ಆ್ಯಪ್ನಗರ

ವಿಜಯ್ ಮಲ್ಯ ವಿಚಾರವಾಗಿ ಕಾಂಗ್ರೆಸ್ - ಶಿಯಾ ವಕ್ಫ್‌ ಮಂಡಳಿ ನಡುವೆ ಸಮರ: ಏಕೆ ಗೊತ್ತಾ?

ವಿಜಯ್ ಮಲ್ಯ ವಿದೇಶಕ್ಕೆ ತೆರಳುವ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಭೇಟಿ ನೀಡಿದ್ದರು ಎಂಬ ವಿಚಾರವಾಗಿ ಬಿಜೆಪಿ - ಕಾಂಗ್ರೆಸ್‌ ನಡುವೆ ಕೆಸರೆರಚಾಟ ನಡೆಯುತ್ತಿದೆ. ಆದರೆ, ಉತ್ತರ ಪ್ರದೇಶದಲ್ಲಿ ಮಾತ್ರ ಮದ್ಯದ ದೊರೆ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಶಿಯಾ ವಕ್ಫ್‌ ಮಂಡಳಿ ನಡುವೆ ಸಮರ ನಡೆಯುತ್ತಿದೆ.

TIMESOFINDIA.COM 15 Sep 2018, 6:56 pm
[This story originally published in Times Of India on Sep 15, 2018]
Vijaya Karnataka Web ghulam nabi azad

ಲಖನೌ:
ವಿಜಯ್ ಮಲ್ಯ ವಿದೇಶಕ್ಕೆ ತೆರಳುವ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಭೇಟಿ ನೀಡಿದ್ದರು ಎಂಬ ವಿಚಾರವಾಗಿ ಬಿಜೆಪಿ - ಕಾಂಗ್ರೆಸ್‌ ನಡುವೆ ಕೆಸರೆರಚಾಟ ನಡೆಯುತ್ತಿದೆ. ಆದರೆ, ಉತ್ತರ ಪ್ರದೇಶದಲ್ಲಿ ಮಾತ್ರ ಮದ್ಯದ ದೊರೆ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಶಿಯಾ ವಕ್ಫ್‌ ಮಂಡಳಿ ನಡುವೆ ಸಮರ ನಡೆಯುತ್ತಿದೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ಡಿಸ್ಟಿಲ್ಲರಿ ನಡೆಸುತ್ತಿದ್ದ ವಿಜಯ್‌ ಮಲ್ಯಗೆ ವಕ್ಫ್‌ ಬೋರ್ಡ್‌ ಭೂಮಿಯನ್ನು ನೀಡಲಾಗಿತ್ತು. ಈ ಜಾಗವನ್ನು ವಾಪಸ್‌ ಪಡೆಯಲು ಶಿಯಾ ವಕ್ಫ್‌ ಬೋರ್ಡ್‌ ಮುಂದಾಗಿದ್ದು, ಆದರೆ ಈ ವಿಚಾರದಲ್ಲಿ ಮಲ್ಯ ಪರವಾಗಿ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್‌ ಮಧ್ಯಸ್ಥಿಕೆ ವಹಿಸಿದ್ದರು ಎಂದು ಮಂಡಳಿಯ ಮುಖ್ಯಸ್ಥ ವಸೀಂ ರಿಜ್ವಿ ಆರೋಪಿಸಿದ್ದಾರೆ.

1937ರಲ್ಲಿ ಲಾಲಾ ಹನ್ಸ್‌ರಾಂಜ್, ಆತನ ಪುತ್ರ ಲಾಲಾ ಗುಲ್ರಾಜ್‌ ಗೋಪಾಲ್ ಹಾಗೂ ಶಿಯಾ ವಕ್ಫ್‌ ಮಂಡಳಿ ನಡುವೆ ಜಾಗಕ್ಕಾಗಿ ಕರಾರು ಪತ್ರ ಒಪ್ಪಂದವಾಗಿತ್ತು. ಬಳಿಕ, ಜೂನ್ 15,2015ರಂದು ವಕ್ಫ್‌ ಬೋರ್ಡ್‌ ಮಲ್ಯಗೆ ನೋಟಿಸ್‌ ನೀಡಿದ್ದು, ಆ ಜಾಗದಲ್ಲಿ ಯುನೈಟೆಡ್ ಸ್ಪಿರಿಟ್ಸ್‌ ಕಂಪನಿಯ ಡಿಸ್ಟಿಲ್ಲರಿ ತೆರೆದಿದ್ದು ಏಕೆ ಎಂದು ವಾದ ಮಾಡುವಂತೆ ಕೇಳಿದ್ದಾರೆ. ಅಲ್ಲದೆ, ಈ ಭೂಮಿ ಶಿಯಾ ವಕ್ಫ್‌ ಮಂಡಳಿಗೆ ಸೇರಿದ್ದು, ಏಪ್ರಿಲ್ 26,1918ರಿಂದಲೂ ನಮ್ಮ ಹೆಸರಿನಲ್ಲಿದೆ ಎಂದು ವಾದ ಮಾಡಿದ್ದಾರೆ. ಅಲ್ಲದೆ, ಈ ಸಂಬಂಧ ಉತ್ತರ ಪ್ರದೇಶ ರಾಜ್ಯಪಾಲರಿಗೆ ಫೆಬ್ರವರಿ 22, 2016ರಂದು ಬರೆದಿದ್ದ ಪತ್ರವನ್ನು ದಾಖಲೆಯಾಗಿ ತೋರಿಸಿದ್ದಾರೆ.

ವಕ್ಫ್‌ ಮಂಡಳಿಗೆ ಸೇರಿದ್ದ ಭೂಮಿಯನ್ನು ಯುನೈಟೆಡ್‌ ಸ್ಪಿರಿಟ್ಸ್‌ ಅಕ್ರಮವಾಗಿ ವಶಪಡಿಸಿಕೊಂಡಿತ್ತು. ಈ ವಿಚಾರವಾಗಿ ಮಲ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಆದರೆ, ಎಫ್‌ಐಆರ್‌ ದಾಖಲಿಸಿದ್ದಕ್ಕೆ ಗುಲಾಂ ನಬಿ ಆಜಾದ್ ಹಾಗೂ ರಾಹುಲ್ ಗಾಂಧಿ ಒತ್ತಡ ಹಾಕಿದ್ದರು. ಇದಕ್ಕೆ ಮಂಡಳಿ ಕ್ಯಾರೆ ಎನ್ನಲಿಲ್ಲ ಮುಂತಾದ ವಿವರವನ್ನುಳ್ಳ ಪತ್ರವನ್ನು ಯುಪಿ ಗವರ್ನರ್‌ಗೆ ರಿಜ್ವಿ ಬರೆದಿದ್ದರು. ಅಲ್ಲದೆ, ಮಲ್ಯ ಈಗ ಖಾಸಗಿ ಕಂಪನಿಯೊಂದಕ್ಕೆ ಆ ಜಾಗವನ್ನು ಮಾರಿದ್ದಾರೆ ಎಂದು ರಿಜ್ವಿ ಆರೋಪಿಸಿದ್ದಾರೆ.

ಆದರೆ, ರಿಜ್ವಿಯ ಆರೋಪಗಳನ್ನು ಗುಲಾಂ ನಬಿ ಆಜಾದ್ ತಳ್ಳಿಹಾಕಿದ್ದು, ತಾನು ರಿಜ್ವಿಯಾಗಲಿ ಮಲ್ಯವನ್ನಾಗಲೀ ಭೇಟಿಯಾಗಿಲ್ಲ. ಇದು ಹಸಿ ಸುಳ್ಳು ಎಂದು ಆಜಾದ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ