ಆ್ಯಪ್ನಗರ

ಚೀನಾ ಮನ ಗೆದ್ದ ಭಾರತ: ವಾಣಿಜ್ಯ ಸಮರ, ಗಡಿ ಗಲಾಟೆ ಮೀರಿ ನಿಲ್ಲಲಿದೆ ಬಾಂಧವ್ಯ

ಮೋದಿ- ಜಿನ್‌ಪಿಂಗ್ ಆಪ್ತ ಸಂವಾದದಿಂದ ವಿಶ್ವಾಸ ವರ್ಧನೆ, ಜಗತ್ತಿನ ಎರಡನೇ ದೊಡ್ಡ ಆರ್ಥಿಕತೆಯ ಮೇಲಿನ ಮೌನ ವಿಜಯವಿದು....

Vijaya Karnataka 13 Oct 2019, 7:03 am
ಮಹಾಬಲಿಪುರಂ: ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ಮಹಾಬಲಿಪುರಂನಲ್ಲಿ ನಡೆದ ಅನೌಪಚಾರಿಕ ಶೃಂಗ ಸಭೆ ಅನೌಪಚಾರಿಕವಾಗಿಯೇ ಎರಡು ದೇಶಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲಿದೆ.
Vijaya Karnataka Web XI- Modi



ಅದಕ್ಕಿಂತಲೂ ಹೆಚ್ಚಾಗಿ ಭಾರತ ಈ ಪ್ರಕ್ರಿಯೆಯಲ್ಲಿ ಚೀನಾದ ಮನವನ್ನು ಗೆದ್ದಿದೆ. ಹೌಡಿ-ಮೋದಿ ಕಾರ್ಯಕ್ರಮದ ಮೂಲಕ ಅಮೆರಿಕದ ಮನ ಗೆದ್ದ ದೇಶಕ್ಕೆ ಇದು ಜಗತ್ತಿನ ಎರಡನೇ ದೊಡ್ಡ ಆರ್ಥಿಕತೆಯ ಮೇಲಿನ ಮೌನ ವಿಜಯ.ಇದು ಮಹಾಬಲಿಪುರಂ ಶೃಂಗಸಭೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ತಜ್ಞರು ನೀಡುವ ವಿಶ್ಲೇಷಣೆ.

ಮೋದಿ, ಕ್ಸಿ ಜಿನ್‌ಪಿಂಗ್‌ ಕಾಶ್ಮೀರ ವಿಷಯ ಬಗ್ಗೆ ಚರ್ಚೆ ಮಾಡಿಲ್ಲ: ವಿದೇಶಾಂಗ ಸಚಿವಾಲಯ

ಶುಕ್ರವಾರ ಮತ್ತು ಶನಿವಾರ ನಡೆದ ಕಾರ್ಯಕ್ರಮ ದ್ವಿಪಕ್ಷೀಯ ಸಂಬಂಧ ಮತ್ತು ವ್ಯಾಪಾರ ವರ್ಧನೆಗೆ ವೇಗವನ್ನು ನೀಡಲಿದೆ. ಇದರ ಲಾಭ ಎರಡೂ ದೇಶಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಗೋಚರವಾಗಲಿದೆ ಎಂದು ಎರಡೂ ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ. ಆದರೆ, ಜಗತ್ತಿಗೆ ಗೋಚರವಾಗದ ರೀತಿಯಲ್ಲೂ ಕೆಲವೊಂದು ಬದಲಾವಣೆ
ಗಳು ಈ ಮಹತ್ವದ ಸಮಾವೇಶದಿಂದ ಘಟಿಸುವುದು ಖಚಿತವಾಗಿದೆ.


ಮೋದಿ ಮತ್ತು ಜಿನ್‌ಪಿಂಗ್‌ ನಡುವಿನ 6 ಗಂಟೆಗಳ ಆಪ್ತ ಸಂವಾದ ದೇಶಗಳ, ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು, ಚರ್ಚಿಸಲು ಅವಕಾಶ ನೀಡಿದೆ. ಇದರಿಂದ ಸಂಬಂಧ ಗಟ್ಟಿಯಾಗುತ್ತದೆ- ಎನ್‌. ಪಾರ್ಥಸಾರಥಿ ಮಾಜಿ ರಾಯಭಾರಿ, ವಿದೇಶಾಂಗ ವ್ಯವಹಾರಗಳ ತಜ್ಞರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ