ಆ್ಯಪ್ನಗರ

ಆಸ್ಪತ್ರೆಗೆ ಸಾಗಿಸಲು ಕಾಪ್ಟರ್‌ ಸೇವೆ: ಕೇಂದ್ರ ಚಿಂತನೆ

ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ತಗ್ಗಿಸಲು ಕೇಂದ್ರ ಸರಕಾರದ ಹೊಸ ಯೋಜನೆ

Vijaya Karnataka Web 24 Apr 2018, 5:30 am
ಹೊಸದಿಲ್ಲಿ: ರಸ್ತೆ ಅಪಘಾತಗಳಲ್ಲಿ ಅಕಾಲಿಕ ಮರಣ ಹೊಂದುವವರ ಅಂಗಾಂಗಳನ್ನು ರಕ್ಷಿಸಿ ಇನ್ನೊಬ್ಬರಿಗೆ ಜೀವದಾನ ನೀಡುವ ಕೇಂದ್ರ ಸರಕಾರದ ಸಾಹಸಕ್ಕೆ ಸಾಥ್‌ ನೀಡಲು ಟಾಟಾ ಸಮೂಹದ ಟಿಸಿಎಸ್‌ ಮುಂದಾಗಿದೆ. ಅಂಗಾಂಗ ರಕ್ಷಣೆ ಜತೆಗೆ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್‌ ಸೇವೆ ಒದಗಿಸುವ ಪ್ರಸ್ತಾವವನ್ನೂ ಸಂಸ್ಥೆ ಸರಕಾರಕ್ಕೆ ಸಲ್ಲಿಸಿದೆ.
Vijaya Karnataka Web centre planning for heli ambulance
ಆಸ್ಪತ್ರೆಗೆ ಸಾಗಿಸಲು ಕಾಪ್ಟರ್‌ ಸೇವೆ: ಕೇಂದ್ರ ಚಿಂತನೆ


ಎಷ್ಟೆಲ್ಲ ಸುರಕ್ಷತಾ ಕ್ರಮಗಳ ಹೊರತಾಗಿಯೂ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ದಿಸೆಯಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸರಕಾರ ಚಿಂತನೆ ನಡೆಸಿದೆ. ಸಂಚಾರ ನಿರ್ವಹಣೆಗಾಗಿ ದಕ್ಷಿಣ ಕೊರಿಯಾ ಜತೆಗೂ ಕೈಜೋಡಿಸಲಾಗುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತುರ್ತು ಸೇವೆ: ಹೆದ್ದಾರಿ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಕಾಲಿಕ ತುರ್ತು ಚಿಕಿತ್ಸೆ ಕೊಡಿಸುವುದು ಮುಖ್ಯ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭಿಸದೆಯೇ ಸಾಯುವ ಗಾಯಾಳುಗಳ ಸಂಖ್ಯೆ ಹೆಚ್ಚು. ಇದನ್ನು ಗ್ರಹಿಸಿಯೇ ತುರ್ತು ಹೆಲಿಕಾಪ್ಟರ್‌ ಸೇವೆ ಒದಗಿಸಲು ಸರಕಾರ ತೀರ್ಮಾನಿಸಿದೆ. ಒಂದು ವೇಳೆ ಇಂತಹ ಘಟನೆಗಳಲ್ಲಿ ಸಾವು ಸಂಭವಿಸಿದರೆ ಅಂಥವರ ಅಂಗಾಂಗ ರಕ್ಷಣೆ ಮಾಡುಲೂ ವಿಶೇಷ ಆಸ್ಪತ್ರೆಗಳ ವ್ಯವಸ್ಥೆ ಇರುತ್ತದೆ. ಅಂಗಾಂಗ ದಾನ ಕಾರ್ಯಕ್ರಮದ ಜತೆ ಸಹಕಾರಿಸಲು ಟಾಟಾ ಕನ್‌ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌) ಉತ್ಸುಕತೆ ತೋರಿದೆ. ಗಾಯಾಳುಗಳ ತುರ್ತು ಚಿಕಿತ್ಸೆಗೆ ಹೆಲಿಕಾಪ್ಟರ್‌ ಸೇವೆ ಒದಗಿಸುವ ಭರವಸೆ ನೀಡಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ರಸ್ತೆ ಬದಿ ಸವಲತ್ತು: ''ರಸ್ತೆ ಮಗ್ಗುಲಲ್ಲಿ 750 ಕೇಂದ್ರಗಳನ್ನು ಸ್ಥಾಪಿಸಿ ಪ್ರಯಾಣಿಕರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುವುದು. ರೆಸ್ಟೋರೆಂಟ್‌, ಶೌಚಾಲಯ, ಮನರಂಜನೆ, ವಿರಾಮ ಕೊಠಡಿ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿ ಸೇರಿವೆ. ಗಾಯಾಳುಗಳ ನೆರವಿನ ಹೆಲಿಪ್ಯಾಡ್‌ ಕೂಡ ಇದರದ್ದೇ ಭಾಗ,'' ಎಂದರು.

ದೇಶದಲ್ಲಿ ಪ್ರತಿವರ್ಷ ವರ್ಷಕ್ಕೆ ಘಟಿಸುವ ಸರಾಸರಿ ರಸ್ತೆ ಅಪಘಾತಗಳ ಸಂಖ್ಯೆ ಐದು ಲಕ್ಷಕ್ಕೂ ಮೇಲಿದೆ. ಭಾರತದಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಸಂಭವಿಸುತ್ತಿರುವ ಸರಾಸರಿ ಮರಣ ಸಂಖ್ಯೆ 1,50,000 ಎಂದು ವರದಿಗಳಲ್ಲಿ ತಿಳಿಸಲಾಗಿದೆ.

* ಹೆದ್ದಾರಿಗಳಲ್ಲಿ ಸುರಕ್ಷಿತ ಸಂಚಾರ ವ್ಯವಸ್ಥೆ ನಿರ್ವಹಣೆ ಕುರಿತು ದಕ್ಷಿಣ ಕೊರಿಯಾ ಜತೆ ಮುಂದಿನ ತಿಂಗಳು ಒಪ್ಪಂದ
* ಜಗತ್ತಿನ ಒಟ್ಟು ವಾಹನ ಸಂಖ್ಯೆಯ ಶೇ.1ರಷ್ಟು ಮಾತ್ರ ಭಾರತದಲ್ಲಿದ್ದರೂ ಸಾವಿನ ಸಂಖ್ಯೆಯಲ್ಲಿ ಮಾತ್ರ ಇದರ ಪ್ರಮಾಣ ಶೇ.10 ದಾಟುತ್ತದೆ.
* ಗಾಯಾಳುಗಳನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ರವಾನಿಸುವ ಯೋಜನೆಗೆ ಟಿಸಿಎಸ್‌ ಸಹಭಾಗಿತ್ವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ