ಆ್ಯಪ್ನಗರ

ನೂರು ಬಾರಿ ಸುಳ್ಳು ಹೇಳಿದ್ರೆ ಸತ್ಯ ಆಗಿಬಿಡಲ್ಲ: ಪ್ರಧಾನಿಗೆ ಪ್ರಿಯಾಂಕಾ ಟಾಂಗ್

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಸರಣಿ ವಾಗ್ದಾಳಿ ಮುಂದುವರೆದಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ, ಗಾಂಧಿ ಕುಟುಂಬದ ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ. ದೇಶದ ಆರ್ಥಿಕ ಹಿಂಜರಿತದ ಬಗ್ಗೆ ಮಾತನಾಡಿರುವ ಪ್ರಿಯಾಂಕಾ, ಮೋದಿ ಸರ್ಕಾರದ ನಡೆಗಳೇ ಕುಸಿತಕ್ಕೆ ಕಾರಣ ಎಂದಿದ್ದಾರೆ.

TIMESOFINDIA.COM 3 Sep 2019, 2:06 pm
ಹೊಸ ದಿಲ್ಲಿ: ಮೋದಿ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ ನಾಯಕರ ಸಾಲಿಗೆ ಈಗ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಸೇರ್ಪಡೆಯಾಗಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪ್ರಿಯಾಂಕಾ ಇದು ‘ಐತಿಹಾಸಿಕ ಆರ್ಥಿಕ ಕುಸಿತ’ ಎಂದು ಬಣ್ಣಿಸಿದ್ದಾರೆ.
Vijaya Karnataka Web modi priyanka


ಮೋದಿ ಸರ್ಕಾರದ ‘ಸರ್ವಾಂಗೀಣ ತಪ್ಪು ನಿರ್ವಹಣೆ’ಯೇ ದೇಶದ ಆರ್ಥಿಕ ಕುಸಿತಕ್ಕೆ ಕಾರಣ : ಮನಮೋಹನ್ ಸಿಂಗ್

ನೂರು ಬಾರಿ ಸುಳ್ಳು ಹೇಳೋದ್ರಿಂದ ಅದು ಸತ್ಯವಾಗೋದಿಲ್ಲ ಎಂದು ವ್ಯಂಗ್ಯವಾಡಿರುವ ಪ್ರಿಯಾಂಕಾ, ಬಿಜೆಪಿ ಸರ್ಕಾರ ಐತಿಹಾಸಿಕ ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳಬೇಕು, ಸ್ಥಿತಿ ಸುಧಾರಣೆಗೆ ಯತ್ನಿಸಬೇಕು ಎಂದು ಆಗ್ರಹಿಸಿದ್ದಾರೆ.


ಆರ್ಥಿಕ ಸ್ಥಿತಿಗತಿಯ ಸವಾಲನ್ನು ಎದುರಿಸುವ ಬದಲು ಸರ್ಕಾರ ‘ಹೆಡ್ ಲೈನ್ ನಿರ್ವಹಣೆ’ ಮಾಡುತ್ತಿದೆ ಎಂದು ಪ್ರಿಯಾಂಕಾ ಕುಟುಕಿದ್ದಾರೆ.

ಮೋದಿ ಒಳ್ಳೆ ಕೆಲಸ ಹುಡುಕೋದು ಅಂದ್ರೆ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತೆ!: ಸಲ್ಮಾನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ