಲಿ ಮಾಡುತ್ತಿದ್ದು, ಶ್ರಮಿಕರ ಟಿಕೆಟ್ ದರಗಳನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ