ಆ್ಯಪ್ನಗರ

ಭಾರತ ದುರ್ಬಲ ರಾಷ್ಟ್ರವಲ್ಲ, ನಮ್ಮ ಶಕ್ತಿ ಚೀನಾಗೂ ತಿಳಿದಿದೆ: ಸಿಂಗ್‌

ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಭಾರತ ನಿಶ್ಯಕ್ತ ರಾಷ್ಟ್ರವಲ್ಲ ಎಂದು ಚೀನಾಗೆ ಮನವರಿಕೆಯಾಗಿದೆ ಎಂಬುದಾಗಿ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದರು.

TNN 15 Oct 2017, 5:35 pm
ಲಖನೌ: ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಭಾರತ ನಿಶ್ಯಕ್ತ ರಾಷ್ಟ್ರವಲ್ಲ ಎಂದು ಚೀನಾಗೆ ಮನವರಿಕೆಯಾಗಿದೆ ಎಂಬುದಾಗಿ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದರು.
Vijaya Karnataka Web china understands india is no more a weak country
ಭಾರತ ದುರ್ಬಲ ರಾಷ್ಟ್ರವಲ್ಲ, ನಮ್ಮ ಶಕ್ತಿ ಚೀನಾಗೂ ತಿಳಿದಿದೆ: ಸಿಂಗ್‌


ಭಾರತೀಯ ಲೋಧಿ ಮಹಾಸಭಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ, ' ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಹೆಚ್ಚು ಬಲಿಷ್ಟವಾಗುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಇನ್ನೂ ಎತ್ತರಕ್ಕೆ ಬೆಳೆಯುತ್ತಿದೆ' ಎಂದು ನುಡಿದಿದ್ದಾರೆ.

ಗಡಿ ಪ್ರದೇಶದಗಳೆಲ್ಲವೂ ಇದೀಗ ಸುರಕ್ಷಿತವಾಗಿದ್ದು, ನಮ್ಮ ಸಾಮರ್ಥ್ಯ ಚೀನಾದ ಅರಿವಿಗೂ ಬಂದಿದ್ದು ಗಡಿಯಾಚೆಗಿನ ತಂಟೆಯನ್ನು ಕಡಿಮೆ ಗೊಳಿಸಿದೆ. ಅಲ್ಲದೇ ನೆರೆ ರಾಷ್ಟ್ರ ಪಾಕಿಸ್ತಾನ ಕೂಡಾ ನಮ್ಮನ್ನು ಕೆಣಕಲು ಯತ್ನಿಸುತ್ತಿದೆ. ಆದರೆ ನಮ್ಮ ಸೈನಿಕರು ದಿನಕ್ಕೆ ಕನಿಷ್ಟ ಎರಡು ಉಗ್ರರನ್ನು ಹೊಡೆದುರುಳಿಸುತ್ತಿದ್ದಾರೆ. ಪಾಕ್‌ ಮಾತ್ರ ತನ್ನ ಉಗ್ರರನ್ನು ಭಾರತಕ್ಕೆ ಕಳುಹಿಸುವ ಬುದ್ದಿ ಬಿಟ್ಟಿಲ್ಲ' ಎಂದು ಸಿಂಗ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ