ಹೊಸದಿಲ್ಲಿ: ರಫೇಲ್ ಒಪ್ಪಂದದ ಕುರಿತು ಕೇಂದ್ರ ಸರಕಾರದ ವಿರುದ್ಧ ದಾಳಿ ತೀವ್ರಗೊಳಿಸಿರುವ ಕಾಂಗ್ರೆಸ್, ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರು (ಸಿಎಜಿ) ರಫೇಲ್ ವರದಿಯಿಂದ ದೂರ ಇರಬೇಕು ಎಂದು ಆಗ್ರಹಿಸಿದೆ. ''ಈಗ ಸಿಎಜಿ ಆಗಿರುವ ರಾಜೀವ್ ಮೆಹರ್ಷಿ ಅವರು ರಫೇಲ್ ಒಪ್ಪಂದಕ್ಕೆ ಅಂಕಿತ ಬೀಳುವ ಸಂದರ್ಭದಲ್ಲಿ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಹಣಕಾಸು ಸಚಿವಾಲಯವೂ ಈ ಮಾತುಕತೆಯಲ್ಲಿ ಭಾಗಿಯಾಗಿದೆ. ಹೀಗಾಗಿ ಸ್ವಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಸಿಲುಕದೇ ಇರಲು ರಾಜೀವ್ ಅವರು ರಫೇಲ್ ಒಪ್ಪಂದದ ವರದಿಯಿಂದ ದೂರ ಇರಬೇಕು,'' ಎಂದು ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ರಫೇಲ್ ಹಗರಣದಲ್ಲಿ ಸಿಎಜಿ ವಿರುದ್ಧವೇ ಆರೋಪ ಮಾಡಿದ ಕಾಂಗ್ರೆಸ್
ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರು (ಸಿಎಜಿ) ರಫೇಲ್ ವರದಿಯಿಂದ ದೂರ ಇರಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
Vijaya Karnataka 11 Feb 2019, 5:00 am