ಆ್ಯಪ್ನಗರ

ಕ್ರಿಶ್ಚಿಯನ್‌ ಮಿಶನರಿಗಳ ನಿರ್ದೇಶನದಂತೆ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ: ಬಿಜೆಪಿ ಸಂಸದ ಭರತ್‌ ಸಿಂಗ್‌

ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಕ್ರಿಶ್ಚಿಯನ್‌ ಮಿಶನರಿಗಳು ಮಾರಕ ಎಂದಿರುವ ಬಿಜೆಪಿ ಸಂಸದ ಭರತ್‌ ಸಿಂಗ್‌, ಕ್ರಿಶ್ಚಿಯನ್‌ ಮಿಶನರಿಗಳ ನಿರ್ದೇಶನದಂತೆ ದೇಶದಲ್ಲಿ ಕಾಂಗ್ರೆಸ್‌ ಕೆಲಸ ...

Vijaya Karnataka 23 Apr 2018, 10:06 am
ಬಲಿಯಾ (ಉತ್ತರ ಪ್ರದೇಶ): ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಕ್ರಿಶ್ಚಿಯನ್‌ ಮಿಶನರಿಗಳು ಮಾರಕ ಎಂದಿರುವ ಬಿಜೆಪಿ ಸಂಸದ ಭರತ್‌ ಸಿಂಗ್‌, ಕ್ರಿಶ್ಚಿಯನ್‌ ಮಿಶನರಿಗಳ ನಿರ್ದೇಶನದಂತೆ ದೇಶದಲ್ಲಿ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Vijaya Karnataka Web bharat singh


ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಲಿಯಾ ಕ್ಷೇತ್ರದ ಸಂಸದ ಸಿಂಗ್‌, ''ಕ್ರಿಶ್ಚಿಯನ್‌ ಮಿಶನರಿಗಳು ಕಾಂಗ್ರೆಸ್‌ ಪಕ್ಷವನ್ನು ನಿಯಂತ್ರಿಸುತ್ತವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ತಾಯಿ ಸೋನಿಯಾ ಗಾಂಧಿ ಈ ಮಿಶನರಿಗಳ ನಿರ್ದೇಶನದಂತೆ ಕೆಲಸ ಮಾಡುತ್ತಾರೆ,'' ಎಂದರು.

ಈಶಾನ್ಯ ರಾಜ್ಯಗಳಲ್ಲಿ ಜನರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುತ್ತಿರುವುದರಿಂದ ಆ ರಾಜ್ಯಗಳು ದುರ್ಬಲವಾಗಿವೆ ಎಂದೂ ಅವರು ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ, 'ಸಂವಿಧಾನ ಶಿಲ್ಪಿ, ದಲಿತರ ಮುಖಂಡ ಡಾ. ಭೀಮ್‌ ರಾವ್‌ ಅಂಬೇಡ್ಕರ್‌ ಪ್ರತಿಮೆಗಳ ಧ್ವಂಸದ ಹಿಂದೆ ಕ್ರಿಶ್ಚಿಯನ್‌ ಮಿಶನರಿಗಳ ಕೈವಾಡವಿದೆ' ಎಂದೂ ಇದೇ ಸಂಸದ ಆಪಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ