ಆ್ಯಪ್ನಗರ

ಕೇಜ್ರಿವಾಲ್‌ ವಿರುದ್ಧ ಚಾರ್ಜ್‌ಶೀಟ್‌

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದಲ್ಲಿ ಫೆಬ್ರವರಿ 19ರಂದು ನಡೆದ ಸಭೆಯ ವೇಳೆ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ 13 ಆಪ್‌ ಶಾಸಕರ ಮೇಲೆ ದಿಲ್ಲಿ ಪೊಲೀಸರು ಚಾರ್ಜ್‌ಶೀಟ್‌ ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಕೇಜ್ರಿವಾಲ್‌ ಮತ್ತು ಡಿಸಿಎಂ ಮನೀಷ್‌ ಸಿಸೋಡಿಯಾ ಅವರೂ ಸೇರಿದ್ದಾರೆ.

Vijaya Karnataka 14 Aug 2018, 9:55 am
ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದಲ್ಲಿ ಫೆಬ್ರವರಿ 19ರಂದು ನಡೆದ ಸಭೆಯ ವೇಳೆ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ 13 ಆಪ್‌ ಶಾಸಕರ ಮೇಲೆ ದಿಲ್ಲಿ ಪೊಲೀಸರು ಚಾರ್ಜ್‌ಶೀಟ್‌ ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಕೇಜ್ರಿವಾಲ್‌ ಮತ್ತು ಡಿಸಿಎಂ ಮನೀಷ್‌ ಸಿಸೋಡಿಯಾ ಅವರೂ ಸೇರಿದ್ದಾರೆ.
Vijaya Karnataka Web arvind kejriwal


ಅಮಾನತುಲ್ಲಾ ಖಾನ್‌, ಪ್ರಕಾಶ್‌ ಜರ್ವಾಲ್‌, ನಿತಿನ್‌ ತ್ಯಾಗಿ, ರಿತುರಾಜ್‌ ಗೋವಿಂದ್‌, ಸಂಜೀವ್‌ ಝಾ, ಅಜಯ್‌ ದತ್‌, ರಾಜೇಶ್‌ ರಿಶಿ, ರಾಜೇಶ್‌ ಗುಪ್ತಾ, ಮದನ್‌ ಲಾಲ್‌, ಪರ್ವೀನ್ ಕುಮಾರ್‌ ಮತ್ತು ದಿನೇಶ್‌ ಮಹಾನಿಯಾ ದೋಷಾರೋಪಕ್ಕೆ ಒಳಗಾದ ಇತರರು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಸಮರ್‌ ವಿಶಾಲ್‌ ಅವರು ಆಗಸ್ಟ್‌ 25ರಂದು ದೋಷಾರೋಪ ಪರಿಶೀಲನೆಗೆ ದಿನ ನಿಗದಿ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಮೇ 18ರಂದು ಕೇಜ್ರಿವಾಲ್‌ ಅವರನ್ನು ಮೂರು ಗಂಟೆ ಕಾಲ ವಿಚಾರಣೆ ನಡೆಸಿದ್ದರು. ಇಬ್ಬರು ಆಪ್‌ ಶಾಸಕರಾದ ಅಮಾನತುಲ್ಲಾ ಖಾನ್‌ ಮತ್ತು ಪ್ರಕಾಶ್‌ ಜರ್ವಾಲ್‌ ಅವರ ಬಂಧನವೂ ನಡೆದಿತ್ತು.

ಈ ಹಲ್ಲೆ ಪ್ರಕರಣ, ದಿಲ್ಲಿ ಸರಕಾರ ಮತ್ತು ಆಡಳಿತದ ನಡುವೆ ಭಾರಿ ಕಂದಕವನ್ನೇ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ