ಆ್ಯಪ್ನಗರ

ರಾಮಜನ್ಮಭೂಮಿಯಲ್ಲಿ ಯೋಗಿ ವಿಶೇಷ ಪೂಜೆ: ದೀಪೋತ್ಸವದಲ್ಲಿ ಪಾಲ್ಗೊಳ್ಳಲಿರುವ ಯುಪಿ ಸಿಎಂ!

ದೀಪಾವಳಿ ಹಿನ್ನೆಲೆಯಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಆಗಮಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಮಜಜ್ಮಭೂಮಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

Vijaya Karnataka Web 13 Nov 2020, 4:11 pm
ಅಯೋಧ್ಯೆ: ದೀಪಾವಳಿ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಭು ಶ್ರೀರಾಮನ ನಗರಿ ನವ ವಧುವಿನಿಂತೆ ಕಂಗೊಳಿಸುತ್ತಿದೆ.
Vijaya Karnataka Web Yogi Adityanath
ರಾಮ ಜನ್ಮಭೂಮಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯೋಗಿ ಆದಿತ್ಯನಾಥ್


ಈ ಮಧ್ಯೆ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಆಗಮಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಮಜಜ್ಮಭೂಮಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ರಾಮ ಜನ್ಮಭೂಮಿಯಲ್ಲಿರುವ ಪ್ರಭು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ ಯೋಗಿ ಆದಿತ್ಯನಾಥ್, ಶ್ರೀರಾಮನ ಮೂರ್ತಿಗೆ ಆರತಿ ಬೆಳಗುವ ಮೂಲಕ ಗಮನ ಸೆಳೆದರು.

ಅಯೋಧ್ಯೆಯಲ್ಲಿ ದೀಪಾವಳಿ ದೀಪೋತ್ಸವಕ್ಕೆ ಕ್ಷಣಗಣನೆ..! ಶೋಭಾಯಾತ್ರೆಯಲ್ಲಿ ರಾಮ ನಾಮ ಜಪ

ಇದೇ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ್, ಈ ಬಾರಿಯ ದೀಪಾವಳಿ ಅಯೋಧ್ಯೆಯೂ ಸೇರಿದಂತೆ ಇಡೀ ಭಾರತಕ್ಕೆ ಅತ್ಯಂತ ವಿಶೇಷವಾದ್ದದ್ದು ಎಂದು ಹೇಳಿದರು.

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಈಗಾಗಲೇ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ರಾಮಜನ್ಮಭೂಮಿಯಲ್ಲಿ ಭವ್ಯವಾದ ರಾಮ ಮಂದಿರ ತಲೆ ಎತ್ತಲಿದ್ದು, ಇದಕ್ಕಾಗಿ ಸಮಸ್ತ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.


ಈ ಬಾರಿ ಅಯೋಧ್ಯೆಯಲ್ಲಿ ಅತ್ಯಂತ ಸಂಭ್ರಮದ ದೀಪಾವಳಿಯನ್ನು ಆರಿಸಲಾಗುವುದು ಎಂದ ಯೋಗಿ ಆದಿತ್ಯನಾಥ್, ಲಕ್ಷ ದೀಪೋತ್ಸವ ಕಾರ್ಯಕ್ರಮದ ಮೂಲಕ ಈ ಸಂಭ್ರಮಾಚರಣೆಗೆ ಚಾಲನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಮಜನ್ಮಭೂಮಿಯಲ್ಲಿ ವೈಭವದ ದೀಪೋತ್ಸವಕ್ಕೆ ಸಿದ್ಧತೆ

ಯೋಗಿ ಆದಿತ್ಯನಾಥ್ ಪ್ರತಿ ಬಾರಿಯೂ ದೀಪಾವಳಿಯ ಮುನ್ನಾದಿನ ಅಯೋಧ್ಯೆಯಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ವಿಶೇಷ.

ಈ ಬಾರಿ ಅಯೋಧ್ಯೆಯಲ್ಲಿ 5 ಲಕ್ಷದ 51 ಸಾವಿರ ದೀಪಗಳನ್ನು ಬೆಳಗಲು ನಿರ್ಧರಿಸಲಾಗಿದ್ದು, ‘ರಾಮ್‌ ಕಿ ಪೈಡಿ ಘಾಟ್‌’ ದೀಪೋತ್ಸವಕ್ಕೆ ಸರ್ವ ಸನ್ನದ್ಧವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ