ಆ್ಯಪ್ನಗರ

ಯೋಗಿ ಆದಿತ್ಯನಾಥ್ ವಿರುದ್ಧ ದೂರು ನೀಡಿದ್ದ ವ್ಯಕ್ತಿ ಸಾಮೂಹಿಕ ಅತ್ಯಾಚಾರ ಆರೋಪದಡಿ ಬಂಧನ

ಯೋಗಿ ಆದಿತ್ಯನಾಥ್ ಗೋರಖ್‌ಪುರ ಸಂಸದರಾಗಿದ್ದ ವೇಳೆ ಅವರ ವಿರುದ್ಧ ದ್ವೇಷ ಭಾಷಣದ ಎಫ್‌ಐಆರ್‌ ದಾಖಲಾಗಿತ್ತು. ಈ ಪ್ರಕರಣದ ವಿರುದ್ಧ ದೂರು ನೀಡಿದ್ದ ವ್ಯಕ್ತಿ ವಿರುದ್ಧವೇ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪ ಎದುರಾಗಿದೆ.

TIMESOFINDIA.COM 27 Sep 2018, 2:05 pm
[This story originally published in Times Of India on Sep 27, 2018]
Vijaya Karnataka Web yogi adityanath

ಗೋರಖ್‌ಪುರ
: ದ್ವೇಷ ಭಾಷಣ ಕೇಸ್‌ನಡಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ 2007ರಲ್ಲಿ ದೂರು ನೀಡಿದ್ದ ಪರ್ವೇಜ್ ಪರ್ವಾಜ್ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ. 62 ವರ್ಷದ ಪರ್ವೇಜ್ ಪರ್ವಾಜ್ ಸಾಮೂಹಿಕ ಅತ್ಯಾಚಾರ ಆರೋಪದಡಿ ಬಂಧನವಾಗಿದ್ದಾನೆ. ಯೋಗಿ ಆದಿತ್ಯನಾಥ್ ಗೋರಖ್‌ಪುರ ಸಂಸದರಾಗಿದ್ದ ವೇಳೆ ಅವರ ವಿರುದ್ಧ ದ್ವೇಷ ಭಾಷಣದ ಎಫ್‌ಐಆರ್‌ ದಾಖಲಾಗಿತ್ತು.

ತರಕಾರಿ ಮಾರುತ್ತಿದ್ದ ಮುಸ್ಲಿಂ ಮಹಿಳೆಯೊಬ್ಬರು ಜೂನ್ 3ರಂದು ತನಗೆ ಅತ್ಯಾಚಾರವಾಗಿದೆ ಎಂದು ರಾಜ್‌ಘಾಟ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಸಾಮೂಹಿಕ ಅತ್ಯಾಚಾರ ದೂರು ದಾಖಲಿಸಿಕೊಂಡಿರುವ ಪೊಲೀಸರು, ಬುಧವಾರ ಪರ್ವೇಜ್‌ರನ್ನು ಬಂಧಿಸಿದ್ದು ಮಹಮೂದ್ ಅಲಿಯಾಸ್‌ ಜುಮ್ಮಾನ್ ( 60 )ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ನಗರದ ಸೂಪರಿಟೆಂಡೆಂಟ್ ಆಫ್ ಪೊಲೀಸ್ ವಿನಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಕಣ್ಣಿನ ವೈದ್ಯರಾಗಿದ್ದ ಮಹಮೂದ್‌ ಬಳಿ ಚಿಕಿತ್ಸೆಗೆ ಹೋಗಿದ್ದಾಗ ತನ್ನ ಮೇಲೆ ಮಹಮೂದ್ ಹಾಗೂ ಪರ್ವೇಜ್ ಅತ್ಯಾಚಾರ ನಡೆಸಿದರು ಎಂದು ಸಂತ್ರಸ್ಥೆ ಮಹಿಳೆ ದೂರು ನೀಡಿದ್ದರು. ಇನ್ನು, ವೈದ್ಯಕೀಯ ಪರೀಕ್ಷೆಯಲ್ಲೂ ಸಹ ಅತ್ಯಾಚಾರವಾಗಿರುವುದು ಸಾಬೀತಾಗಿದೆ. ಅಲ್ಲದೆ, ''ತನಿಖೆ ವೇಳೆ ದಾಖಲಾತಿಗಳು ದೊರೆತ ಹಿನ್ನೆಲೆ ಪರ್ವೇಜ್‌ರನ್ನು ಬಂಧಿಸಿದ್ದೇವೆ'' ಎಂದು ಎಸ್‌ಪಿ ಹೇಳಿದ್ದಾರೆ.

ಜನವರಿ 27, 2007ರಂದು ಗೋರಖ್‌ಪುರದ ಮಹಾರಾಣ ಪ್ರತಾಪ್‌ ಚೌರಾಹಾದಲ್ಲಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ದ್ವೇಷ ಭಾಷಣ ಮಾಡಿದ್ದರು. ಇದರಿಂದಾಗಿ ಮೊಹರಮ್ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಜಗಳವಾಗಿದೆ ಎಂದು ಅತ್ಯಾಚಾರ ಆರೋಪಿ ಪರ್ವೇಜ್ ದೂರು ನೀಡಿದ್ದರು. ಆದರೆ, ಇದಕ್ಕೆ ದಾಖಲೆಯಾಗಿ ನೀಡಿದ್ದ ಸಿ.ಡಿ.ಯನ್ನು ವಿರೂಪಗೊಳಿಸಲಾಗಿದೆ ಎಂದು ಸೆಷನ್ಸ್ ಕೋರ್ಟ್‌ ಪರ್ವೇಜ್ ದೂರನ್ನು ತಿರಸ್ಕರಿಸಿತ್ತು. ನಂತರ, ಪ್ರಕರಣದ ಮರು ತನಿಖೆ ನಡೆಸಿ ಎಂದು ಪರ್ವೇಜ್ ಹೈಕೋರ್ಟ್ ಮೊರೆ ಹೋಗಿದ್ದ. ಇದಕ್ಕೂ ರಾಜ್ಯ ಸರಕಾರ ಕಾನೂನು ಸಮ್ಮತಿ ನೀಡಲು ತಿರಸ್ಕರಿಸಿದ್ದು ಆ ವೇಳೆಗಾಗಲೇ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಸಿಎಂ ಆಗಿದ್ದರು. ಇನ್ನು, ಫೆಬ್ರವರಿ 2018ರಂದು ಈ ಪ್ರಕರಣವನ್ನು ಹೈಕೋರ್ಟ್‌ ಸಹ ರದ್ದುಗೊಳಿಸಿದ್ದು, ತನಿಖೆಯ ವಿಧಾನದಲ್ಲಿ ಯಾವ ತಪ್ಪೂ ಕಂಡುಬಂದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ನಂತರ, ಸೆಪ್ಟೆಂಬರ್ 2018ರಲ್ಲಿ ಸುಪ್ರೀಂಕೋರ್ಟ್ ಸಹ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಲು ನಿರಾಕರಿಸಿದೆ. ಈ ಹಿನ್ನೆಲೆ, ಹೈಕೋರ್ಟ್ ಆದೇಶದ ಅನ್ವಯ ಸೆಷನ್ಸ್ ಕೋರ್ಟ್ ಎರಡೂ ಕಡೆಯವರಿಗೆ ನೋಟಿಸ್ ಕಳಿಸಿದ್ದು, ಅಕ್ಟೋಬರ್ 20ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ