ಆ್ಯಪ್ನಗರ

ಶೇ.98 ಯಶಸ್ವಿಯಾಯ್ತು ಚಂದ್ರಯಾನ ಮಿಷನ್‌ : ಇಸ್ರೋ ಅಧ್ಯಕ್ಷ ಕೆ.ಶಿವನ್‌ ಖಾತರಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಚಂದ್ರಯಾನ-2ಯೋಜನೆ ಬಹುಪಾಲು ಯಶಸ್ವಿಯಾದಂತಾಗಿದೆ. ಯೋಜನೆ ಶೇ.98ರಷ್ಟು ಉದ್ದೇಶಗಳು ಈಡೇರಿವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್‌ ಶನಿವಾರ ಖಾತರಿಪಡಿಸಿದ್ದಾರೆ. ವಿಜ್ಞಾನಿಗಳು ಲ್ಯಾಂಡರ್‌ ವಿಕ್ರಂ ಸಂಪರ್ಕಕ್ಕೆ ಪ್ರಯತ್ನ ನಡಸಿಯೇ ಇದ್ದಾರೆ.

Vijaya Karnataka Web 21 Sep 2019, 5:13 pm
ಭುವನೇಶ್ವರ: ಚಂದ್ರಯಾನ-2ಯೋಜನೆಯ ಉದ್ದೇಶಗಳು ಶೇ.98ರಷ್ಟು ಈಡೇರಿವೆ. ಆದರೂ ವಿಜ್ಞಾನಿಗಳು ಲ್ಯಾಂಡರ್‌ ವಿಕ್ರಂ ಜತೆಗೆ ಸಂಪರ್ಕ ಸಾಧಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಧ್ಯಕ್ಷ ಕೆ.ಶಿವನ್‌ ತಿಳಿಸಿದ್ದಾರೆ. ಭುವನೇಶ್ವರ ಐಐಟಿಯ 8ನೇ ಘಟಿಕೋತ್ಸವಕ್ಕೆ ಪಾಲ್ಗೊಳ್ಳಲು ಆಗಮಿಸಿದ್ದ ಕೆ.ಶಿವನ್‌ ಭುವನೇಶ್ವ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
Vijaya Karnataka Web k shivan


ಚಂದ್ರಯಾನ 2ರ ಕಕ್ಷಾಗಾಮಿ (ಆರ್ಬಿಟರ್) ಉತ್ತಮವಾಗಿದ್ದು, ಅದಕ್ಕೆ ನಿಯೋಜಿಸಿದ್ದ ಪ್ರಯೋಗಗಳಲ್ಲಿ ನಿರತವಾಗಿದೆ. ಚಂದ್ರಯಾನ 2 ಎರಡು ನಿಟ್ಟಿನಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಒಂದು ವಿಜ್ಞಾನದಲ್ಲಿ ಮತ್ತೊಂದು ತಂತ್ರಜ್ಞಾನ. ತಂತ್ರಜ್ಞಾನದ ದೃಷ್ಟಿಯಲ್ಲಿ ಹೇಳುವುದಾದರೆ, ಚಂದ್ರಯಾನ 2 ಶೇ.98ರಷ್ಟು ಯಶಸ್ವಿಯಾಗಿದೆ ಎಂದು ಹೇಳಿದರು.

ಇಸ್ರೋ 2020ರಲ್ಲಿ ಮತ್ತೊಂದು ಚಂದ್ರಯಾನ ಕೈಗೊಳ್ಳಲಿದೆ. ಈ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಮುಂದಿನ ವರ್ಷ ಮಾನವರಹಿತ ಚಂದ್ರಯಾನ ನಮ್ಮ ಮೊ ದಲ ಆಧ್ಯತೆಯಾಗಿದೆ. ಅದಕ್ಕೂ ಮೊದಲು ನಾವು ಚಂದ್ರ ಯಾನ 2ರ ಲ್ಯಾಂಡರ್‌ ವಿಕ್ರಂಗೆ ಏನಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಚಂದ್ರಯಾನ 2 ರ ಲ್ಯಾಂಡರ್‌ ವಿಕ್ರಮ್ ಇನ್ನೇನು ಚಂದ್ರನಲ್ಲಿ ಇಳಿದೇಬಿಟ್ಟಿತು ಎನ್ನುವಷ್ಟರಲ್ಲಿ ಸಂಪರ್ಕ ಕಳೆದುಕೊಂಡು ಕುಸಿದಿಬಿದ್ದಿತ್ತು. ಇದಾದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಕ್ರಂ ಜತೆ ಮತ್ತೆ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಲೇ ಇದ್ದಾರೆ. ಹೀಗಿರುವಾಗ ಅಮೆರಿಕದ ' ನ್ಯಾಷನಲ್‌ ಏರೋನಾಟಿಕ್ಸ್‌ ಆಂಡ್‌ ಸ್ಪೇಸ್‌ ಅಡ್ಮಿನಿಸ್ಟ್ರೇಷನ್‌ (ನಾಸಾ) ಕೂಡ ವಿಕ್ರಂನನ್ನು ಸಂಪರ್ಕಿಸಲು ಪ್ರಯತ್ನಿಸಿತ್ತು. ಡೀಪ್‌-ಸ್ಪೇಸ್‌ ಆಂಟೆನಾಗಳ ಮೂಲಕ 'ಹೆಲೋ' ಸಂದೇಶ ಕಳುಹಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ