ಆ್ಯಪ್ನಗರ

ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ವಿರೋಧ ಬಂದರೆ ಮನೆಗೆ ಕಳುಹಿಸಲು ನಿರ್ಧಾರ

ಸರಕಾರಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ವಾರಕ್ಕೆರಡು ಬಾರಿ ಮೊಟ್ಟೆ, ಹಾಲು ಇಲ್ಲವೇ ಅಷ್ಟೇ ಪೋಷಕಾಂಶ ಹೊಂದಿರುವ ಇನ್ನೊಂದು ಆಹಾರವನ್ನು ಮಕ್ಕಳಿಗೆ ನೀಡಲು ಕಳೆದ ಜನವರಿಯಲ್ಲಿ ಶಿಕ್ಷಣ ಇಲಾಖೆ ಸಲಹೆ ನೀಡಿತ್ತು. ಈ ಬಗ್ಗೆ ಪೋಷಕರ ಸಲಹೆಯನ್ನು ಪಡೆಯಲು ನಿರ್ಧರಿಸಲಾಗಿತ್ತು. ಈ ನಡುವೆ ಕೆಲವು ಸಸ್ಯಾಹಾರಿ ಪೋಷಕರು ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮೊಟ್ಟೆಯನ್ನು ಮನೆಗೇ ಕಳುಹಿಸುವ ಚಿಂತನೆಗೆ ಬರಲಾಗಿದೆ.

Agencies 18 Jul 2019, 5:00 am
ರಾಯಪುರ: ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡುವುದಕ್ಕೆ ಸಸ್ಯಾಹಾರಿ ಪೋಷಕರು ವಿರೋಧಿಸಿದರೆ, ವಿರೋಧವಿಲ್ಲದ ಪೋಷಕರ ಮಕ್ಕಳಿಗೆ ಮನೆಗೇ ಮೊಟ್ಟೆ ಕಳುಹಿಸಲು ಛತ್ತೀಸ್‌ಗಢದ ಕಾಂಗ್ರೆಸ್‌ ಸರಕಾರ ನಿರ್ದೇಶಿಸಿದೆ.
Vijaya Karnataka Web cgarh if vegetarians oppose other kids to get eggs at home
ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ವಿರೋಧ ಬಂದರೆ ಮನೆಗೆ ಕಳುಹಿಸಲು ನಿರ್ಧಾರ


ಸರಕಾರಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ವಾರಕ್ಕೆರಡು ಬಾರಿ ಮೊಟ್ಟೆ, ಹಾಲು ಇಲ್ಲವೇ ಅಷ್ಟೇ ಪೋಷಕಾಂಶ ಹೊಂದಿರುವ ಇನ್ನೊಂದು ಆಹಾರವನ್ನು ಮಕ್ಕಳಿಗೆ ನೀಡಲು ಕಳೆದ ಜನವರಿಯಲ್ಲಿ ಶಿಕ್ಷಣ ಇಲಾಖೆ ಸಲಹೆ ನೀಡಿತ್ತು. ಈ ಬಗ್ಗೆ ಪೋಷಕರ ಸಲಹೆಯನ್ನು ಪಡೆಯಲು ನಿರ್ಧರಿಸಲಾಗಿತ್ತು. ಈ ನಡುವೆ ಕೆಲವು ಸಸ್ಯಾಹಾರಿ ಪೋಷಕರು ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮೊಟ್ಟೆಯನ್ನು ಮನೆಗೇ ಕಳುಹಿಸುವ ಚಿಂತನೆಗೆ ಬರಲಾಗಿದೆ.

ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿ, ಪ್ರತ್ಯೇಕವಾಗಿ ಬೇಯಿಸಿದ ಮೊಟ್ಟೆಯನ್ನು ವಿತರಿಸಲು ಅವಕಾಶವಿದ್ದರೆ ಹಾಗೆ ಮಾಡಬಹುದು. ಒಂದೊಮ್ಮೆ ಅಂತ ಅವಕಾಶ ಇಲ್ಲದಿದ್ದರೆ ಮನೆಗೇ ಕಳುಹಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಪ್ರಮುಖವಾಗಿ ಕಬೀರ್‌ ಪಂಥಿ ಸಮುದಾಯ ಮೊಟ್ಟೆ ವಿತರಣೆಯನ್ನು ಆಕ್ಷೇಪಿಸಿತ್ತು. ಬಿಜೆಪಿ ಈ ಧಾರ್ಮಿಕ ಭಾವನೆಯನ್ನು ಗೌರವಿಸಬೇಕು ಎಂದು ಹೇಳಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ