ಕೊಂಡಗಾಂವ್: ಭದ್ರತಾ ಪಡೆಗಳು ಛತ್ತೀಸ್ಗಢದ ಕೊಂಡಗಾಂವ್ ಜಿಲ್ಲೆಯ ತುಷ್ವಾಲ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ನಕ್ಸಲರ ಶಿಬಿರದ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ತುಷ್ವಾಲ್ ಗ್ರಾಮದ ಅರಣ್ಯದಲ್ಲಿ ನಕಲ್ಸರ ಶಿಬಿರ ಸಕ್ರಿಯವಾಗಿರುವ ಮಾಹಿತಿಯ ಜಾಡು ಹಿಡಿದು ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಮತ್ತು ವಿಶೇಷ ಕ್ಷಿಪ್ರ ಕಾರ್ಯಪಡೆ (ಎಸ್ಟಿಎಫ್) ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಿಬಿರವನ್ನು ಧ್ವಂಸಗೊಳಿಸಿದೆ. ಭದ್ರತಾ ಪಡೆಗಳ ದಾಳಿಗೆ ಬೆಚ್ಚಿದ ಕೆಂಪು ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳದಿಂದ 30 ನಾಡ ಗ್ರೆನೇಡ್ಗಳು, ಒಂದು ಪೈಪ್ ಬಾಂಬ್, ಏರ್ ಗನ್ನಲ್ಲಿ ಬಳಸುವ ಸಿಪ್ಲಿಂಟ್ಲರ್ಸ್ ಪ್ಯಾಕೆಟ್ ಮತ್ತು ಕೆಜಿಗಟ್ಟಲೆ ವೈರ್ ಹಾಗೂ ಇಂಗ್ಲಿಷ್, ಹಿಂದಿ, ತೆಲುಗು ಭಾಷೆಯಲ್ಲಿರುವ ನಕ್ಸಲ್ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಕ್ಸಲರ ಶಿಬಿರದ ಮೇಲೆ ದಾಳಿ
ಭದ್ರತಾ ಪಡೆಗಳ ದಾಳಿಗೆ ಬೆಚ್ಚಿದ ಕೆಂಪು ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ.
Vijaya Karnataka 26 Mar 2019, 10:13 pm