ಆ್ಯಪ್ನಗರ

ಉತ್ತರ ಪ್ರದೇಶದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ ಪ್ರಿಯಾಂಕಾ ಗಾಂಧಿ

ವಿಮಾನ ನಿಲ್ದಾಣದಿಂದ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯವರೆಗೆ 25 ಕಿಮೀ. ದೂರ ಪ್ರಿಯಾಂಕಾ ಯಾತ್ರೆ ಸಾಗಿತು. ಹೊಸ ಭವಿಷ್ಯ ನಿರ್ಮಿಸೋಣ, ಬನ್ನಿ, ಹೊಸತನದ ರಾಜಕೀಯದೊಂದಿಗೆ ಎಂದು ರ‍್ಯಾಲಿಗೂ ಮುನ್ನ ಜನತೆಗೆ ಪ್ರಿಯಾಂಕ ಕರೆ ನೀಡಿದ್ದರು.

Vijaya Karnataka Web 11 Feb 2019, 7:43 pm
Vijaya Karnataka Web Priyanka 2
ಲಖ್ನೋ: ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವ ಪ್ರಿಯಾಂಕ ಗಾಂಧಿ ಸೋಮವಾರ ಉತ್ತರ ಪ್ರದೇಶದಲ್ಲಿ ರೋಡ್‌ ಶೋ ನಡೆಸುವ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ.

ಪ್ರಿಯಾಂಕಾ ಗಾಂಧಿ ಜತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ರೋಡ್‌ ಶೋದಲ್ಲಿ ಸಾಗಿದರು.

ವಿಮಾನ ನಿಲ್ದಾಣದಿಂದ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯವರೆಗೆ 25 ಕಿಮೀ. ದೂರ ಪ್ರಿಯಾಂಕಾ ಯಾತ್ರೆ ಸಾಗಿತು. ಹೊಸ ಭವಿಷ್ಯ ನಿರ್ಮಿಸೋಣ, ಬನ್ನಿ, ಹೊಸತನದ ರಾಜಕೀಯದೊಂದಿಗೆ ಎಂದು ರ‍್ಯಾಲಿಗೂ ಮುನ್ನ ಜನತೆಗೆ ಪ್ರಿಯಾಂಕ ಕರೆ ನೀಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಶತಾಯಗತಾಯ ಯತ್ನಿಸುತ್ತಿದ್ದು, ಹಲವು ಪ್ರಚಾರ ಸಮಾವೇಶ ಮತ್ತು ರ‍್ಯಾಲಿ ನಡೆಸಲು ಉದ್ದೇಶಿಸಿದೆ.

ಅದರ ಅಂಗವಾಗಿ ಪ್ರಿಯಾಂಕಾ ಗಾಂಧಿ ಕೂಡ ವಿವಿಧೆಡೆ ಚುನಾವಣಾ ಪ್ರಚಾರ ರ‍್ಯಾಲಿ ನಡೆಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ