ಹೊಸದಿಲ್ಲಿ: ಲಡಾಖ್ ಗಡಿಯಲ್ಲಿ ಈ ವರ್ಷ ನಮ್ಮ ರಕ್ಷಣಾ ಪಡೆಗಳು ತೋರಿದ ಅಪ್ರತಿಮ ಧೈರ್ಯ ಹಾಗೂ ಚೀನಿ ಸೇನೆಯನ್ನು ಎದುರಿಸಿದ ರೀತಿಗೆ, ದೇಶದ ಭವಿಷ್ಯದ ಪೀಳಿಗೆ ಹೆಮ್ಮೆಪಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
FICCIn ವಾರ್ಷಿಕ ಸಮಾವೇಶದ ಸಮಾರೋಪ ಸಮಾರಂಭವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಲಡಾಖ್ ಗಡಿ ಸಂಘರ್ಷದಲ್ಲಿ ಭಾರತೀಯ ಸೈನಿಕರ ಸಮರ್ಪಣಾ ಭಾವವನ್ನು ಕೊಂಡಾಡಿದರು.
ಲಡಾಖ್ ಗಡಿಯಲ್ಲಿ ಹೂಂಕರಿಸಿ ಬಂದ ಚೀನಿ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ನಮ್ಮ ಸಶಸ್ತ್ರ ಪಡೆಗಳು ಯಶಸ್ವಿಯಾಗಿದ್ದು, ಇದು ದೇಶದ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಚೀನಾ ಸೈನಿಕ ಸಾಮರ್ಥ್ಯದ ಕುರಿತು ಪ್ರಸ್ತಾಪವಾದಾಗಲೆಲ್ಲಾ, ಲಡಾಖ್ ಗಡಿ ಸಂಘರ್ಷದಲ್ಲಿ ಭಾರತೀಯ ಯೋಧರು ತೋರಿದ ಅಪ್ರತಿಮೆ ಶೌರ್ಯವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಬೇರೆ ದಾರಿಯಿಲ್ಲ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
15 ದಿನದ ಯುದ್ಧಕ್ಕಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹಣೆಗೆ ಕೇಂದ್ರ ಅಸ್ತು:ನಿಯಮ ಬದಲಾವಣೆ ಏಕೆ?
ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯೊಂದಿಗೆ ವಿನಾಕಾರನ ಕ್ಯಾತೆ ತೆಗೆದ ಚೀನಾ, ಜಗತ್ತಿಗೆ ಭಾರತೀಯ ಸೈನಿಕರ ಶೌರ್ಯದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಜಾಗತಿಕ ಸೈನ್ಯ ಸಾಮರ್ಥ್ಯದಲ್ಲಾಗಿರುವ ಬದಲಾವಣೆಗಳ ವಿಶ್ಲೇಷಣೆಗೂ ಅನುವು ಮಾಡಿಕೊಟ್ಟಿದೆ ಎಂದು ರಾಜನಾಥ್ ನುಡಿದಿದ್ದಾರೆ.
ಸುದೀರ್ಘ ಲಡಾಖ್ ಗಡಿ ಸಂಘರ್ಷದ ಪರಿಣಾಮವಾಗಿ ಜಗತ್ತಿಗೆ ಭಾರತೀಯ ಸಶಸ್ತ್ರ ಪಡೆಗಳ ತಾಕತ್ತಿನ ಅರಿವಾಗಿದೆ. ಅಲ್ಲದೇ ಸಂಕಷ್ಟದ ಸಮಯದಲ್ಲಿ ನಮ್ಮ ಮೂರೂ ರಕ್ಷಣಾ ಪಡೆಗಳು ಹೇಗೆ ಯುದ್ಧ ತಯಾರಿ ನಡೆಸಬಲ್ಲವು ಹಾಗೂ ಶತ್ರುಗಳಿಗೆ ಹೊಡೆತ ನೀಡಬಲ್ಲವು ಎಂಬುದರ ಪರಿಚಯವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಭಾರತ ಯಾವುದೇ ಸಂಭಾವ್ಯ ಬಾಹ್ಯ ದಾಳಿಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂಬ ಸಂದೇಶ ರವಾನಿಸುವಲ್ಲಿ ಲಡಾಖ್ ಗಡಿ ಸಂಘರ್ಷ ಯಶಸ್ವಿಯಾಗಿದೆ. ನಮ್ಮ ರಕ್ಷಣಾ ಪಡೆಗಳು ಈ ಅಪ್ರತಿಮ ಶೌರ್ಯ ಪ್ರದರ್ಶನವನ್ನು ದೇಶದ ಭವಿಷ್ಯದ ಪೀಳಿಗೆ ಹೆಮ್ಮೆಯಿಂದ ನೆನೆಸಿಕೊಳ್ಳಲಿದೆ ಎಂದು ರಾಜನಾಥ್ ಭರವಸೆ ವ್ಯಕ್ತಪಡಿಸಿದರು.
ಲಡಾಕ್ ಗಡಿಯಲ್ಲಿ 'ಮಾರ್ಕೊಸ್' ನಿಯೋಜನೆ, ಸೇನೆಯ ಮೂರೂ ದಳಗಳಿಂದ ಬಿಗಿ ಕಾವಲು
ಕೇವಲ ಹಿಮಾಲಯ ಮಾತ್ರವಲ್ಲದೇ ಇಂಡೋ-ಪೆಸಿಫಿಕ್ ಭಾಗದಲ್ಲೂ ಸಾಮರಿಕ ಸ್ಥಿತಿಗತಿಗಳು ಬದಲಾಗಿದ್ದು, ವಿಸ್ತರಣವಾದಿಗಳ ವಿರುದ್ಧ ಜಾಗತಿಕ ರಕ್ಷಣಾ ಕೂಟ ರಚನೆಯಾಗಿರುವುದನ್ನು ಜಗತ್ತು ಗಮನಿಸಿದೆ ಎಂದು ರಾಜನಾಥ್ ಸಿಂಗ್ ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸಿದರು.
FICCIn ವಾರ್ಷಿಕ ಸಮಾವೇಶದ ಸಮಾರೋಪ ಸಮಾರಂಭವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಲಡಾಖ್ ಗಡಿ ಸಂಘರ್ಷದಲ್ಲಿ ಭಾರತೀಯ ಸೈನಿಕರ ಸಮರ್ಪಣಾ ಭಾವವನ್ನು ಕೊಂಡಾಡಿದರು.
ಲಡಾಖ್ ಗಡಿಯಲ್ಲಿ ಹೂಂಕರಿಸಿ ಬಂದ ಚೀನಿ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ನಮ್ಮ ಸಶಸ್ತ್ರ ಪಡೆಗಳು ಯಶಸ್ವಿಯಾಗಿದ್ದು, ಇದು ದೇಶದ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಚೀನಾ ಸೈನಿಕ ಸಾಮರ್ಥ್ಯದ ಕುರಿತು ಪ್ರಸ್ತಾಪವಾದಾಗಲೆಲ್ಲಾ, ಲಡಾಖ್ ಗಡಿ ಸಂಘರ್ಷದಲ್ಲಿ ಭಾರತೀಯ ಯೋಧರು ತೋರಿದ ಅಪ್ರತಿಮೆ ಶೌರ್ಯವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಬೇರೆ ದಾರಿಯಿಲ್ಲ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
15 ದಿನದ ಯುದ್ಧಕ್ಕಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹಣೆಗೆ ಕೇಂದ್ರ ಅಸ್ತು:ನಿಯಮ ಬದಲಾವಣೆ ಏಕೆ?
ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯೊಂದಿಗೆ ವಿನಾಕಾರನ ಕ್ಯಾತೆ ತೆಗೆದ ಚೀನಾ, ಜಗತ್ತಿಗೆ ಭಾರತೀಯ ಸೈನಿಕರ ಶೌರ್ಯದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಜಾಗತಿಕ ಸೈನ್ಯ ಸಾಮರ್ಥ್ಯದಲ್ಲಾಗಿರುವ ಬದಲಾವಣೆಗಳ ವಿಶ್ಲೇಷಣೆಗೂ ಅನುವು ಮಾಡಿಕೊಟ್ಟಿದೆ ಎಂದು ರಾಜನಾಥ್ ನುಡಿದಿದ್ದಾರೆ.
ಸುದೀರ್ಘ ಲಡಾಖ್ ಗಡಿ ಸಂಘರ್ಷದ ಪರಿಣಾಮವಾಗಿ ಜಗತ್ತಿಗೆ ಭಾರತೀಯ ಸಶಸ್ತ್ರ ಪಡೆಗಳ ತಾಕತ್ತಿನ ಅರಿವಾಗಿದೆ. ಅಲ್ಲದೇ ಸಂಕಷ್ಟದ ಸಮಯದಲ್ಲಿ ನಮ್ಮ ಮೂರೂ ರಕ್ಷಣಾ ಪಡೆಗಳು ಹೇಗೆ ಯುದ್ಧ ತಯಾರಿ ನಡೆಸಬಲ್ಲವು ಹಾಗೂ ಶತ್ರುಗಳಿಗೆ ಹೊಡೆತ ನೀಡಬಲ್ಲವು ಎಂಬುದರ ಪರಿಚಯವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಭಾರತ ಯಾವುದೇ ಸಂಭಾವ್ಯ ಬಾಹ್ಯ ದಾಳಿಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂಬ ಸಂದೇಶ ರವಾನಿಸುವಲ್ಲಿ ಲಡಾಖ್ ಗಡಿ ಸಂಘರ್ಷ ಯಶಸ್ವಿಯಾಗಿದೆ. ನಮ್ಮ ರಕ್ಷಣಾ ಪಡೆಗಳು ಈ ಅಪ್ರತಿಮ ಶೌರ್ಯ ಪ್ರದರ್ಶನವನ್ನು ದೇಶದ ಭವಿಷ್ಯದ ಪೀಳಿಗೆ ಹೆಮ್ಮೆಯಿಂದ ನೆನೆಸಿಕೊಳ್ಳಲಿದೆ ಎಂದು ರಾಜನಾಥ್ ಭರವಸೆ ವ್ಯಕ್ತಪಡಿಸಿದರು.
ಲಡಾಕ್ ಗಡಿಯಲ್ಲಿ 'ಮಾರ್ಕೊಸ್' ನಿಯೋಜನೆ, ಸೇನೆಯ ಮೂರೂ ದಳಗಳಿಂದ ಬಿಗಿ ಕಾವಲು
ಕೇವಲ ಹಿಮಾಲಯ ಮಾತ್ರವಲ್ಲದೇ ಇಂಡೋ-ಪೆಸಿಫಿಕ್ ಭಾಗದಲ್ಲೂ ಸಾಮರಿಕ ಸ್ಥಿತಿಗತಿಗಳು ಬದಲಾಗಿದ್ದು, ವಿಸ್ತರಣವಾದಿಗಳ ವಿರುದ್ಧ ಜಾಗತಿಕ ರಕ್ಷಣಾ ಕೂಟ ರಚನೆಯಾಗಿರುವುದನ್ನು ಜಗತ್ತು ಗಮನಿಸಿದೆ ಎಂದು ರಾಜನಾಥ್ ಸಿಂಗ್ ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸಿದರು.