ಆ್ಯಪ್ನಗರ

'ಅಮ್ಮ' ಅಕ್ರಮ ಆಸ್ತಿ ವಶಕ್ಕೆ ಮುಂದಾದ ಸರಕಾರ

ಎಲ್ಲೆಲ್ಲಿ ಎಷ್ಟೆಷ್ಟು ಪ್ರಾಪರ್ಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ? ವಶ ಪಡಿಸಿಕೊಳ್ಳುವ ಪ್ರಕ್ರಿಯೆ ಹೇಗೆ?

ಏಜೆನ್ಸೀಸ್ 30 May 2017, 3:43 pm
ಚೆನ್ನೈ: ಮಾಜಿ ಸಿಎಂ ಜಯಲಲಿತಾ ಸೇರಿದಂತೆ ಇತರ ಮೂವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಸರಕಾರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿದೆ. ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಎತ್ತಿಹಿಡಿದಿದ್ದ ವಿಚಾರಣಾ ನ್ಯಾಯಾಲಯ ಆಸ್ತಿ ವಶಪಡಿಸಿಕೊಳ್ಳಲು ಆದೇಶಿಸಿತ್ತು.
Vijaya Karnataka Web confiscation properties disproportionate assets tamilnadu
'ಅಮ್ಮ' ಅಕ್ರಮ ಆಸ್ತಿ ವಶಕ್ಕೆ ಮುಂದಾದ ಸರಕಾರ


ಚೆನ್ನೈ, ಕಾಂಚಿಪುರಂ ಮತ್ತು ತಿರುವಲ್ಲುವರ್ ಸೇರಿದಂತೆ 6 ಜಿಲ್ಲೆಗಳಲ್ಲಿ ಜಯಲಲಿತಾ ಮತ್ತು ಸಮೀಪವರ್ತಿಗಳಾದ, ಜೈಲಿನ್ಲಲಿರುವ ವಿಕೆ ಶಶಿಕಲಾ, ಜೆ. ಇಳವರಸಿ ಮತ್ತು ವಿಎನ್ ಸುಧಾಕರನ್ ಒಡೆತನದ 6 ಸಂಸ್ಥೆಗಳಿಗೆ ಸೇರಿದ ಕೋಟ್ಯಾಂತರ ರೂಪಾಯಿ ಮೌಲ್ಯದ 68 ಆಸ್ತಿಗಳ ವಶಕ್ಕೆ ಕೋರ್ಟ್ ಆದೇಶಿಸಿದೆ.

ಒಟ್ಟಾರೆ ಜಯಲಲಿತಾ ಸೇರಿದಂತೆ ಇತರ ಮೂವರ ಮೇಲೆ 128 ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಿದ್ದು, 68 ಆಸ್ತಿಗಳನ್ನಷ್ಟೇ ವಶ ಪಡಿಸಿಕೊಳ್ಳಲು ಆದೇಶಿಸಲಾಗಿದೆ.

ಮುಟ್ಟುಗೋಲು ಹೇಗೆ?
ಸರಕಾರದ ಆದೇಶದ ಅನುಸಾರ ಭ್ರಷ್ಟಾಚಾರ ವಿರೋಧಿ ಮತ್ತು ವಿಜಿಲೆನ್ಸ್ ನಿರ್ದೇಶಕರು, ಅಕ್ರಮ ಆಸ್ತಿಗಳನ್ನು ಪತ್ತೆ ಹಚ್ಚಿ ಗುರುತು ಹಾಕಲಿದ್ದಾರೆ. ನಂತರ ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡ ಆಸ್ತಿಗಳಿಗೆ 'ತಮಿಳುನಾಡು ಸರಕಾರದ ಸ್ವತ್ತು' ಎಂಬ ಬೋರ್ಡ್‌ಅನ್ನು ತಗುಲಿಹಾಕಲಿದೆ. ಇಲ್ಲಿವರೆಗೂ ಹಕ್ಕು ಸಾಧಿಸಿದ್ದ ವ್ಯಕ್ತಿಗಳಿಗೆ ಪ್ರವೇಶಿಸದಂತೆ ಲಿಖಿತ ಸುತ್ತೋಲೆಯನ್ನು ಹೊರಡಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ