ಆ್ಯಪ್ನಗರ

ಚಂದ್ರಯಾನ 2: ಲ್ಯಾಂಡಿಂಗ್‌ ತೊಂದರೆ ಅಧ್ಯಯನಕ್ಕೆ ಸಮಿತಿ ರಚನೆ

ಚಂದ್ರಯಾನ-2 ಕೊನೆಯಲ್ಲಿ ವಿಕ್ರಮ್‌ ಲ್ಯಾಂಡರ್‌ನ ಸಾಫ್ಟ್‌ ಲ್ಯಾಂಡಿಂಗ್‌ ಸಮಸ್ಯೆ ಯಾಕಾಯಿತು ಎನ್ನುವ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲು ರಾಷ್ಟ್ರ ಮಟ್ಟದ ಸಮಿತಿ ಒಂದನ್ನು ರಚಿಸಲಾಗಿದೆ

Vijaya Karnataka 26 Sep 2019, 11:29 pm
ಅಹಮದಾಬಾದ್‌: ಚಂದ್ರಯಾನ-2 ಕೊನೆಯ ಗಳಿಗೆಯಲ್ಲಿ ವಿಕ್ರಮ್‌ ಲ್ಯಾಂಡರ್‌ನ ಸಾಫ್ಟ್‌ ಲ್ಯಾಂಡಿಂಗ್‌ ಸಮಸ್ಯೆ ಯಾಕಾಯಿತು ಎನ್ನುವುದರ ಕುರಿತಾಗಿ ವಿಸ್ತೃತ ಅಧ್ಯಯನ ನಡೆಸಲು ರಾಷ್ಟ್ರ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
Vijaya Karnataka Web chandrayan 2


ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ ಬಳಿಕವೇ ಭವಿಷ್ಯದ ಚಂದ್ರಯಾನದ ಬಗ್ಗೆ ಸಿದ್ಧತೆ ನಡೆಸಲಾಗುವುದು ಎಂದು ಇಸ್ರೊ ಮುಖ್ಯಸ್ಥ ಕೆ. ಶಿವನ್‌ ಹೇಳಿದ್ದಾರೆ.

ಇಸ್ರೋ ಬಾಹುಬಲಿ ಬಗ್ಗೆ ನಿಮಗೆಷ್ಟು ಗೊತ್ತು

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿಭಾಗವಹಿಸಲು ಆಗಮಿಸಿದ್ದ ಅವರು, ಮುಂದಿನ ಚಂದ್ರಯಾನಕ್ಕೆ ಅನುಮತಿ ಪಡೆಯಲು ಸಾಕಷ್ಟು ಪ್ರಕ್ರಿಯೆಗಳು ಇರುತ್ತವೆ. ಅದೆಲ್ಲವನ್ನೂ ಪಡೆದ ಬಳಿಕ ಘೋಷಣೆ ಮಾಡಲಾಗುವುದು ಎಂದರು. ಚಂದ್ರಯಾನ-2ರಲ್ಲಿದ್ದ ಆರ್ಬಿಟರ್‌ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಶಿವನ್‌ ಹೇಳಿದ್ರು.

ಮಾನವ ಸಹಿತ ಗಗನಯಾನ ಇಸ್ರೊ ಪಾಲಿಗೆ ಅತ್ಯಂತ ಮಹತ್ವದ ಕಾರ್ಯಾಚರಣೆಯಾಗಿದ್ದು, ಅದಕ್ಕಾಗಿ ಕಠಿಣ ಪರಿಶ್ರಮ ಪಡಲಾಗುತ್ತಿದೆ . 2022ಕ್ಕೆ ನಿಗದಿಯಾಗಿರುವ ಗಗನಯಾನದಲ್ಲಿ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಶಿವನ್‌ ತಿಳಿಸಿದರು.

ಚಂದ್ರಯಾನ 2 ಕ್ಕೆ ತೊಡಕಾಗಿದ್ದೇನು?: ಚಂದ್ರನ ಕಾಣದ ಮುಖದಲ್ಲಿವೆ ಹಲವು ರಹಸ್ಯಗಳು!!

ಚಂದ್ರಯಾನ-2 ಭಾರತೀಯ ವಿಜ್ಞಾನಿಗಳ ಪಾಲಿಗೆ ಒಂದು ಕಲಿಕೆ ಅನುಭವವಾಗಿದ್ದು, ಚಂದ್ರನ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಲು ಇಸ್ರೊಗೆ ಸಹಾಯ ಮಾಡಿದೆ ಎಂದು ನಾಸಾದಲ್ಲಿ ಗಗನನೌಕೆ ಸಿಸ್ಟಮ್‌ ಎಂಜಿನಿಯರ್‌ ಆಗಿರುವ ಆ್ಯನಿ ಡೆವೆರೆಕ್ಸ್‌ ಹೇಳಿದ್ದಾರೆ.

ವಿಶ್ವದ ಕುತೂಹಲಕ್ಕೆ ಕಾರಣವಾಗಿದ್ದ ಚಂದ್ರಯಾನ-2 ಯೋಜನೆ ಅಂತಿಮ ಘಟ್ಟದಲ್ಲಿ ಎಡವಿತ್ತು. ಚಂದ್ರನ ಅಂಗಳಕ್ಕೆ ಇಳಿಯುವ ಕೆಲ ಕ್ಷಣಗಳ ಮೊದಲ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ