ಆ್ಯಪ್ನಗರ

ಕೈ ವಿರುದ್ಧ ಹಿಂದೂ ಟೆರರ್‌ ಅಸ್ತ್ರ ಪ್ರಯೋಗಿಸಿದ ಮೋದಿ

'ಹಿಂದೂ ಭಯೋತ್ಪಾದನೆ ಎಂಬ ಪದ ಪ್ರಯೋಗದ ಮೂಲಕ ಕಾಂಗ್ರೆಸ್‌ ಶಾಂತಿಪ್ರಿಯ ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸಿ ಅಪಮಾನ ಮಾಡಿದೆ,'' ಎಂದು ಮೋದಿ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದ ಎನ್‌ಡಿಎ ಪ್ರಚಾರ ಸಭೆಯಲ್ಲಿ ಆರೋಪಿಸಿದರು.

Vijaya Karnataka 2 Apr 2019, 5:00 am
ವಾರ್ಧಾ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧದ ತಮ್ಮ ಉಗ್ರ ಪ್ರಹಾರವನ್ನು ಮುಂದುವರಿಸಿದ್ದು, ಸೋಮವಾರ 'ಹಿಂದೂ ಟೆರರ್‌' ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಜತೆಗೆ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೂ ಧ್ವನಿಗೂಡಿಸಿದ್ದಾರೆ.
Vijaya Karnataka Web cong linked peace loving hindus to terrorism modi
ಕೈ ವಿರುದ್ಧ ಹಿಂದೂ ಟೆರರ್‌ ಅಸ್ತ್ರ ಪ್ರಯೋಗಿಸಿದ ಮೋದಿ


'ಹಿಂದೂ ಭಯೋತ್ಪಾದನೆ ಎಂಬ ಪದ ಪ್ರಯೋಗದ ಮೂಲಕ ಕಾಂಗ್ರೆಸ್‌ ಶಾಂತಿಪ್ರಿಯ ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸಿ ಅಪಮಾನ ಮಾಡಿದೆ,'' ಎಂದು ಮೋದಿ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದ ಎನ್‌ಡಿಎ ಪ್ರಚಾರ ಸಭೆಯಲ್ಲಿ ಆರೋಪಿಸಿದರು.

'ಹಿಂದೂಗಳು ಈಗ ಜಾಗೃತರಾಗಿದ್ದಾರೆ ಮತ್ತು ಇಂಥ ಆಪಾದನೆಗಳಿಗಾಗಿ ಕಾಂಗ್ರೆಸ್‌ ಪಕ್ಷವನ್ನು ಶಿಕ್ಷಿಸಲು ನಿರ್ಧರಿಸಿದ್ದಾರೆ,'' ಎಂದರು.

''ಹಿಂದೂ ಟೆರರ್‌ ಪದ ಬಳಕೆ ಮೂಲಕ ಕಾಂಗ್ರೆಸ್‌ ಕೋಟ್ಯಂತರ ಜನರಿಗೆ ಮಸಿ ಬಳಿದಿದೆ. ಹೇಳಿ, ನಿಮಗೆ ಇಂಥ ಸಲ್ಲದ ಆಪಾದನೆ ಕೇಳಿದರೆ ನೋವಾಗುತ್ತದೋ ಇಲ್ಲವೋ? ಸಾವಿರಾರು ವರ್ಷಗಳ ಇತಿಹಾಸ ಉಳ್ಳ ಹಿಂದೂಗಳು ಎಂದಾದರೂ ಭಯೋತ್ಪಾದನೆಯಂತಹ ಹೀನಕೃತ್ಯ ನಡೆಸಿದ ನಿದರ್ಶನಗಳಿವೆಯೇ? ಶಾಂತಿಪ್ರಿಯ ಹಿಂದೂಗಳನ್ನು ಭಯೋತ್ಪಾದನೆಗೆ ತಳುಕು ಹಾಕುವ ಪಾಪ ಮಾಡಿದ ಕಾಂಗ್ರೆಸ್‌ನ್ನು ನೀವು ಕ್ಷಮಿಸುತ್ತೀರಾ,'' ಎಂದು ಮೋದಿ ಜನರನ್ನು ಪ್ರಶ್ನಿಸಿದರು.


ಕಾಂಗ್ರೆಸ್‌ ತಿರುಗೇಟು
''ಮೋದಿ ಸುಳ್ಳು ಹೇಳುತ್ತಿದ್ದಾರೆ, 'ಹಿಂದೂ ಟೆರರಿಸಂ' ಪದವನ್ನು ವ್ಯಾಖ್ಯಾನಿಸಿದ್ದು ಹಿಂದೆ ಗೃಹ ಕಾರ್ಯದರ್ಶಿಯಾಗಿದ್ದ, ಅವರದೇ ಸಂಪುಟ ಸಹೋದ್ಯೋಗಿ ಆರ್‌.ಕೆ. ಸಿಂಗ್‌,'' ಎಂದು ಕಾಂಗ್ರೆಸ್‌ ವಕ್ತಾರ ಮನೀಷ್‌ ತಿವಾರಿ ಹೇಳಿದ್ದಾರೆ. ''ಭಯೋತ್ಪಾದನೆಗೆ ಯಾವುದೇ ಜಾತಿ, ಧರ್ಮವಿಲ್ಲ. ಅದರ ವಿರುದ್ಧ ಹೋರಾಡಲೇಬೇಕು,'' ಎಂದಿದ್ದಾರೆ.

ಏನಿದು ಹಿಂದೂ ಟೆರರ್‌?
2007ರಲ್ಲಿ ನಡೆದ ಸಂಜೋತಾ ರೈಲು ಸ್ಫೋಟದಲ್ಲಿ ಸ್ವಾಮಿ ಅಸೀಮಾನಂದ, ಸಾಧ್ವಿ ಪ್ರಜ್ಞಾ ಸಿಂಗ್‌ ಹೆಸರು ಕೇಳಿ ಬಂದಾಗ 'ಹಿಂದೂ ಟೆರರ್‌' ಪದ ಪ್ರಯೋಗ ನಡೆದಿತ್ತು. ಈ ಎಲ್ಲ ಹಿಂದೂ ನಾಯಕರು ನಿರ್ದೋಷಿಗಳೆಂದು ಕೋರ್ಟ್‌ ಇತ್ತೀಚೆಗಷ್ಟೇ ತೀರ್ಪು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ