ಆ್ಯಪ್ನಗರ

ಗಲ್ವಾನ್‌ ಸಂಘರ್ಷದಲ್ಲಿ ಚೀನಿ ಸೈನಿಕರು ಸತ್ತಿದ್ದಾರೆ, ಆದರೆ ಭಾರತದಷ್ಟಲ್ಲ: ಕೊನೆಗೂ ಸತ್ಯ ಒಪ್ಪಿಕೊಂಡ ಚೀನಾ

ನನಗೆ ತಿಳಿದಂತೆ, ಜೂನ್ 15 ರಂದು ಗಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಚೀನಾದ ಸೈನಿಕರ ಸಾವಿನ ಸಂಖ್ಯೆ 20 ಭಾರತೀಯ ಸೈನಿಕರ ಸಾವುಗಳಿಗಿಂತ ಕಡಿಮೆ ಇದೆ. ಅಲ್ಲದೇ ಭಾರತೀಯ ಪಡೆಗಳು ಯಾವುದೇ ಚೀನೀ ಸೈನಿಕರನ್ನು ಸೆರೆಹಿಡಿದಿಲ್ಲ, ಆದರೆ ಪಿಎಲ್‌ಎ ಆ ದಿನ ಅನೇಕ ಭಾರತೀಯ ಸೈನಿಕರನ್ನು ವಶಪಡಿಸಿಕೊಂಡಿದತ್ತು" ಎಂದು ಗ್ಲೋಬಲ್‌ ಟೈಮ್ಸ್‌ ಸಂಪಾದಕ ತಿಳಿಸಿದ್ದಾರೆ.

Agencies 18 Sep 2020, 9:51 am
ಹೊಸದಿಲ್ಲಿ: ಲಡಾಕ್‌ನ ಗಲ್ವಾನ್‌ ಕಣಿವೆಯಲ್ಲಿ ನಡೆದ ಮಾರಣಾಂತಿಕ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಚೀನಾ ಕೊನೆಗೂ ಸತ್ಯ ಒಪ್ಪಿಕೊಂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಚೀನಾ ಸರಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಸಂಪಾದಕ ಹು ಕ್ಸಿಜಿನ್‌, ಭಾರತದ ಸೇನೆಗಿಂತ ಚೀನಾ ಸೇನೆಯಲ್ಲಿ ಭಾರೀ ಕಡಿಮೆ ಸಾವು-ನೋವುಗಳು ಸಂಭವಿಸಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
Vijaya Karnataka Web Galwan-Valley


ಈ ಮೂಲಕ ಗಲ್ವಾನ್‌ ಸಂಘರ್ಷದಲ್ಲಿ ಚೀನಾ ಸೇನೆಯ ಒಬ್ಬರಿಗೂ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳುತ್ತಿದ್ದ ಡ್ರ್ಯಾಗನ್‌ ದೇಶದ ಮುಖವಾಡ ಕಳಚಿ ಬಿದ್ದಂತೆ ಆಗಿದೆ. ಭಾರತದ ಏಟಿಗೆ ಚೀನಾದ ಹಲವು ಸೈನಿಕರು ಸಾವನಪ್ಪಿದ್ದಾರೆ ಎಂದ ರಾಜ್‌ನಾಥ್ ಸಿಂಗ್‌ ಮಾಧ್ಯಮ ಹೇಳಿಕೆಯ ವರದಿಯನ್ನು ತಳ್ಳಿ ಹಾಕಿದ ಚೀನಾ ಸರಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಸಂಪಾದಕ ಹು ಕ್ಸಿಜಿನ್‌,

ಟ್ವಿಟರ್‌ನಲ್ಲಿ ಈ ವರದಿಯನ್ನು ಟ್ಯಾಗ್‌ ಮಾಡಿ "ನನಗೆ ತಿಳಿದಂತೆ, ಜೂನ್ 15 ರಂದು ಗಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಚೀನಾದ ಸೈನಿಕರ ಸಾವಿನ ಸಂಖ್ಯೆ 20 ಭಾರತೀಯ ಸೈನಿಕರ ಸಾವುಗಳಿಗಿಂತ ಕಡಿಮೆ ಇದೆ. ಅಲ್ಲದೇ ಭಾರತೀಯ ಪಡೆಗಳು ಯಾವುದೇ ಚೀನೀ ಸೈನಿಕರನ್ನು ಸೆರೆಹಿಡಿದಿಲ್ಲ, ಆದರೆ ಪಿಎಲ್‌ಎ ಆ ದಿನ ಅನೇಕ ಭಾರತೀಯ ಸೈನಿಕರನ್ನು ವಶಪಡಿಸಿಕೊಂಡಿದತ್ತು" ಎಂದು ತಿಳಿಸಿದ್ದಾರೆ.


ಗ್ಲೋಬಲ್ ಟೈಮ್ಸ್ ಚೀನಾ ಸರಕಾರದ ಅಧಿಕೃತ ಪತ್ರಿಕೆಯಾಗಿದ್ದು, ಇಲ್ಲಿಂದ ಯಾವುದೇ ಮಾಹಿತಿ ಬಂದರು ಅದು ಸರಕಾರದ ಹೇಳಿಕೆಯಂತೆ ಪರಿಗಣಿಸಲಾಗುತ್ತೆ. ಇದೀಗ ಹು ಕ್ಸಿಜಿನ್‌ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಚೀನಾ ಸತ್ಯ ಒಪ್ಪಿಕೊಂಡಂತೆ ಆಗಿದೆ. ಅಲ್ಲದೇ ಜೂನ್‌ನಲ್ಲಿ ಗಲ್ವಾನ್‌ ಕಣಿವೆಯಲ್ಲಿ ಹುತಾತ್ಮರಾದ 20 ಯೋಧರ ಶೌರ್ಯಕ್ಕೆ ಸಿಕ್ಕ ಗೌರವದಂತೆ ಆಗಿದೆ.
ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದವರ ಬಳಿ ಗಿಫ್ಟ್‌ ಕೇಳಿದ ಪ್ರಧಾನಿ ಮೋದಿ, ಏನು ಕೇಳಿದ್ರು?

ಚೀನಾ ಸೇನೆಗೆ ಭಾರತೀಯ ಸೇನೆ ಗಲ್ವಾನ್‌ ಕಣಿವೆಯಲ್ಲಿ ಭಾರೀ ಹೊಡೆತ ನೀಡಿತ್ತು ಹಾಗೂ ಭಾರೀ ಸಾವು ನೋವು ಸಂಭವಿಸಿತ್ತು ಎನ್ನುವ ಹೇಳಿಕೆಯೊಂದನ್ನು ಭಾರತೀಯ ಮಧ್ಯಮವೊಂದು ಪ್ರಕಟಿಸಿತ್ತು. ಇದನ್ನು ಹು ಕ್ಸಿಜಿನ್‌ ಟ್ವೀಟ್‌ನಲ್ಲಿ ಲಗತ್ತಿಸಿಕೊಂಡಿದ್ದರು. ಸದ್ಯ ಚೀನಾ ಸತ್ಯ ಒಪ್ಪಿಕೊಂಡಿದೆಯಾದರು ಇದರಲ್ಲಿನ ನೈಜಾಂಶವನ್ನು ಒಪ್ಪಿಕೊಂಡಿಲ್ಲ. ಯಾಕೆಂದರೆ ಅಮೆರಿಕದ ಮಾಧ್ಯಮಗಳ ವರದಿ ಪ್ರಕಾರ ಚೀನಾದ 90ಕ್ಕೂ ಹೆಚ್ಚು ಸೈನಿಕರು ಭಾರತೀಯ ಸೇನೆಯ ಏಟಿಗೆ ಸಾವನಪ್ಪಿದ್ದಾರೆ ಎಂದು ವರದಿ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ