ಆ್ಯಪ್ನಗರ

ಕೊಲಿಜಿಯಂ ಬಡ್ತಿ ಪ್ರಸ್ತಾವ ತಿರಸ್ಕಾರ: ನ್ಯಾ. ಬೋಪಣ್ಣ ಹೆಸರು ವಾಪಸ್‌

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಕೊಲಿಜಿಯಂ ಸೂಚಿಸಿದ್ದ ಹೈಕೋರ್ಟ್‌ನ ಇಬ್ಬರು ಜಡ್ಜ್‌ಗಳ ಹೆಸರನ್ನು ಕೇಂದ್ರ ಸರಕಾರ ವಾಪಸ್‌ ಕಳುಹಿಸಿದೆ...

Vijaya Karnataka Web 8 May 2019, 8:28 am
ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಕೊಲಿಜಿಯಂ ಸೂಚಿಸಿದ್ದ ಹೈಕೋರ್ಟ್‌ನ ಇಬ್ಬರು ಜಡ್ಜ್‌ಗಳ ಹೆಸರನ್ನು ಕೇಂದ್ರ ಸರಕಾರ ವಾಪಸ್‌ ಕಳುಹಿಸಿದೆ.
Vijaya Karnataka Web Justice Bopanna and Justice Bose


ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾ. ಅನಿರುದ್ಧ್‌ ಬೋಸ್‌, ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾ. ಎ.ಎಸ್‌. ಬೋಪಣ್ಣ ಅವರ ಹೆಸರನ್ನು ಸರಕಾರ ಒಪ್ಪಿಲ್ಲ , ಶಿಫಾರಸ್ಸು ತಿರಸ್ಕಾರಕ್ಕೆ ಸೇವಾ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯತೆಯ ಕಾರಣಗಳನ್ನು ಸರಕಾರ ನೀಡಿದೆ ಎಂದು ತಿಳಿದುಬಂದಿದೆ. ಅಖಿಲ ಭಾರತ ನ್ಯಾಯಮೂರ್ತಿಗಳ ಸೇವಾ ಹಿರಿತನದಲ್ಲಿ ನ್ಯಾ. ಬೋಸ್‌ 12ನೇ ಸ್ಥಾನದಲ್ಲಿದ್ದಾರೆ. ನ್ಯಾ. ಬೋಪಣ್ಣ 36ನೇ ಸ್ಥಾನ ಹೊಂದಿದ್ದಾರೆ. ನ್ಯಾ. ಬೋಸ್‌ ಮೂಲತಃ ಕೋಲ್ಕೊತಾ ಹೈಕೋರ್ಟ್‌ನವರಾದರೆ, ನ್ಯಾ. ಬೋಪಣ್ಣ ಕರ್ನಾಟಕ ಹೈಕೋರ್ಟ್‌ನವರು.

ಕಳೆದ ವರ್ಷ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ. ಬೋಸ್‌ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದಾಗಲೂ ಸರಕಾರ ಒಪ್ಪಿರಲಿಲ್ಲ. ಏ.12ರಂದು ಈ ಇಬ್ಬರು ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಸರಕಾರಕ್ಕೆ ಕೊಲಿಜಿಯಂ ಶಿಫಾರಸು ಮಾಡಿತ್ತು. ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಸಮಾನ ಅವಕಾಶ ನೀಡಲು ಕೊಲಿಜಿಯಂ ತೀರ್ಮಾನಿಸಿದೆ. ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಕೋಲ್ಕೊತಾ ಹೈಕೋರ್ಟ್‌ನ್ನು ನ್ಯಾ. ಇಂದಿರಾ ಬ್ಯಾನರ್ಜಿ ಪ್ರತಿನಿಧಿಸುತ್ತಿದ್ದಾರೆ. ನ್ಯಾ. ಎಸ್‌.ಎಮ್‌. ಮಲ್ಲಿಕಾರ್ಜುನಗೌಡ, ನ್ಯಾ. ಎಸ್‌. ಅಬ್ದುಲ್‌ ನಜೀರ್‌ ಕರ್ನಾಟಕ ಹೈಕೋರ್ಟ್‌ ಪ್ರತಿನಿಧಿಸಿದ್ದಾರೆ.

ಸಿಜೆಐ ಸೇರಿದಂತೆ ಒಟ್ಟು 31 ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನಲ್ಲಿರಬೇಕು. ಸದ್ಯ 27 ನ್ಯಾಯಮೂರ್ತಿಗಳು ಮಾತ್ರ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ