ಆ್ಯಪ್ನಗರ

ಅವರಿವರ ಅಬ್ಬರದ ಮಧ್ಯೆ ಮಾತ್ರೆ ರಫ್ತಿನ ಮೋದಿ ನಿರ್ಧಾರದ ಹಿಂದಿನ ರೋಚಕ ಸತ್ಯ!

ಇಡೀ ವಿಶ್ವ ಬೇಡುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡುವುದಾಗಿ ಹೇಳಿರುವ ಭಾರತ, ಈ ಕುರಿತು ಕೈಗೊಂಡ ನಿರ್ಣಯದ ಹಿಂದೆ ಒಂದು ರೋಚಕ ಕತೆ ಇದೆ. ಸಂಕಷ್ಟದ ಸಮಯದಲ್ಲಿ ತನ್ನವರನ್ನೂ ರಕ್ಷಿಸಿ ಬಳಿಕ ಇಡೀ ವಿಶ್ವವನ್ನು ರಕ್ಷಿಸುವ ಭಾರತದ ಇರಾದೆ ಏನೆಂಬುದನ್ನು ತಿಳಿದುಕೊಳ್ಳಬಯಸುವವರಿಗೆ ಇಲ್ಲಿದೆ ಮಾಹಿತಿ.

Vijaya Karnataka Web 9 Apr 2020, 11:18 am
ನವದೆಹಲಿ: ಒಬ್ಬರು ಪ್ರತೀಕಾರದ ಮಾತನಾಡಿದರು. ಮತ್ತೊಬ್ಬರು ರಾಮಾಯಣದ ಕತೆ ಹೇಳಿ ಸಹಾಯ ಬೇಡಿದರು. ಸಹಾಯಕ್ಕಾಗಿ ಇನ್ನೂ ಹಲವರು ಸರತಿ ಸಾಲಿನಲ್ಲಿ ನಿಂತು ಭಾರತದ ಬಾಗಿಲು ತಟ್ಟುತ್ತಿದ್ದಾರೆ.
Vijaya Karnataka Web Modi
ಸಾಂದರ್ಭಿಕ ಚಿತ್ರ


ಹೌದು, ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಚಿಕ್ಕದೊಂದು ಮಾತ್ರೆ ಇಡೀ ಜಗತ್ತನ್ನು ಭಾರತದ ಪ್ರಧಾನಿ ಕಚೇರಿಯ ಬಾಗಿಲಿಗೆ ತಂದು ನಿಲ್ಲಿಸಿದೆ. ಭಾರತ ಎಂದರೆ ಮಲೇರಿಯಾ, ಪೋಲಿಯೋ ಮುಂತಾದ ಮಾರಕ ರೋಗಗಳ ತಾಣ ಎಂದು ಈ ಹಿಂದೆಲ್ಲಾ ಕುಹುಕವಾಡಿದ್ದವರು ಅದೇ ಮಲೇರಿಯಾ ಔ‍ಷಧಿಗಾಗಿ ಭಾರತದ ದುಂಬಾಲು ಬಿದ್ದಿದ್ದಾರೆ.

ಇಡೀ ಜಗತ್ತನ್ನು ಆವರಿಸಿಕೊಂಡಿರುವ ಮಾರಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಮಲೇರಿಯಾ ರೋಗಕ್ಕೆ ನೀಡುವ ಔಷಧಿ ಪರಿಣಾಮಕಾರಿಯಾಗಬಲ್ಲದು ಎಂಬ ಸತ್ಯ ಅರಿತಿದ್ದೇ ತಡ, ಈ ಮಾತ್ರೆಗಳನ್ನು ಭಾರೀ ಪ್ರಮಾಣದಲ್ಲಿ ಉತ್ಪಾದಿಸುವ ಭಾರತಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳಿಂದ ಮನವಿಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತದ ಒಂದು ಮಾತ್ರೆಯ ಹಿಂದೆ ಬಿದ್ದ ಜಗತ್ತು: ಯಾರಿಗೆ ಪ್ರಾಶಸ್ತ್ಯ ಕೊಡ್ತಾರೆ ವಿಶ್ವ ನಾಯಕ?

ಆದರೆ ಈ ಎಲ್ಲ ಗಡಿಬಿಡಿಗಳ ನಡುವೆ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ಒಳಗೊಂಡಂತೆ ಒಟ್ಟು 24 ಮಾತ್ರೆಗಳನ್ನು ವಿದೇಶಗಳಿಗೆ ರಫ್ತು ಮಾಡಲು ನಿರ್ಧಾರಿಸಿದ ಬಗೆ ಹೇಗೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಅಸಲಿಗೆ ಟ್ರಂಪ್ ಗುಡುಗಿದರೆಂದೋ ಅಥವಾ ಮತ್ತ್ಯಾರೋ ಮನವಿ ಮಾಡಿದರೆಂದೋ ಭಾರತ ಮಲೇರಿಯಾ ಮಾತ್ರೆಗಳನ್ನು ವಿದೇಶಕ್ಕೆ ರಫ್ತು ಮಾಡಲು ಒಪ್ಪಿಕೊಂಡಿಲ್ಲ. ಬದಲಿಗೆ ಈ ಮೊದಲೇ ಸ್ವಂತಕ್ಕೂ ಬಳಸಿ ಇಡೀ ವಿಶ್ವಕ್ಕೂ ರಫ್ತು ಮಾಡುವ ನಿರ್ಧಾರವನ್ನು ಭಾರತ ತೆಗೆದುಕೊಂಡಾಗಿತ್ತು.

ಮೂಲಗಳ ಪ್ರಕಾರ ಸುಮಾರು 1 ಕೋಟಿ ಮಾತ್ರೆಗಳನ್ನು ವಿದೇಶಗಳಿಗೆ ಹಂತ ಹಂತವಾಗಿ ರಫ್ತು ಮಾಡಲು ಭಾರತ ಮೊದಲೇ ಯೋಜನೆ ರೂಪಿಸಿತ್ತು. ತನಗೆ ಸಾಕಾಗುವಷ್ಟು ಮಾತ್ರೆಗಳನ್ನು ಉತ್ಪಾದಿಸಿದ ಬಳಿಕವಷ್ಟೇ ಇತರ ದೇಶಗಳಿಗೆ ರಫ್ತು ಮಾಡುವ ಯೋಜನೆಗೆ ಮೋದಿ ಸರ್ಕಾರ ಸೈ ಎಂದಿತ್ತು.

ಈ ಎಲ್ಲ ಯೋಜನೆಗಳ ಜವಬ್ದಾರಿ ಹೊತ್ತಿದ್ದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(NPPA), ವಿದೇಶಾಂಗ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಈ ಮಾತ್ರೆಗಳನ್ನು ರಫ್ತು ಮಾಡುವ ಬಗೆ, ಯಾವ ದೇಶಕ್ಕೆ ಎಷ್ಟು ಪ್ರಮಾಣದ ಮಾತ್ರೆಗಳನ್ನು ರಫ್ತು ಮಾಡುವ ಕುರಿತು NPPA ಹಾಗೂ ವಿದೇಶಾಂಗ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಿತ್ತು.

ಭಾರತವನ್ನು ಎಂದಿಗೂ ಮರೆಯಲ್ಲ: ಕೊರೊನಾ ಲಸಿಕೆ ಹಂಚಿಕೆಯ ಪರೋಕ್ಷ ಸುಳಿವು ಕೊಟ್ಟ ಟ್ರಂಪ್?

ಒಟ್ಟಿನಲ್ಲಿ ಸಂಕಷ್ಟದ ಸಮಯದಲ್ಲಿ ಭಾರತ ತನ್ನನ್ನೂ ಒಳಗೊಂಡಂತೆ ಇಡೀ ವಿಶ್ವವನ್ನು ರಕ್ಷಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದು ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ