ಆ್ಯಪ್ನಗರ

ಮತದಾನ ಕಡ್ಡಾಯ ಅಸಾಧ್ಯ: ಡಿವಿಎಸ್

ಮತದಾನ ಕಡ್ಡಾಯ ಮಾಡುವುದು ಪ್ರಸ್ತುತ ಸನ್ನಿವೇಶದಲ್ಲಿ ಅಸಾಧ್ಯವಾಗಿದೆ. ಆದರೆ, ಮತದಾನ ಸುಧಾರಣೆಯನ್ನು ಸರಕಾರ ಮುಂದುವರಿಸಲಿದೆ ಎಂದು ಕಾನೂನು ಸಚಿವ ಸದಾನಂದಗೌಡ ಲೋಕಸಭೆಗೆ ತಿಳಿಸಿದರು.

ಏಜೆನ್ಸೀಸ್ 27 Feb 2016, 4:00 am
ಹೊಸದಿಲ್ಲಿ: ಮತದಾನ ಕಡ್ಡಾಯ ಮಾಡುವುದು ಪ್ರಸ್ತುತ ಸನ್ನಿವೇಶದಲ್ಲಿ ಅಸಾಧ್ಯವಾಗಿದೆ. ಆದರೆ, ಮತದಾನ ಸುಧಾರಣೆಯನ್ನು ಸರಕಾರ ಮುಂದುವರಿಸಲಿದೆ ಎಂದು ಕಾನೂನು ಸಚಿವ ಸದಾನಂದಗೌಡ ಲೋಕಸಭೆಗೆ ತಿಳಿಸಿದರು.
Vijaya Karnataka Web compulsory voting impossible d v sadananda gowda
ಮತದಾನ ಕಡ್ಡಾಯ ಅಸಾಧ್ಯ: ಡಿವಿಎಸ್


ಚುನಾವಣೆ ಸುಧಾರಣೆಗಾಗಿ ಬಿಜೆಪಿ ಸದಸ್ಯ ಜನಾರ್ದನ ಸಿಂಗ್ ಸಿಗ್ರಿವಾಲ್ ವಿಧೇಯಕ ಮಂಡನೆಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸದಾನಂದಗೌಡ, ಚುನಾವಣೆ ನೀತಿಯಲ್ಲಿ ಹಲವು ಸುಧಾರಣೆ ಅವಶ್ಯವಾಗಿದೆ. ಆದರೆ ಪ್ರಾಯೋಗಿಕವಾಗಿ ಕಡ್ಡಾಯ ಮತದಾನ ಜಾರಿಗೆ ತರುವುದು ಕಷ್ಟಸಾಧ್ಯ ಎಂಬುದನ್ನು ಸದನದ ಗಮನಕ್ಕೆ ತಂದರು.

ಒಂದೊಮ್ಮೆ ಕಾನೂನು ಜಾರಿಯಾದರೆ, ಕೋಟಿ ಕೋಟಿ ಜನರ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟ ಸಾಧ್ಯ ಹಾಗೂ ನ್ಯಾಯಾಂಗ ವ್ಯವಸ್ಥೆಗೂ ಇದು ಧಕ್ಕೆ ತರುತ್ತಿದೆ.

ಮತದಾನ ಪ್ರತಿಯೊಬ್ಬ ಮತದಾರನ ಹಕ್ಕು ಅದನ್ನು ದಬ್ಬಾಳಿಕೆ ಮೂಲಕ ಪಡೆಯಲಾಗುವುದಿಲ್ಲ ಎಂದೂ ಹೇಳಿದರು. ಈ ಬಗ್ಗೆ ಕಾನೂನು ಆಯೋಗವೂ ಮತದಾನ ಕಡ್ಡಾಯ ಉಚಿತವಲ್ಲ ಎಂದು ಸಲಹೆ ನೀಡಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ