ಆ್ಯಪ್ನಗರ

ರಫೇಲ್‌ ತೀರ್ಪು ಹಿಂಪಡೆಯಲು ಕಾಂಗ್ರೆಸ್‌ ಒತ್ತಾಯ

ರಫೇಲ್‌ ಪ್ರಕರಣದಲ್ಲಿಸರಕಾರ ಸುಳ್ಳು ಮಾಹಿತಿ ನೀಡಿ ನ್ಯಾಯಾಲಯವನ್ನು ವಂಚಿಸಿದೆ. ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಆನಂದ್‌ ಶರ್ಮಾ ಒತ್ತಾಯಿಸಿದರು

Vijaya Karnataka 17 Dec 2018, 5:00 am
ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಪ್ರರಕಣದಲ್ಲಿ ಸರಕಾರ ಸಂಪೂರ್ಣ ದೋಷಮುಕ್ತ ಎನ್ನುವ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಸಿಎಜಿ ವರದಿ ಅರ್ಹತೆ ವಿಷಯದಲ್ಲಿ ಎದ್ದಿರುವ ವಿವಾದವನ್ನು ಮರು ವಿಚಾರಣೆಗೆ ಒಳಪಡಿಸಬೇಕೆಂದು ಒತ್ತಾಯಿಸಲಾಗಿದೆ.
Vijaya Karnataka Web anand


ಹಗರಣ ಕುರಿತು ಸರಕಾರ ಸುಳ್ಳು ಮಾಹಿತಿ ನೀಡಿ ನ್ಯಾಯಾಲಯವನ್ನು ವಂಚಿಸಿದೆ. ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಕಾಂಗ್ರೆಸ್‌ ಹೇಳಿದೆ.

''ಈ ಹಗರಣದ ಪರಿಶೀಲನೆಗೆ ನ್ಯಾಯಾಲಯಗಳು ಸೂಕ್ತ ವೇದಿಕೆ ಅಲ್ಲ ಎನ್ನುವುದು ಕಾಂಗ್ರೆಸ್‌ನ ಅಭಿಪ್ರಾಯ. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಯ ತನಿಖೆಯಿಂದ ಮಾತ್ರ ಸತ್ಯಾಂಶ ಹೊರ ಬರಲು ಸಾಧ್ಯ. ಇದರಲ್ಲಿನ ಇನ್ನೂ ಅನೇಕ ಸಂಗತಿಗಳು ಬೆಳಕಿಗೆ ಬರಬೇಕಿದೆ. ಸರಕಾರ ಸುಳ್ಳು ಮಾಹಿತಿ ನೀಡಿ, ನ್ಯಾಯಾಲಯವನ್ನು ದಾರಿ ತಪ್ಪಿಸಿದೆ. ಇದರ ಪರಿಣಾಮ ತೀರ್ಪಿನ ಮೇಲೆ ಉಂಟಾಗಿದೆ. ಸಿಎಜಿ ವರದಿ ಇನ್ನೂ ಹೊರ ಬಂದಿಲ್ಲ. ಸಂಸತ್ತಿಗೆ ಅದನ್ನು ನೀಡಿಯೇ ಇಲ್ಲ. ಆದರೆ, ಕೋರ್ಟ್‌ಗೆ ಸರಕಾರ ಸಲ್ಲಿಸಿದ ಅರ್ಜಿಯಲ್ಲಿ ಮಾತ್ರ ಅದು ಸಲ್ಲಿಕೆಯಾಗಿದೆ ಎಂದು ತೋರಿಸಲಾಗಿದೆ. ಇದು ನ್ಯಾಯಾಂಗ ನಿಂದನೆಗೆ ಅರ್ಹ ಪ್ರಕರಣ. ಆದರೆ, ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು ಕೋರ್ಟಿನದೇ ತಪ್ಪು ಎಂದು ಹೇಳಿ ಜಾರಿಕೊಳ್ಳಲು ನೋಡುತ್ತಿದ್ದಾರೆ,'' ಎಂದು ಕಾಂಗ್ರೆಸ್‌ ಮುಖಂಡ ಆನಂದ್‌ ಶರ್ಮಾ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

''ಈ ಪ್ರಕರಣದಲ್ಲಿ ಪ್ರಧಾನಿ ಏನೂ ತಪ್ಪೇ ಮಾಡಿಲ್ಲ ಎನ್ನುವುದಾದರೆ, ಜಂಟಿ ಸದನ ಸಮಿತಿಗೆ ಒಪ್ಪಿಸಲು ಹಿಂಜರಿಕೆ ಯಾಕೆ? ಹಾಗೊಂದು ವೇಳೆ ಜೆಪಿಸಿಗೆ ಒಪ್ಪಿಸಿದರೆ, ಪ್ರಧಾನಿ ಜತೆಗೆ ಇಡೀ ಬಿಜೆಪಿ ತಮ್ಮ ಪಾಪ ತೊಳೆದುಕೊಳ್ಳಲು ಕುಂಭಮೇಳಕ್ಕೆ ಹೋಗಬೇಕಾಗುತ್ತದೆ,'' ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ