ಆ್ಯಪ್ನಗರ

'ಶಾಕಿಂಗ್' ನ್ಯೂಸ್, ಕಂಬ ಹತ್ತಿ ಪ್ರಾಣ ಬಿಟ್ಟ ಚಿರತೆ

ಚಿರತೆಯೊಂದು ಕರೆಂಟ್ ಕಂಬ ಏರಿ ಶಾಕ್‌ನಿಂದಾಗಿ ಮೃತಪಟ್ಟಿರುವ ಘಟನೆ ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮಲ್ಲಾರಾಮ್ ಅರಣ್ಯ ಪ್ರದೇಶದಲ್ಲಿ ಈ ವಿಷಾದಕರ ಘಟನೆ ಸಂಭವಿಸಿದೆ.

ಏಜೆನ್ಸೀಸ್ 3 Jul 2017, 6:29 pm
ನಿಜಾಮಾಬಾದ್: ಚಿರತೆಯೊಂದು ಕರೆಂಟ್ ಕಂಬ ಏರಿ ಶಾಕ್‌ನಿಂದಾಗಿ ಮೃತಪಟ್ಟಿರುವ ಘಟನೆ ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮಲ್ಲಾರಾಮ್ ಅರಣ್ಯ ಪ್ರದೇಶದಲ್ಲಿ ಈ ವಿಷಾದಕರ ಘಟನೆ ಸಂಭವಿಸಿದೆ.
Vijaya Karnataka Web cheetah burnt to death on electric pole in nizamabad
'ಶಾಕಿಂಗ್' ನ್ಯೂಸ್, ಕಂಬ ಹತ್ತಿ ಪ್ರಾಣ ಬಿಟ್ಟ ಚಿರತೆ


ಕರೆಂಟ್ ಕಂಬದ ಮೇಲೆ ವೈಯರ್‌ಗಳಿಗೆ ನೇತು ಬಿದ್ದಿದ್ದ ಚಿರತೆಯನ್ನು ನೋಡಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಜೀವಂತ ಚಿರತೆ ಕಂಬ ಏರಿ ಪ್ರಾಣಬಿಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಆದರೆ ಚಿರತೆ ಹೇಗೆ ಕಂಬ ಹತ್ತಿತು, ಹಾಗೂ ಅದು ಶಾಕ್‌ನಿಂದ ಪ್ರಾಣ ಕಳೆದುಕೊಂಡಿರುವ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿರತೆ ಕಂಬ ಹತ್ತಿದ ಸಮಯದಲ್ಲಿ ವಿದ್ಯುತ್ ಇರಲಿಲ್ಲ ಎನ್ನಲಾಗಿದ್ದು, ಇಷ್ಟಕ್ಕೂ ಅದು ಕಂಬ ಯಾಕೆ ಹತ್ತಿತು ಎಂಬ ಪ್ರಶ್ನೆ ಮಾತ್ರ ನಿಗೂಢವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ