ಮುಂಬಯಿ: ''ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ನ್ಯಾಯಾಲಯಗಳೇ ಅಡ್ಡಗಾಲಾಗಿವೆ,'' ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಕೊಲಿಜಿಯಂ ವ್ಯವಸ್ಥೆ ಅಪಾರದರ್ಶಕವಾಗಿದೆ ಮತ್ತು ಹೊಣೆಗಾರಿಕೆ ಹೊಂದಿಲ್ಲ. ಸರಕಾರವು ಪರ್ಯಾಯ ವ್ಯವಸ್ಥೆ ತರುವವರೆಗೂ ಹಾಲಿ ವ್ಯವಸ್ಥೆಯೊಂದಿಗೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಮುಂಬಯಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಿಜಿಜು, ನ್ಯಾಯಮೂರ್ತಿಗಳ ನೇಮಕ ಮಾಡಲು ಸುಪ್ರೀಂಕೋರ್ಟ್ನಲ್ಲಿ ಜಾರಿಯಲ್ಲಿ ಇರುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕಿಡಿಕಾರಿದರು.
''ಕೊಲಿಜಿಯಂ ಮೂಲಕ ನಡೆಯುತ್ತಿರುವ ನ್ಯಾಯಾಧೀಶರ ನೇಮಕಾತಿ ಪಾರದರ್ಶಕವಾಗಿಲ್ಲ. ಅರ್ಹತೆ, ಕ್ಷಮತೆ ಮೇಲೆ ಜಡ್ಜ್ಗಳ ನೇಮಕವಾಗಬೇಕೇ ಹೊರತು ಕೊಲಿಜಿಯಂ ಸದಸ್ಯರಿಗೆ ಪರಿಚಯ ಇದ್ದವರನ್ನು ನ್ಯಾಯಾಧೀಶರ ಸ್ಥಾನಕ್ಕೆ ನೇಮಿಸಬಾರದು,'' ಎಂದು ಅಸಮಾಧಾನ ಹೊರ ಹಾಕಿದರು.
''ನ್ಯಾಯಾಂಗ ವ್ಯವಸ್ಥೆಯನ್ನು ಸ್ವಾತಂತ್ರ್ಯವಾಗಿಡಲು ಸರಕಾರ ಬಯಸುತ್ತದೆ. ಅದೇ ರೀತಿ ಶಾಸಕಾಂಗ ಹಾಗೂ ಕಾರ್ಯಾಂಗದ ಕೆಲಸದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಬಾರದು. ಪ್ರಕರಣದ ವಿಚಾರಣೆ ನಡೆಸುವ ಜಡ್ಜ್ಗಳು ಅನಗತ್ಯ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಾದ ಕ್ರಮವಲ್ಲ. ಲಿಖಿತ ಆದೇಶದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬೇಕು,'' ಎಂದು ಸಚಿವರು ಹೇಳಿದರು.
ಕೊಲಿಜಿಯಂ ವ್ಯವಸ್ಥೆ ಉಲ್ಲೇಖಿಸಿ, ನ್ಯಾಯಾಂಗ ವ್ಯವಸ್ಥೆಯೂ ರಾಜಕೀಯ ಪ್ರಭಾವದೊಳಗೆ ಸಿಲುಕಿದೆ ಎಂದು ಹೇಳಿದ ರಿಜಿಜು, ''ನ್ಯಾಯಾಧೀಶರು ರಾಜಕೀಯ ಪಕ್ಷಪಾತವನ್ನು ಎಂದೂ ತಳೆಯಬಾರದು,'' ಎಂದು ಸಲಹೆ ನೀಡಿದರು.
''ಜಗತ್ತಿನಾದ್ಯಂತ ನ್ಯಾಯಾಧೀಶರನ್ನು ಸರಕಾರ ನೇಮಿಸಿದರೆ ನಮ್ಮ ದೇಶದಲ್ಲಿ ಜಡ್ಜ್ಗಳ ನೇಮಕದ ಹಕ್ಕು ಕೊಲಿಜಿಯಂ ಹಿಡಿದಿಟ್ಟುಕೊಂಡಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕಾಂಗ ನ್ಯಾಯಾಂಗ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಕೋರ್ಟ್ ಗಳಿಗೆ ತಾಕೀತು ಮಾಡಿದರು.
ನ್ಯಾಯಾಂಗ ನೇಮಕಾತಿ ಆಯೋಗ ರದ್ದು ಮಾಡಿದ ಕ್ರಮ, ದೇಶದ್ರೋಹ ಕಾಯಿದೆ ರದ್ದು ಮಾಡುವಂತೆ ಸಲಹೆ ನೀಡಿರುವ ಸುಪ್ರೀಂಕೋರ್ಟ್ ಸಲಹೆಗೆ ಆಕ್ಷೇಪಿಸಿದರು. ''ಪ್ರಜಾಪ್ರಭುತ್ವದ ಮೂರು ಅಂಗಗಳಿಗೆ ಅದರದೇ ಆದ ಕಾರ್ಯವ್ಯಾಪ್ತಿ ನಿಗದಿ ಮಾಡಿದೆ. ಎಲ್ಲರೂ ತಮಗೆ ವಿಧಿಸಿದ ಲಕ್ಷ್ಮಣ ರೇಖೆ ದಾಟದೆ ಕರ್ತವ್ಯ ನಿರ್ವಹಣೆ ಮಾಡುವುದು ಉತ್ತಮ,'' ಎಂದು ಸಲಹೆ ನೀಡಿದರು.
ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ತನಗೆ ಇರುವ 'ಲಕ್ಷ್ಮಣ ರೇಖೆ' ಬಗ್ಗೆ ಪ್ರಸ್ತಾಪಿಸಿತ್ತು. 2016ರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನೋಟು ರದ್ದತಿ ನಿರ್ಧಾರದ ವಿರುದ್ಧ ದಾಖಲಾದ ಅರ್ಜಿ ವಿಚಾರಣೆಗೆ ಸಮ್ಮತಿಸಿದ್ದ ಕೋರ್ಟ್, ತನ್ನ ಮಿತಿಯ ನಡುವೆಯೂ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತ್ತು.
''ಕೊಲಿಜಿಯಂ ಮೂಲಕ ನಡೆಯುತ್ತಿರುವ ನ್ಯಾಯಾಧೀಶರ ನೇಮಕಾತಿ ಪಾರದರ್ಶಕವಾಗಿಲ್ಲ. ಅರ್ಹತೆ, ಕ್ಷಮತೆ ಮೇಲೆ ಜಡ್ಜ್ಗಳ ನೇಮಕವಾಗಬೇಕೇ ಹೊರತು ಕೊಲಿಜಿಯಂ ಸದಸ್ಯರಿಗೆ ಪರಿಚಯ ಇದ್ದವರನ್ನು ನ್ಯಾಯಾಧೀಶರ ಸ್ಥಾನಕ್ಕೆ ನೇಮಿಸಬಾರದು,'' ಎಂದು ಅಸಮಾಧಾನ ಹೊರ ಹಾಕಿದರು.
''ನ್ಯಾಯಾಂಗ ವ್ಯವಸ್ಥೆಯನ್ನು ಸ್ವಾತಂತ್ರ್ಯವಾಗಿಡಲು ಸರಕಾರ ಬಯಸುತ್ತದೆ. ಅದೇ ರೀತಿ ಶಾಸಕಾಂಗ ಹಾಗೂ ಕಾರ್ಯಾಂಗದ ಕೆಲಸದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಬಾರದು. ಪ್ರಕರಣದ ವಿಚಾರಣೆ ನಡೆಸುವ ಜಡ್ಜ್ಗಳು ಅನಗತ್ಯ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಾದ ಕ್ರಮವಲ್ಲ. ಲಿಖಿತ ಆದೇಶದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬೇಕು,'' ಎಂದು ಸಚಿವರು ಹೇಳಿದರು.
ಕೊಲಿಜಿಯಂ ವ್ಯವಸ್ಥೆ ಉಲ್ಲೇಖಿಸಿ, ನ್ಯಾಯಾಂಗ ವ್ಯವಸ್ಥೆಯೂ ರಾಜಕೀಯ ಪ್ರಭಾವದೊಳಗೆ ಸಿಲುಕಿದೆ ಎಂದು ಹೇಳಿದ ರಿಜಿಜು, ''ನ್ಯಾಯಾಧೀಶರು ರಾಜಕೀಯ ಪಕ್ಷಪಾತವನ್ನು ಎಂದೂ ತಳೆಯಬಾರದು,'' ಎಂದು ಸಲಹೆ ನೀಡಿದರು.
''ಜಗತ್ತಿನಾದ್ಯಂತ ನ್ಯಾಯಾಧೀಶರನ್ನು ಸರಕಾರ ನೇಮಿಸಿದರೆ ನಮ್ಮ ದೇಶದಲ್ಲಿ ಜಡ್ಜ್ಗಳ ನೇಮಕದ ಹಕ್ಕು ಕೊಲಿಜಿಯಂ ಹಿಡಿದಿಟ್ಟುಕೊಂಡಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕಾಂಗ ನ್ಯಾಯಾಂಗ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಕೋರ್ಟ್ ಗಳಿಗೆ ತಾಕೀತು ಮಾಡಿದರು.
ನ್ಯಾಯಾಂಗ ನೇಮಕಾತಿ ಆಯೋಗ ರದ್ದು ಮಾಡಿದ ಕ್ರಮ, ದೇಶದ್ರೋಹ ಕಾಯಿದೆ ರದ್ದು ಮಾಡುವಂತೆ ಸಲಹೆ ನೀಡಿರುವ ಸುಪ್ರೀಂಕೋರ್ಟ್ ಸಲಹೆಗೆ ಆಕ್ಷೇಪಿಸಿದರು. ''ಪ್ರಜಾಪ್ರಭುತ್ವದ ಮೂರು ಅಂಗಗಳಿಗೆ ಅದರದೇ ಆದ ಕಾರ್ಯವ್ಯಾಪ್ತಿ ನಿಗದಿ ಮಾಡಿದೆ. ಎಲ್ಲರೂ ತಮಗೆ ವಿಧಿಸಿದ ಲಕ್ಷ್ಮಣ ರೇಖೆ ದಾಟದೆ ಕರ್ತವ್ಯ ನಿರ್ವಹಣೆ ಮಾಡುವುದು ಉತ್ತಮ,'' ಎಂದು ಸಲಹೆ ನೀಡಿದರು.
ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ತನಗೆ ಇರುವ 'ಲಕ್ಷ್ಮಣ ರೇಖೆ' ಬಗ್ಗೆ ಪ್ರಸ್ತಾಪಿಸಿತ್ತು. 2016ರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನೋಟು ರದ್ದತಿ ನಿರ್ಧಾರದ ವಿರುದ್ಧ ದಾಖಲಾದ ಅರ್ಜಿ ವಿಚಾರಣೆಗೆ ಸಮ್ಮತಿಸಿದ್ದ ಕೋರ್ಟ್, ತನ್ನ ಮಿತಿಯ ನಡುವೆಯೂ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತ್ತು.