ಆ್ಯಪ್ನಗರ

ಕಣ್ಣೀರ ನೆಪದಲ್ಲಿ ಕೈ-ಕಮಲ ವಾರ್‌: ಅರುಣ್ ಜೇಟ್ಲಿ

ಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಕಣ್ಣೀರಿನ ಕುರಿತ ಚರ್ಚೆ ಈಗ ರಾಷ್ಟ್ರ ಮಟ್ಟಕ್ಕೇರಿದ್ದು, 2019ರ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ರೂಪಿಸಲು ಯತ್ನಿಸುತ್ತಿರುವ ಮಿತ್ರ ಕೂಟದ ಚುನಾವಣೋತ್ತರ ಭವಿಷ್ಯದವರೆಗೂ ವ್ಯಾಪಿಸಿಕೊಂಡಿದೆ.

Vijaya Karnataka Web 16 Jul 2018, 10:25 pm
ಬೆಂಗಳೂರು/ಹೊಸದಿಲ್ಲಿ: ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಕಣ್ಣೀರಿನ ಕುರಿತ ಚರ್ಚೆ ಈಗ ರಾಷ್ಟ್ರ ಮಟ್ಟಕ್ಕೇರಿದ್ದು, 2019ರ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ರೂಪಿಸಲು ಯತ್ನಿಸುತ್ತಿರುವ ಮಿತ್ರ ಕೂಟದ ಚುನಾವಣೋತ್ತರ ಭವಿಷ್ಯದವರೆಗೂ ವ್ಯಾಪಿಸಿಕೊಂಡಿದೆ.
Vijaya Karnataka Web Arun JAITL


ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್‌ ಕಾರಣ ಎಂದು ಬಿಂಬಿಸಿರುವ ಬಿಜೆಪಿ, ಕಾಂಗ್ರೆಸ್‌ ಮೊದಲಿನಿಂದಲೂ ಇಂತಹುದೇ ವರ್ತನೆ ತೋರಿದೆ ಎಂದು ಎಚ್‌.ಡಿ. ದೇವೇಗೌಡ, ಐ.ಕೆ. ಗುಜ್ರಾನ್‌ ಮತ್ತಿತರರು ಪ್ರಧಾನಿಗಳಾಗಿ ಅನುಭವಿಸಿದ ಯಾತನೆಯನ್ನು ಬೊಟ್ಟು ಮಾಡಿದೆ. ಜತೆಗೆ ಸಿದ್ಧಾಂತ ರಹಿತ ರಾಜಕೀಯ ಮೈತ್ರಿಗಳಿಂದ ಬೇರೇನು ನಿರೀಕ್ಷಿಸಲು ಸಾಧ್ಯ ಎಂದು ಕುಟುಕಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್‌ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿಯು ಕಾಶ್ಮೀರ, ಗೋವಾ, ಈಶಾನ್ಯಗಳಲ್ಲಿ ಮಾಡಿಕೊಂಡಿರುವುದು ಅಪವಿತ್ರ ಮೈತ್ರಿಯಲ್ಲವೇ ಎಂದು ತಿರುಗೇಟು ನೀಡಿದೆ.

ಈ ನಡುವೆ, ರಾಜ್ಯ ಕಾಂಗ್ರೆಸ್‌ನ ಕೆಲವು ನಾಯಕರು ತಮ್ಮವರೇ ಕುಮಾರಸ್ವಾಮಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಅವಕಾಶವಾದಿ ಮೈತ್ರಿಕೂಟದವರು ಪ್ರಧಾನಿಯಾದರೆ ಕುಮಾರಸ್ವಾಮಿ ಸ್ಥಿತಿಯೇ ಬರುತ್ತದೆ. ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆ ಹೊಂದಿರುವ ದೇಶದ ನಾಯಕ ಇಷ್ಟೊಂದು ದೈನೇಸಿಯಾಗಬೇಕಾ?
ಅರುಣ್‌ ಜೇಟ್ಲಿ, ಬಿಜೆಪಿ ನಾಯಕ

ಕರ್ನಾಟಕದ ಮೈತ್ರಿಯನ್ನು ಅವಕಾಶವಾದಿ ಎನ್ನುವ ಅರುಣ್‌ ಜೇಟ್ಲಿ ಅವರು ಮೊದಲು ಕಾಶ್ಮೀರ, ಗೋವಾ, ಈಶಾನ್ಯ ರಾಜ್ಯಗಳಲ್ಲಿ ಮಾಡಿಕೊಂಡಿರುವ ಹತಾಶ, ಹೊಂದಾಣಿಕೆರಹಿತ ಮೈತ್ರಿಗಳನ್ನು ನೋಡಿಕೊಳ್ಳಬೇಕು.
ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯನ್ನು ಜೀರ್ಣಿಸಿಕೊಳ್ಳಲಾಗದೆ ಒಳಗೊಳಗೆ ಕುದಿಯುತ್ತಿರುವ ಕಾಂಗ್ರೆಸ್‌ನ ಕೆಲವರು ಕುಮಾರಸ್ವಾಮಿ ಅವರಿಗೆ ತೊಂದರೆ ಕೊಡುತ್ತಿದ್ದಾರೆ. ಯಾರೆಂದು ನಾನು ಹೇಳುವುದಿಲ್ಲ.
ಕೆ.ಬಿ. ಕೋಳಿವಾಡ, ಕಾಂಗ್ರೆಸ್‌ ನಾಯಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ