ಆ್ಯಪ್ನಗರ

ದೇಶದ ನ್ಯಾಯಾಂಗ ವ್ಯವಸ್ಥೆ ಜಗತ್ತಿನಲ್ಲೇ ಸದೃಢವಾದದ್ದು: ಸಿಜೆಐ ದೀಪಕ್ ಮಿಶ್ರಾ

ಸಿಜೆಐ ದೀಪಕ್ ಮಿಶ್ರಾ ಮಂಗಳವಾರ ನಿವೃತ್ತರಾಗುತ್ತಿದ್ದು, ಬುಧವಾರ ನ್ಯಾ. ರಂಜನ್ ಗೊಗೋಯ್ ನೂತನ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

Vijaya Karnataka Web 1 Oct 2018, 8:03 pm
ಹೊಸದಿಲ್ಲಿ: ಭಾರತದ ನ್ಯಾಯಾಂಗ ವ್ಯವಸ್ಥೆ ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಮತ್ತು ಸದೃಢವಾದದ್ದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತಿಳಿಸಿದ್ದಾರೆ.
Vijaya Karnataka Web New Delhi: Chief Justice of India Justice Dipak Misra addresses during the launc...


ಸಿಜೆಐ ದೀಪಕ್ ಮಿಶ್ರಾ ಮಂಗಳವಾರ ನಿವೃತ್ತರಾಗುತ್ತಿದ್ದು, ಬುಧವಾರ ನ್ಯಾ. ರಂಜನ್ ಗೊಗೋಯ್ ನೂತನ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಸೋಮವಾರ ಸುಪ್ರೀಂಕೋರ್ಟ್‌ ಆವರಣದಲ್ಲಿ ಸುಪ್ರೀಂಕೋರ್ಟ್ ಬಾರ್ ಅಸೋಶಿಯೇಶನ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ದೀಪಕ್ ಮಿಶ್ರಾ, ನ್ಯಾಯಾಧೀಶರು ಮಾನವೀಯ ಮುಖ ಹೊಂದಿರಬೇಕು, ಯಾವುದೇ ಪ್ರಕರಣದಲ್ಲಿ ತೀರ್ಪು ನೀಡುವಾಗ ಅಲ್ಲಿ ವ್ಯಕ್ತಿಯ ಇತಿಹಾಸ ಮುಖ್ಯವಾಗುವುದಿಲ್ಲ, ಬದಲಾಗಿ ಅವರ ಕಾರ್ಯಚಟುವಟಿಕೆ ಪ್ರಮುಖವಾಗುತ್ತದೆ ಎಂದು ಹೇಳಿದ್ದಾರೆ.

ಬಾರ್ ಕೌನ್ಸಿಲ್‌ಗೆ ಅಭಾರಿಯಾಗಿದ್ದು, ಉತ್ತಮ ಕೆಲಸ ನಿರ್ವಹಿಸಿದ ಸಂತೃಪ್ತಿಯೊಂದಿಗೆ ತೆರಳುತ್ತಿದ್ದೇನೆ ಎಂದು ಸಿಜೆಐ ಹೇಳಿದ್ದಾರೆ.

ಅದಕ್ಕೂ ಮೊದಲು ಮಾತನಾಡಿದ ನ್ಯಾ. ರಂಜನ್ ಗೊಗೋಯ್, ದೇಶದಲ್ಲಿನ ಕೆಲವು ಪ್ರಮುಖ ಪ್ರಕರಣಗಳ ತೀರ್ಪು ನೀಡುವಲ್ಲಿ ಸಿಜೆಐ ದೀಪಕ್ ಮಿಶ್ರಾ ಅವರ ಪಾತ್ರವನ್ನು ಸ್ಮರಿಸಿದರು. ಜತೆಗೆ ಸಂವಿಧಾನಕ್ಕೆ ಎಲ್ಲರೂ ಬದ್ಧರಾಗಿದ್ದು, ಅದರಂತೆ ನಡೆದರೆ ಮಾತ್ರ ಉತ್ತಮ ಜೀವನ ಸಾಧ್ಯ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ