ಆ್ಯಪ್ನಗರ

ಭಾರತದ ಉಕ್ಕಿನ ಕವಚದಂತೆ ಆವರಿಸಿರುವ ನಾಗರಿಕ ಸೇವಕರಿಗೆ ಶುಭ ಕೋರಿದ ಪ್ರಧಾನಿ

ಅಂದು ಏಪ್ರಿಲ್‌ 21, 1947ರಲ್ಲಿ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ನಾಗರಿಕ ಸೇವಕರನ್ನು ಉದ್ದೇಶಿಸಿ ಮಾತನಾಡುತ್ತ, ನಾಗರಿಕ ಸೇವೆಯು ಭಾರತದ ಉಕ್ಕಿನ ಕವಚವಿದ್ದಂತೆ ಎಂದಿದ್ದರು.

Vijaya Karnataka Web 21 Apr 2019, 11:04 am
ಹೊಸದಿಲ್ಲಿ: ಭಾರತದ ಎಲ್ಲಾ ಭಾಗಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ನಾಗರಿಕ ಸೇವಕರಿಗೆ ನಾಗರಿಕ ಸೇವಾ ದಿನದ ಶುಭಾಶಯವನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಕೋರಿದರು.
Vijaya Karnataka Web Statue of Unity


ನಾಗರಿಕ ಸೇವಕರ ಕಠಿಣ ಶ್ರಮದಿಂದ ಭಾರತದ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಭಾರತ ರಾಷ್ಟ್ರ ಪ್ರಬಲವಾದ ಆಡಳಿತಾತ್ಮಕ ಚೌಕಟ್ಟು ಹೊಂದಲು ನಾಗರಿಕ ಸೇವಕರ ಕೊಡುಗೆ ಅನುಪಮ. ನಾಗರಿಕ ಸೇವೆ ನಿರ್ಮಾಣಕ್ಕೆ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಕೊಡುಗೆಗೆ ಗೌರವ ಸಲ್ಲಿಸಬೇಕು ಎಂದು ನರೇಂದ್ರ ಮೋದಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.


ಐಎಎಸ್‌ ಒಕ್ಕೂಟವು ನಾಗರಿಕ ಸೇವಾ ದಿನದ ಶುಭ ಕೋರಿದ್ದು, ಅಂದು ಈ ದಿನ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರು ಮೆಟ್‌ಕಾಲ್ಫ್‌ ಹೌಸ್‌ನಲ್ಲಿ ಸ್ವತಂತ್ರ ಭಾರತದ ಮೊದಲ ನಾಗರಿಕ ಸೇವಕರ ಬ್ಯಾಚ್‌ಅನ್ನು ಉದ್ದೇಶಿಸಿ ಮಾತನಾಡಿದ್ದನ್ನು ಸ್ಮರಿಸಿದ್ದಾರೆ. ನಾಗರಿಕ ಸೇವಕರನ್ನು ಭಾರತದ ಉಕ್ಕಿನ ಕವಚ ಎಂದು ಉಲ್ಲೇಖಿಸಿದ್ದರು ಎಂದು ಐಎಎಸ್‌ ಒಕ್ಕೂಟ ಟ್ವೀಟ್‌ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ