ಆ್ಯಪ್ನಗರ

170 ಕೋಟಿ ರೂ. ದೇಣಿಗೆ ಪಡೆದ ಕಾಂಗ್ರೆಸ್‌ಗೆ ಐಟಿ ನೋಟಿಸ್‌ ಜಾರಿ

ಕಾಂಗ್ರೆಸ್‌ ಪಕ್ಷಕ್ಕೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಹೈದರಾಬಾದ್‌ ಮೂಲದ ಉದ್ಯಮ ಸಂಸ್ಥೆಯೊಂದರಿಂದ 170 ಕೋಟಿ ರೂ...ದೇಣಿಗೆ ಪಡೆದ ಪ್ರಕರಣ ಈಗ ಪಕ್ಷಕ್ಕೆ ಮುಜುಗರ ತಂದಿದೆ.

Vijaya Karnataka 3 Dec 2019, 9:36 pm
ಹೊಸದಿಲ್ಲಿ: ಹೈದರಾಬಾದ್‌ ಮೂಲದ ಉದ್ಯಮ ಸಂಸ್ಥೆಯೊಂದರಿಂದ 170 ಕೋಟಿ ರೂ. ದೇಣಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.
Vijaya Karnataka Web ಐಟಿ
ಐಟಿ


ಹವಾಲಾ ಹಗರಣದ ತನಿಖೆ ನಡೆಸುತ್ತಿರುವ ಐಟಿ, ಸಂಶಯಾತ್ಮಕ ವಹಿವಾಟುಗಳ ಮೂಲ ಜಾಲಾಡುತ್ತಿದೆ. ಕಳೆದವಾರ ಹೊಸದಿಲ್ಲಿ, ಮುಂಬಯಿ ಮತ್ತು ಹೈದರಾಬಾದ್‌ನಲ್ಲಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ಪ್ರಮುಖ ಕಾರ್ಪೊರೇಟ್‌ ಸಂಸ್ಥೆಗಳ ಕಾಳಧನದ ಜಾಡು ಭೇದಿಸಿದ್ದರು.

ಅದರಲ್ಲಿ ಹೈದರಾಬಾದ್‌ ಮೂಲದ ಮೂಲಸೌಕರ್ಯ ಕಂಪನಿಯಿಂದ ಭಾರಿ ಪ್ರಮಾಣದ ಹಣ ಕಾಂಗ್ರೆಸ್‌ಗೆ ರವಾನೆಯಾಗಿದ್ದು ಪತ್ತೆಯಾಗಿತ್ತು. ಆಂಧ್ರಪ್ರದೇಶ ಮೂಲಕ ಮತ್ತೊಂದು ರಾಜಕೀಯ ಪಕ್ಷಕ್ಕೂ ಹಣ ವರ್ಗಾವಣೆಗೊಂಡಿದೆ.

''ಕೆಲವು ಕಾರ್ಪೊರೇಟ್‌ ಸಂಸ್ಥೆಗಳು ಮತ್ತು ಹವಾಲಾ ಆಪರೇಟರ್‌ಗಳ ನಡುವೆ ಅಕ್ರಮ ಹಣಕಾಸು ಪರಭಾರೆ ನಡೆದಿರುವ ಬಗ್ಗೆ ಮಾಹಿತಿ ಲಭಿಸಿ, ಶೋಧ ನಡೆಸಲಾಯಿತು. ಬೋಗಸ್‌ ಗುತ್ತಿಗೆ ಹೆಸರಲ್ಲಿ 3,300 ಕೋಟಿ ರೂ. ವರ್ಗಾವಣೆಗೊಂಡಿದೆ. ತೆರಿಗೆ ವಂಚನೆಯ ಈ ಜಾಲವನ್ನು ಭೇದಿಸಲಾಗಿದ್ದು, ಪ್ರಮುಖ ಸಂಸ್ಥೆಗಳು ಸಿಕ್ಕಿಬಿದ್ದಿವೆ. ದಾಳಿ ವೇಳೆ ದೊರೆತ ಸುಳಿವು ಆಧರಿಸಿಯೇ ಕಾಂಗ್ರೆಸ್‌ಗೆ ನೋಟಿಸ್‌ ಜಾರಿಗೊಳಿಸಲಾಗಿದೆ'' ಎಂದು ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ