ಆ್ಯಪ್ನಗರ

ಪ್ಲಾಸ್ಟಿಕ್‌ ಕಸ ಕೊಟ್ಟರೆ ಊಟ ನೀಡುವ ಗಾರ್ಬೇಜ್ ಕೆಫೆ: ರಾಜ್ಯದಲ್ಲೂ ಬರಬಹುದೇ ಈ ಯೋಜನೆ?

ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ನಿಷೇಧಿಸಿರುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ದೇಶಾದ್ಯಂತ ಆಂದೋಲವೇ ಆರಂಭವಾಗಿದೆ. ಚತ್ತೀಸ್‌ಗಢದ ಅಂಬಿಕಾಪುರದಲ್ಲಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ವಿನೂತ ಯೋಜನೆಯೊಂದು ಶುರುವಾಗಿದೆ. ಇದೊಂದು ಆಕರ್ಷಕ ಯೋಜನೆಯಾಗಿದ್ದು, ಎಲ್ಲ ರಾಜ್ಯ ಸರ್ಕಾರಗಳು ಇದೇ ಮಾದರಿಯ ಯೋಜನೆ ಆರಂಭಿಸಿದರೆ ತ್ಯಾಜ್ಯ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಬಹುದಾಗಿದೆ.

Vijaya Karnataka Web 10 Oct 2019, 2:13 pm
ಚತ್ತೀಸ್‌ಗಡ : ಪ್ಲಸ್ಟಿಕ್‌ ಮುಕ್ತ ಭಾರತದ ಸ್ವಚ್ಛ ಭಾರತದ ಪರಿಕಲ್ಪನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗಾರ್ಬೇಜ್ ಕೆಫೆ ಚತ್ತೀಸ್‌ಗಡ ರಾಜ್ಯದ ಅಂಬಿಕಾಪುರದಲ್ಲಿ ಆರಂಭವಾಗಿದೆ. ಗಾರ್ಬೇಜ್‌ ಕೆಫೆಗೆ ಚತ್ತೀಸ್‌ಗಡ ರಾಜ್ಯದ ಆರೋಗ್ಯ ಸಚಿವ ಟಿಎಸ್‌ ಸಿಂಗ್ ಡೇ ಚಾಲನೆ ನೀಡಿದ್ದಾರೆ. ಅಂಬಿಕಾಪುರ ಪಾಲಿಕೆಯೇ ಈ ವಿನೂತನ ಯೋಜನೆಯನ್ನು ಪರಿಚಯಿಸಿದೆ.
Vijaya Karnataka Web garbage cafe


ಖಾಲಿ ಪ್ಲಾಸ್ಟಿಕ್‌ ಬಾಟಲ್‌ ಕೊಡಿ, ಚಹಾ ಕುಡಿ

ಗಾರ್ಬೇಜ್ ಕೆಫೆಯ ಪರಿಕಲ್ಪನೆ ವಿಶೇಷವಾಗಿದ್ದು ಈ ಮೂಲಕ ಟನ್ಗಟ್ಟಲೇ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ಪ್ಲಾಸ್ಟಿಕ್‌ ವಿಲೇವಾರಿಗೆ ಚತ್ತೀಸ್‌ಗಡ ಸರ್ಕಾರ ಕಾರ್ಯರೂಪಕ್ಕಿಳಿದಿದೆ. ಹಸಿವು ನೀಗಿಸುವುದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ತಡೆಗಟ್ಟುವಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿದೆ. ಭಾರತದಲ್ಲೇ ಇದೇ ಮೊದಲ ಬಾರಿಗೆ ಗಾರ್ಬೇಜ್ ಕೆಫೆ ಪರಿಕಲ್ಪನೆಯನ್ನು ಛತ್ತೀಸ್ಗಢದ ಸರ್ಗೂಜಾ ಜಿಲ್ಲೆಯ ಅಂಬಿಕಾಪುರದಲ್ಲಿ ರೂಪಿಸಲಾಗಿದೆ.

ತ್ಯಾಜ್ಯ ಪ್ಲಾಸ್ಟಿಕ್‌ ಕೊಟ್ಟರೆ ಊಟ ಸಿಗುತ್ತೆ:
ಗಾರ್ಬೇಜ್‌ ಕೆಫೆಯಲ್ಲಿ ಹೋಗಬೇಕೆಂದರೆ ನಿಮ್ಮ ಬಳಿ ಹಣ ಇರಬೇಕೆಂದೇನೂ. ಹೋಗುವಾಗ ರಸ್ತೆಯಲ್ಲಿ ಸಿಗುವು ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹಿಸಿ ಕೊಂಡೊಯ್ದರೂ ಸಾಕು. ಹೊಟ್ಟೆ ತುಂಬ ಊಟ ಮಾಡಬಹದು. ಈ ಹೋಟೆಲ್‌ನಲ್ಲಿ 1 ಕೆಜಿ ತ್ಯಾಜ್ಯಪ್ಲಾಸ್ಟಿಕ್ ನೀಡಿದರೆ ಫುಲ್‌ ಊಟ ದೊರೆಯುತ್ತದೆ. ಅರ್ಧ ಕೆಜಿ ಪ್ಲಾಸ್ಟಿಕ್ ನೀಡಿದರೆ ತಿಂಡಿ ದೊರೆಯುತ್ತದೆ.

ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ಜಾಥಾ

ಚಿಂದಿ ಆಯುವವರಿಗಾಗಿಯೇ ಈ ಕೆಫೆ:
ಚಿಂದಿ ಆಯುವವರ ಹೊಟ್ಟೆ ತುಂಬಿಸಲೆಂದೇ ದೇಶದ ಮೊದಲ ಗಾರ್ಬೇಜ್‌ ಕೆಫೆ ಛತ್ತೀಸಢದ ಅಂಬಿಕಾಪುರ ನಗರದಲ್ಲಿ ಆರಂಭವಾಗಿದೆ. ಚಿಂದಿ ಆಯುವವರು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕೊಟ್ಟರೆ ಅವರಿಗೆ ಮಹಾನಗರ ಪಾಲಿಕೆ ವತಿಯಿಂದ ಉಚಿತ ಊಟ ಕೊಡಲಾಗುತ್ತೆ. ಕೆಫೆಯಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸುವ ಯೋಜನೆ ಪಾಲಿಕೆ ಹಾಕಿಕೊಂಡಿದೆ.

ಬಾಪೂ ಸ್ಮರಣೆ; ಪ್ಲಾಸ್ಟಿಕ್‌ ತ್ಯಜಿಸುವ ಪ್ರತಿಜ್ಞೆ

ಗಾರ್ಬೇಜ್‌ ಕೆಫೆ ಯೋಜನೆಗೆ 5 ಲಕ್ಷ ರೂ. ಅನುದಾನ:
ಗಾರ್ಬೇಜ್ ಕೆಫೆ' ಯೋಜನೆಗಾಗಿ ಅಂಬಿಕಾಪುರ ಪಾಲಿಕೆ ವರ್ಷಕ್ಕೆ 5 ಲಕ್ಷ ರೂಪಾಯಿ ಬಜೆಟ್ ಮೀಸಲಿರಿಸಿದೆ. ಈಗಾಗಲೇ ಅಂಬಿಕಾಪುರದಲ್ಲಿ ಪ್ಲಾಸ್ಟಿಕ್ ಕಣಗಳು ಹಾಗೂ ಡಾಂಬರ್‌ ಬಳಸಿ ನಿರ್ಮಿಸಲಾದ ರಸ್ತೆಗಳಿವೆ. 8 ಲಕ್ಷ ಪ್ಲಾಸ್ಟಿಕ್ ಚೀಲಗಳನ್ನು ಡಾಂಬರಿನೊಂದಿಗೆ ಮಿಶ್ರ ಮಾಡಿ ರಸ್ತೆ ನಿರ್ಮಿಸಲಾಗಿತ್ತು. ಈ ಯೋಜನೆಯಡಿ ಬಡ ನಿರಾಶ್ರಿತರಿಗೆ ಪ್ಲಾಸ್ಟಿಕ್ ತ್ಯಾಜ್ಯದ ಬದಲಿಗೆ ಉಚಿತ ಆಹಾರ ನೀಡಲಾಗುತ್ತದೆ. ಅಷ್ಟೇ ಅಲ್ಲ, ನಿರಾಶ್ರಿತರಿಗೆ ಆಶ್ರಯ ಒದಗಿಸುವ ಉದ್ದೇಶವೂ ಪಾಲಿಕೆಗಿದೆಯಂತೆ.

ಕರ್ನಾಟಕದಲ್ಲೂ ಇದೇ ಮಾದರಿ ಅನುಸರಿಸಿದರೆ ಹೇಗೆ?
ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಬಹುದಿನಗಳ ಸಮಸ್ಯೆಯಾಗಿದೆ. ಬೆಂಗಳೂರಿನಲ್ಲೇ ದಿನಕ್ಕೆ ಟನ್‌ಗಟ್ಟಲೆ ಪ್ಲಾಸ್ಟಿಕ್‌ ತ್ಯಾಜ್ಯ ಉಂಟಾಗುತ್ತದೆ. ರಾಜ್ಯ ಸರ್ಕಾರವೂ ಚತ್ತೀಸ್‌ಗಡ ಮಾದರಿಯಲ್ಲಿಯೇ ಗಾರ್ಬೇಜ್‌ ಕೆಫೆ ಮಾದರಿಯ ಅಥವಾ ಇನ್ನೂ ಸುಧಾರಿತ ಮಾದರಿಯ ಯೋಜನೆಯನ್ನು ಆರಂಭಿಸಬಹುದಾಗಿದೆ. ಇದರಿಂದ ಪ್ಲಾಸ್ಟಿಕ್‌ ತ್ಯಾಜ್ಯ ನಿಯಂತ್ರಣ ಅರ್ಧದಷ್ಟು ಬಗೆಹರಿಯುವಲ್ಲಿ ಯಾವುದೇ ಅನುಮಾನವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ