ಆ್ಯಪ್ನಗರ

ಭಾರತೀಯ ಜಾಣ್ಮೆ, ದೃಢತೆಯನ್ನು ವಿಶ್ವಕ್ಕೆ ತೆರೆದಿಟ್ಟ ಚಂದ್ರಯಾನ 2: ಪ್ರಧಾನಿ ಮೋದಿ

ವಿಕ್ರಂ ಲ್ಯಾಂಡರ್‌ ಚಂದ್ರನಲ್ಲಿ ಇಳಿಯಲು ಸಜ್ಜಾಗಿದೆ. ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಪ್ರಧಾನಿ ಮೋದಿ ಸರಣಿ ಟ್ವೀ ಟ್‌ ಮೂಲಕ ಇಸ್ರೋ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

TIMESOFINDIA.COM 6 Sep 2019, 7:21 pm
ಹೊಸದಿಲ್ಲಿ: ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್‌ ವಿಕ್ರಮ್‌ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶದ ಜನತೆ ಕಾತರದಿಂದ ಕಾದಿದ್ದಾರೆ. ವಿಕ್ರಮ್ ಲ್ಯಾಂಡಿಂಗ್‌ ಸೇರಿದಂತೆ ಎಲ್ಲವೂ ಯೋಜಿಸಿದಂತೆ ಸುಸೂತ್ರವಾಗಿ ಸಾಗುತ್ತಿದೆ. ಇಸ್ರೋದ ಈ ಐತಿಹಾಸಿಕ ಸಾಧನೆಯನ್ನು ಪ್ರಧಾನಿ ಮೋದಿ ಸರಣಿ ಟ್ವೀಟ್‌ಗಳ ಮೂಲಕ ಶ್ಲಾಘಿಸುತ್ತಿದ್ದಾರೆ. ಇಸ್ರೋದ ಚಂದ್ರಯಾನ ಮಿಷನ್‌ ಭಾರತದ ಜಾಣ್ಮೆ ಮತ್ತು ದೃಢತೆ ಇಡೀ ವಿಶ್ವಕ್ಕೆ ತೆರೆದಿಟ್ಟಿದೆ. ಚಂದ್ರಯಾನ-2ರ ಯಶಸ್ಸಿನಿಂದ ದೇಶದ ಕೋಟ್ಯಂತರ ಜನತೆಗೆ ಲಾಭವಾಗಲಿದೆ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.
Vijaya Karnataka Web isro offiece


ಚಂದ್ರಯಾನ 2 ಜುಲೈ 22ರಂದು ಉಡಾವಣೆಯಾದ ದಿನದಿಂದಲೇ ಪ್ರತಿದಿನವೂ ಮಾಹಿತಿ ಪಡೆಯುತ್ತಿದ್ದೇನೆ . ಲ್ಯಾಂಡರ್‌ ವಿಕ್ರಮ್ ಚಂದ್ರನ ದಕ್ಷಿಣ ಧ್ರುವದ ಮೇಲಿಳಿಯುವುದನ್ನು ಎಲ್ಲರೂ ನೋಡಬೇಕು. ವೀಕ್ಷಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ. ಆವುಗಳಲ್ಲಿ ಆಯ್ದ ಕೆಲ ಫೋಟೋಗಳನ್ನು ಮತ್ತೆ ಟ್ವಿಟರ್‌ನಲ್ಲಿ ಪ್ರಕಟಿಸುತ್ತೇನೆ ಎಂದಿದ್ದಾರೆ.




ನಾನು ಕೂಡ ವಿಕ್ರಮ್ ಲ್ಯಾಂಡರ್‌ ಚಂದ್ರನಲ್ಲಿ ಇಳಿಯುವುದನ್ನು ಇಸ್ರೋ ಕೇಂದ್ರದಿಂದ ವೀಕ್ಷಿಸಲಿದ್ದೇನೆ. ಇಸ್ರೋ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಯುವಕರು ನನ್ನೊಟ್ಟಿಗೆ ಇರಲಿದ್ದಾರೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅಷ್ಟು ದೊಡ್ಡ ಸಂಖ್ಯೆಯ ಸ್ಪರ್ಧಿಗಳು ಭಾಗವಹಿಸಿರುವುದು ಶುಭ ಸಂಕೇತ ಎಂದು ಮೋದಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ