ಆ್ಯಪ್ನಗರ

ನಿತ್ಯ 300 ಮಂದಿಗೆ ಉಚಿತವಾಗಿ ತಿಂಡಿ ಹಂಚುವ ಹೋಟೆಲ್‌ ಮಾಲೀಕ

ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ರಮೇಶ್‌

Vijaya Karnataka Web 21 Jun 2018, 8:13 pm
ಕೊಯಮತ್ತೂರು: ಈಗಿನ ಕಾಲದಲ್ಲಿ ದಾನ ಧರ್ಮ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು ಇಲ್ಲ. ಆದರೆ ಇಂಥ ಕಾಲದಲ್ಲಿ ವಿಭಿನ್ನವಾಗಿ ಕಾಣುತ್ತಾರೆ ಕೊಯಮತ್ತೂರಿನ ಹೋಟೆಲ್‌ ಮಾಲೀಕ ರಮೇಶ್‌.
Vijaya Karnataka Web ನಿತ್ಯ ಅನ್ನದಾನ
ನಿತ್ಯ ಅನ್ನದಾನ


ಕೊಯಮತ್ತೂರಿನ ರಾಮ್‌ ನಗರ್‌ನಲ್ಲಿರುವ ವಿಜಯ್‌ ಪಾರ್ಕ್‌ ಇನ್‌ ಹೋಟೆಲ್‌ ಮಾಲೀಕರಾದ ರಮೇಶ್‌ ನಿತ್ಯವೂ ಅನ್ನದಾನ ಮಾಡುತ್ತಿದ್ದಾರೆ.

ಸುಮಾರು 300 ಮಂದಿಗೆ ಪ್ರತಿ ನಿತ್ಯ ಬೆಳಗಿನ ತಿಂಡಿಯನ್ನು ರಮೇಶ್‌ ಒದಗಿಸುತ್ತಿದ್ದಾರೆ.

ಇಡ್ಲಿ, ವಡಾ, ಉಪ್ಪಿಟ್ಟು ಅಥವಾ ಪೊಂಗಲ್‌ ಅನ್ನು 300 ಮಂದಿಗೆ ಉಣ ಬಡಿಸುತ್ತಿದ್ದಾರೆ.

ಹಸಿದವರಿಗೆ ಊಟ


ಕಳೆದ ಹಲವಾರು ವರ್ಷಗಳಿಂದಲೂ ಈ ಸೇವೆಯಲ್ಲಿ ತೊಡಗಿರುವ ರಮೇಶ್‌ ಇದಕ್ಕಾಗಿ ಯಾರಿಂದಲೂ ಧನ ಸಹಾಯ ಪಡೆಯುತ್ತಿಲ್ಲ. ತಮ್ಮ ಸ್ವಂತ ಹಣದಿಂದಲೇ ಈ ನಿತ್ಯ ಅನ್ನದಾನ ಸೇವೆಯಲ್ಲಿ ತೊಡಗಿದ್ದಾರೆ.

ಒಂದು ವೇಳೆ ಹೋಟೆಲ್‌ನಲ್ಲಿ ತಿಂಡಿ ಮಿಕ್ಕಿದ್ದರೆ ಅದನ್ನು ಸಮೀಪದ ವೃದ್ಧಾಶ್ರಮ ಅಥವಾ ಹಸಿದವರಿಗೆ ನೀಡುತ್ತಿದ್ದಾರೆ ರಮೇಶ್‌.

ಈ ಕುರಿತು ಮಾತನಾಡಿರುವ ರಮೇಶ್‌, ಹಸಿದವರಿಗೆ ಅನ್ನದ ಬೆಲೆ ಗೊತ್ತಿದೆ. ಅದರ ಬೆಲೆ ನನಗೂ ಗೊತ್ತಿದೆ. ಈ ತಿಂಡಿಯನ್ನು ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಮಧ್ಯಾಹ್ನ ಊಟವನ್ನು ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.

ಕಳೆದ ಡಿಸೆಂಬರ್ ತಿಂಗಳಲ್ಲಿ ಸರಕಾರಿ ಆಸ್ಪತ್ರೆಗೆ 2400 ಬೆಡ್‌ಶೀಟ್‌ಗಳನ್ನು ರಮೇಶ್‌ ದಾನವಾಗಿ ನೀಡಿದ್ದರು.

ಮೂಲ ವರದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ