ಆ್ಯಪ್ನಗರ

ಕರ್ನಾಟಕ ರಾಜಕೀಯ: ಸಿಜೆಐ ನಿಲುವು ಕಾಂಗ್ರೆಸ್‌ಗೆ ನೆರವಾಗಿದ್ದು ಹೇಗೆ?

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಹಲವು ತಿಂಗಳುಗಳಿಂದ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ಅವರನ್ನು ಹುದ್ದೆ ತೊರೆಯುವಂತೆ ಮಾಡಲು ಸಾಕಷ್ಟು ಬಾರಿ ಪ್ರಯತ್ನಪಟ್ಟಿದೆ. ಆದರೆ, ಕರ್ನಾಟಕ ರಾಜಕೀಯ ವಿಚಾರದಲ್ಲಿ ಮಾತ್ರ ದೀಪಕ್ ಮಿಶ್ರಾ ಹಸ್ತಕ್ಷೇಪದಿಂದಾಗಿ ದೇಶದಲ್ಲಿ ಕಾಂಗ್ರೆಸ್‌ ಹಣಬರಹವೇ ಬದಲಾಗಿದೆ.

TIMESOFINDIA.COM 22 May 2018, 11:54 am
ಹೊಸದಿಲ್ಲಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಹಲವು ತಿಂಗಳುಗಳಿಂದ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ಅವರ ಪದಚ್ಯುತಿಗೂ ಸಾಕಷ್ಟು ಬಾರಿ ಪ್ರಯತ್ನಪಟ್ಟಿದೆ. ಆದರೆ, ಕರ್ನಾಟಕ ರಾಜಕೀಯ ವಿಚಾರದಲ್ಲಿ ಮಾತ್ರ ಸಿಜೆಐ ದೀಪಕ್ ಮಿಶ್ರಾ ಹಸ್ತಕ್ಷೇಪದಿಂದಾಗಿ ದೇಶದಲ್ಲಿ ಕಾಂಗ್ರೆಸ್‌ ಹಣಬರಹವೇ ಬದಲಾಗಿದೆ.
Vijaya Karnataka Web Supreme Court


ಜನವರಿ 12 ರಂದು ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸಭೆ ನಡೆಸಿ ಮುಖ್ಯನ್ಯಾಯಮೂರ್ತಿ ವಿರುದ್ಧವೇ ತಿರುಗಿಬಿದ್ದಿದ್ದರು. ಇದಾದ ಬಳಿಕ ದೀಪಕ್ ಮಿಶ್ರಾ ವಿರುದ್ಧ ಕಾಂಗ್ರೆಸ್ ಸಹ ಟೀಕೆ ಮಾಡಿತ್ತು. ಅಲ್ಲದೆ, ದೀಪಕ್ ಮಿಶ್ರಾ ವಾಗ್ದಂಡನೆಗೆ ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ, ಕರ್ನಾಟಕದಲ್ಲಿ ರಚನೆಯಾಗುತ್ತಿದ್ದ ಬಿಜೆಪಿ ಸರಕಾರವನ್ನು ತಡೆಯಲು ಕಾಂಗ್ರೆಸ್ ಅರ್ಜಿ ಹಾಕಿದ ಬೆನ್ನಲ್ಲೇ ಆರೋಪಗಳನ್ನೆಲ್ಲ ಲೆಕ್ಕಿಸದೆ ದೀಪಕ್ ಮಿಶ್ರಾ ಅವರು ರಾತ್ರೋರಾತ್ರಿ ವಿಚಾರಣೆಗೆ ಒಪ್ಪಿಗೆ ಕೊಟ್ಟಿದ್ದರು. ಜತೆಗೆ, ಮೂವರು ಜಡ್ಜ್‌ಗಳ ಪೀಠವನ್ನು ತುರ್ತಾಗಿ ರಚಿಸಿದ್ದರು. ರಾತ್ರಿ 11.40ಕ್ಕೆ ಸುಪ್ರೀಂಕೋರ್ಟ್ ರಿಜಿಸ್ಟ್ರಿ ಕಾಂಗ್ರೆಸ್‌ನ ಮನವಿಗೆ ಒಪ್ಪಿಗೆ ಕೊಟ್ಟಿತ್ತು. ಇದಾದ ಬಳಿಕ, ಮಧ್ಯರಾತ್ರಿ 12.10ಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಿವಾಸವನ್ನು ತಲುಪಿತ್ತು. ನಂತರ, ಕೇವಲ 10 ನಿಮಿಷದಲ್ಲಿ ಮಧ್ಯರಾತ್ರಿ ತುರ್ತು ವಿಚಾರಣೆಗೆ ದೀಪಕ್ ಮಿಶ್ರಾ ಒಪ್ಪಿಗೆ ನೀಡಿದ್ದಾರೆ.

ರಾಜ್ಯಪಾಲರು ಬಿಜೆಪಿ ಸರಕಾರವನ್ನು ರಚಿಸಲು ಯಡಿಯೂರಪ್ಪಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯ ನ್ಯಾಯಮೂರ್ತಿಗಳು ಅಪರೂಪದ ಪ್ರಕರಣಗಳಲ್ಲಿ ಒಂದಾದ ರಾತ್ರೋರಾತ್ರಿ ವಿಚಾರಣೆಗೆ ಒಪ್ಪಿಗೆ ನೀಡಿದ್ದರು. ನಂತರ, ಎ.ಕೆ.ಸಿಕ್ರಿ, ಎಸ್‌.ಎ.ಬೋಬ್ಡೆ ಹಾಗೂ ಅಶೋಕ್ ಭೂಷಣ್‌ ನೇತೃತ್ವದ ತ್ರಿಸದಸ್ಯ ಪೀಠ ಸಹ ವಿಚಾರಣೆ ನಡೆಸಲು ಒಪ್ಪಿಗೆ ನೀಡಿ, ತಡರಾತ್ರಿ 1.45ಕ್ಕೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಆರಂಭಿಸಲು ಅನುಮತಿ ನೀಡಿದ್ದರು. ಅಲ್ಲದೆ, ಕೋರ್ಟಿನ ರೂಮ್ ನಂಬರ್ 6 ರಲ್ಲಿ ಜಡ್ಜ್‌ಗಳಿಗೆ ಬೇಕಾದ ಸಿಬ್ಬಂದಿಯನ್ನು ಸಹ ಕರೆಸಲಾಗಿತ್ತು. ಹಾಗೆ, ಯಾವುದಾದರೂ ಜಡ್ಜ್‌ಗಳಿಗೆ ವಿಚಾರಣೆ ನಡೆಸಲು ತೊಂದರೆಯಾದೀತು ಎಂಬ ಮುಂಜಾಗ್ರತೆ ಹಿನ್ನೆಲೆಯಲ್ಲಿ ಬದಲಿ ಜಡ್ಜ್‌ಗಳನ್ನು ಕರೆಸಲು ಸಹ ಸಿದ್ಧತೆ ಮಾಡಲಾಗಿತ್ತು. ನಂತರ, 2.10ಕ್ಕೆ ವಿಚಾರಣೆ ಆರಂಭವಾಗಿದ್ದು, ರಾತ್ರಿಯೆಲ್ಲ ವಿಚಾರಣೆ ನಡೆದಿತ್ತು. ಒಂದು ವೇಳೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೇಸನ್ನು ಒಂದು ದಿನ ಮುಂದೂಡಿದ್ದರೂ ಸಹ ವಿಪಕ್ಷಗಳ ಶಾಸಕರನ್ನು ಸೆಳೆಯಲು ಬಿಜೆಪಿಗೆ ಹೆಚ್ಚಿನ ಅವಕಾಶ ಸಿಗುತ್ತಿತ್ತು.

ಅಲ್ಲದೆ, ಹಂಗಾಮಿ ಸ್ಪೀಕರ್ ವಿಚಾರದಲ್ಲೂ ಕಾಂಗ್ರೆಸ್ - ಜೆಡಿಎಸ್‌ ಸಿಜೆಐ ಬಳಿ ರಾತ್ರಿ 8.30 ಕ್ಕೆ ತಡರಾತ್ರಿ ವಿಚಾರಣೆ ನಡೆಸಲು ಮನವಿ ಮಾಡಿತ್ತು. ಈ
ವಿಚಾರದಲ್ಲೂ ಸಹ ತುರ್ತಾಗಿ ಮರುದಿನ ಶನಿವಾರ ಬೆಳಗ್ಗೆ ವಿಚಾರಣೆ ನಡೆಸಲು 9.45ರ ವೇಳೆಯಲ್ಲಿ ನಿರ್ಧಾರ ಕೈಗೊಂಡಿದ್ದರು. ಬಿಜೆಪಿ ಸರಕಾರದ ವಿಚಾರಣೆ ನಡೆಸಿದ್ದ ಜಡ್ಜ್‌ಗಳನ್ನೇ ಸಹ ದೀಪಕ್ ಮಿಶ್ರಾ ನೇಮಕ ಮಾಡಿದ್ದರು. ಇದರಿಂದಾಗಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಉಳಿಯಲು ಕಾರಣ ಎಂದು ಸುಪ್ರೀಂಕೋರ್ಟ್ ರಿಜಿಸ್ಟ್ರಿ ಮೂಲಗಳು ಮಾಹಿತಿ ನೀಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ