ಆ್ಯಪ್ನಗರ

ಸಂಯಮ ಕಾಯ್ದುಕೊಳ್ಳಲು ಚೀನಾ ಮನವಿ

ಭಾರತ-ಪಾಕ್‌ ನಡುವಿನ ಬಿಗುವಿನ ವಾತಾವರಣ ಚೀನಾಕ್ಕೂ ಆತಂಕ ಮೂಡಿಸಿದೆ. ಉಭಯ ರಾಷ್ಟ್ರಗಳೂ ಸಂಯಮ ಕಾಯ್ದುಕೊಳ್ಳಲು ಮನವಿ ಮಾಡಿದೆ. ಮಾತುಕತೆ ಮೂಲಕ ಉಭಯ ರಾಷ್ಟ್ರಗಳೂ ಏಷ್ಯಾದಲ್ಲಿ ಶಾಂತಿ ಕಾಪಾಡಬೇಕೆಂದು ಚೀನಾ ಕೋರಿದೆ.

Vijaya Karnataka 27 Feb 2019, 10:15 pm
ಹೊಸದಿಲ್ಲಿ: ಭಾರತ-ಪಾಕ್‌ ನಡುವಿನ ಬಿಗುವಿನ ವಾತಾವರಣ ಚೀನಾಕ್ಕೂ ಆತಂಕ ಮೂಡಿಸಿದೆ. ಪಾಕ್‌ ಉಗ್ರರ ಶಿಬಿರಗಳ ಮೇಲೆ ಮಂಗಳವಾರ ದಾಳಿ ಮಾಡಿದಾಗ ಒಂದು ಸಣ್ಣ ಪ್ರತಿಕ್ರಿಯೆಯನ್ನೂ ನೀಡದ ಚೀನಾ, ಬುಧವಾರ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡ ಬೆನ್ನಲ್ಲೇ ಉಭಯ ರಾಷ್ಟ್ರಗಳೂ ಸಂಯಮ ಕಾಯ್ದುಕೊಳ್ಳಲು ಮನವಿ ಮಾಡಿದೆ. ಮಾತುಕತೆ ಮೂಲಕ ಉಭಯ ರಾಷ್ಟ್ರಗಳೂ ಏಷ್ಯಾದಲ್ಲಿ ಶಾಂತಿ ಕಾಪಾಡಬೇಕೆಂದು ಚೀನಾ ಕೋರಿದೆ.
Vijaya Karnataka Web china


ಸುಷ್ಮಾ ತರಾಟೆ: ಈ ಮಧ್ಯೆ ಚೀನಾ ಭೇಟಿಯಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪುಲ್ವಾಮಾ ದಾಳಿಯನ್ನು ಉಲ್ಲೇಖಿಸಿ, ಭಯೋತ್ಪಾದನೆ ವಿರುದ್ಧ ಇಡೀ ವಿಶ್ವ ಸಮುದಾಯ ಒಂದಾಗಬೇಕಾದ ಕಾಲ ಬಂದಿದೆ ಎಂದರು. ಉಗ್ರರನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಬೆಂಬಲ ನೀಡಬಾರದೆಂದು ಚೀನಾಕ್ಕೆ ತಾಕೀತು ಮಾಡಿದರು. ಸಭೆಯಲ್ಲಿ ಹಾಜರಿದ್ದ ರಷ್ಯಾ ವಿದೇಶಾಂಗ ಸಚಿವರೂ ಸುಷ್ಮಾ ಮಾತಿಗೆ ದನಿಗೂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ