ಆ್ಯಪ್ನಗರ

ಠಾಣೆ ಮೆಟ್ಟಿಲೇರಿದ ಕೋಳಿ ಜಗಳ

ಸಣ್ಣ ಪುಟ್ಟ ಜಗಳವಾಡಿದಾಗ 'ಕೋಳಿ ಜಗಳ'ವೆಂದು ಕರೆಯುವುದುಂಟು. ಆದರೆ, ಇದೇ ಕೋಳಿಯಿಂದಾದ ಜಗಳ ಠಾಣೆ ಮೆಟ್ಟಿಲೇರಿದ ಘಟನೆ ಇಲ್ಲಿನ ಕಲ್ಯಾಣ್ ಪಶ್ಚಿಮದ ಗೌರಿಪಾಡದಲ್ಲಿ ನಡೆದಿದೆ.

Maharashtra Times 18 Apr 2016, 6:28 pm
ಮುಂಬಯಿ: ಸಣ್ಣ ಪುಟ್ಟ ಜಗಳವಾಡಿದಾಗ 'ಕೋಳಿ ಜಗಳ'ವೆಂದು ಕರೆಯುವುದುಂಟು. ಆದರೆ, ಇದೇ ಕೋಳಿಯಿಂದಾದ ಜಗಳ ಠಾಣೆ ಮೆಟ್ಟಿಲೇರಿದ ಘಟನೆ ಇಲ್ಲಿನ ಕಲ್ಯಾಣ್ ಪಶ್ಚಿಮದ ಗೌರಿಪಾಡದಲ್ಲಿ ನಡೆದಿದೆ.
Vijaya Karnataka Web complaint registered for cockfight
ಠಾಣೆ ಮೆಟ್ಟಿಲೇರಿದ ಕೋಳಿ ಜಗಳ


ಶಾಂತರಾಮ್ ಮ್ಹಾತ್ರೆ ಎಂಬುವವರು ತಮ್ಮ ಮನೆಯಲ್ಲಿ ಕೋಳಿ ಸಾಕಿದ್ದರು. ಅದರಲ್ಲೊಂದು ಕೋಳಿ ಪಕ್ಕದ ಮನೆಯ ಅಂಗಳದಲ್ಲಿರುವ ಮರದ ಮೇಲೆ ಸದಾ ಕೂತಿರುತ್ತಿತ್ತು. ಇಷ್ಟಕ್ಕೇ ಆ ಮನೆಯ ಒಡೆಯ ವಿಲಾಸ್ ಮ್ಹಾತ್ರೆ ಕೋಳಿ 'ನಂದೇ' ಎಂದು ಹೇಳಲು ಆರಂಭಿಸಿದ.

ಅವರ ಮನೆಯ ಜಾಗದಲ್ಲಿದ್ದ ಮರದ ಮೇಲೆ ಈ ಕೋಳಿ ಕೂರುತ್ತಿದ್ದರಿಂದ ಕೋಳಿ ಅವನದ್ದೇ ಎನ್ನುವುದು ಅವನ ವಾದ. ಸರಿ ಇಬ್ಬರ ವಾದ ವಿವಾದಗಳು ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿದ್ದು, ಶಾಂತರಾಮ್‌ ಕೆನ್ನೆಗೆ ವಿಲಾಸ್ ಹೊಡೆದೇ ಬಿಟ್ಟ.

ಈ ಇಬ್ಬರ ಜಗಳ ಕೇಳಿಸಿಕೊಂಡ ಶಾಂತರಾಮ್ ಮಗ ಸ್ಥಳಕ್ಕೆ ದೌಡಾಯಿಸಿ, ತನ್ನ ತಂದೆಯನ್ನು ಬೆಂಬಲಿಸಿದ. ವಿಪರೀತ ಆಕ್ರೋಶಗೊಂಡ ವಿಲಾಸ್ ಇಬ್ಬರ ಮೇಲೂ ಕೈ ಮಾಡಿದ್ದಾನೆ.

ಒಟ್ಟಿನಲ್ಲಿ ಈ ಕೋಳಿ ಜಗಳ ಮೂವರನ್ನು ಗಾಯಗೊಳಿಸಿದ್ದು, ವಿಲಾಸ್ ಮ್ಹಾತ್ರೆ ವಿರುದ್ಧ ಶಾಂತರಾಮ್ ದೂರು ದಾಖಲಿಸಿದ್ದಾರೆ.

ಖಡಕಪಡ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ