ಆ್ಯಪ್ನಗರ

ಜೈಲೂಟ ತಿಂದು ಚಿದಂಬರಂ 4 ಕೆಜಿ ಇಳಿದು ಹೋಗಿದ್ದಾರಂತೆ!

ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಈಗ ನಿಜಕ್ಕೂ ಸೊರಗಿ ಹೋಗಿದ್ದಾರೆ. ಕಾನೂನು ಹೋರಾಟದಲ್ಲಿ ನಿರಂತರ ಸೋಲು ಕಂಡಿರುವ ಚಿದಂಬರಂ ಈಗ ಜೈಲಿನಲ್ಲಿ ಊಟ ತಿಂದು 4 ಕೆಜಿ ಇಳಿದುಹೋಗಿದ್ದಾರಂತೆ.

Vijaya Karnataka Web 3 Oct 2019, 6:00 pm
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಈಗ ಅಕ್ಷರಶಃ ಸೊರಗಿ ಹೋಗಿದ್ದಾರೆ.
Vijaya Karnataka Web ಚಿದಂಬರಂ
ಚಿದಂಬರಂ


ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಅಕ್ಟೋಬರ್ 17ರವರೆಗೆ ವಿಸ್ತರಿಸಿದೆ. ಕಾನೂನು ಹೋರಾಟದಲ್ಲಿ ಸೊರಗಿರುವ ಚಿದಂಬರಂ ಈಗ ದೈಹಿಕವಾಗಿಯೂ ಸೊರಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ತಿಹಾರ್‌ ಜೈಲಿನಲ್ಲಿರುವ ಚಿದಂಬರಂ 4 ಕೆಜಿ ಇಳಿದು ಹೋಗಿದ್ದಾರಂತೆ. ಜೈಲೂಟ ತಿಂದು ಚಿದಂಬರಂ ಸೊರಗಿ ಹೋಗಿದ್ದಾರೆ.

ಈ ವಿಷಯವನ್ನು ನ್ಯಾಯಾಲಯಕ್ಕೆ ಖುದ್ದು ಚಿದಂಬರಂ ಅವರೇ ಅರ್ಜಿ ಸಲ್ಲಿಸಿ ಮಾಹಿತಿ ನೀಡಿದ್ದಾರೆ.

ಜೈಲೂಟ ನನಗೆ ಸರಿ ಹೋಗುತ್ತಿಲ್ಲ. ಇದರಿಂದ ನನ್ನ ಆರೋಗ್ಯದ ಮೇಲೆ ಪ್ರಭಾವ ಬೀರಿದೆ. ನಾಲ್ಕು ಕೆಜಿಯಷ್ಟು ತೂಕ ಕಡಿಮೆಯಾಗಿದೆ. ಹೀಗಾಗಿ ಮನೆ ಊಟ ಕಳುಹಿಸಿಕೊಡಲು ವ್ಯವಸ್ಥೆ ಮಾಡಬೇಕು ಎಂದು ಚಿದಂಬರಂ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಚಿದಂಬರಂ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಿದೆ.

ಹೈಕೋರ್ಟ್‌ನಲ್ಲಿ ಚಿದಂಬರಂ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ.

ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಪಿ. ಚಿದಂಬರಂ ಅವರನ್ನು ಕಳೆದ ಆಗಸ್ಟ್‌ 21ರಂದು ಚಿದಂಬರಂ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಚಿದಂಬರಂ ಸೆಪ್ಟಂಬರ್‌ 5ರಿಂದ ತಿಹಾರ್‌ ಜೈಲಿನಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ