ಆ್ಯಪ್ನಗರ

‘ಮೋದಿ, ಶಾ ಜೀವಂತವಾಗಿರುವುದು ಸೋನಿಯಾ, ರಾಹುಲ್‌ಗೆ ಇಷ್ಟವಿರಲಿಲ್ಲ’

ಆದರೆ, ಅಂದು ಅಮಿತ್‌ ಶಾ ಅವರನ್ನು ಜೈಲಿಗೆ ಕಳುಹಿಸಿದ್ದ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರು ತಾವೊಂದು ದಿನ ಕಾನೂನು ಕುಣಿಕೆಗೆ ಸಿಲುಕಿ ಜೈಲುಪಾಲಾಗುವ ಬಗ್ಗೆ ಕನಸಿನಲ್ಲೂಎಣಿಸಿರಲಿಲ್ಲ. ಅವರು ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ,'' ಎಂದು ಹೇಳಿದ್ದಾರೆ.

PTI 26 Sep 2019, 5:00 am
ನೋಯ್ಡಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಜೀವಂತವಾಗಿರುವುದು ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ಇಷ್ಟವಿರಲಿಲ್ಲಎಂದು ಯೋಗ ಗುರು ಬಾಬಾ ರಾಮದೇವ್‌ ಆರೋಪಿಸಿದ್ದಾರೆ.
Vijaya Karnataka Web ramdev

ನೋಯ್ಡಾದಲ್ಲಿಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ''ಯುಪಿಎ ಸರಕಾರ ಕೇಂದ್ರದಲ್ಲಿಅಧಿಕಾರದಲ್ಲಿಇದ್ದಾಗ ಅಮಿತ್‌ ಶಾ ಅವರು ಜೈಲಿನಲ್ಲೇ ಸಾಯಬೇಕೆಂದು ಕಾಂಗ್ರೆಸ್‌ ನಾಯಕರು ಬಯಸಿದ್ದರು. ಆದರೆ, ಅಂದು ಅಮಿತ್‌ ಶಾ ಅವರನ್ನು ಜೈಲಿಗೆ ಕಳುಹಿಸಿದ್ದ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರು ತಾವೊಂದು ದಿನ ಕಾನೂನು ಕುಣಿಕೆಗೆ ಸಿಲುಕಿ ಜೈಲುಪಾಲಾಗುವ ಬಗ್ಗೆ ಕನಸಿನಲ್ಲೂಎಣಿಸಿರಲಿಲ್ಲ. ಅವರು ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ,'' ಎಂದು ಹೇಳಿದ್ದಾರೆ.

''ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಇಡೀ ದೇಶವೇ ತಮ್ಮ ಸಾಮ್ರಾಜ್ಯ ಎಂದು ತಿಳಿದಿದ್ದರು. ಗೃಹ ಸಚಿವರಾಗಿದ್ದಾಗ ಕಾನೂನು ತಮ್ಮ ಕೈಗೊಂಬೆ ಎಂದು ಎಣಿಸಿದ್ದರು. ಆದರೆ, 'ಕಾನೂನು ಉಲ್ಲಂಘನೆ'ಯ ತಪ್ಪಿಗೆ ಇಂದು ಅವರು ಪರಿಣಾಮ ಎದುರಿಸುತ್ತಿದ್ದಾರೆ,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ