ಆ್ಯಪ್ನಗರ

56 ಇಂಚಿನ ಎದೆ ಯಾವಾಗ ಉತ್ತರಿಸುತ್ತದೆ: ಸುರ್ಜೇವಾಲ ಟ್ವೀಟ್‌ಗೆ ನೆಟ್ಟಿಗರ ಆಕ್ರೋಶ

ಇಡೀ ದೇಶವೇ ಪಾಕಿಸ್ತಾನೀ ಉಗ್ರಗಾಮಿಗಳ ಕೃತ್ಯದ ವಿರುದ್ಧ ಆಕ್ರೋಶದಿಂದ ಕುದಿಯುತ್ತಿದ್ದರೆ, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ದುರಂತದಲ್ಲಿ ರಾಜಕೀಯ ಮಾತನಾಡುವ ಮೂಲಕ ಟ್ವೀಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿರಿಸಿ ಅವರು ಮಾಡಿದ ಟ್ವೀಟ್‌ಗಳಿಗೆ ಟೀಕೆಗಳ ಮಹಾಪೂರ ಹರಿದುಬಂದಿದೆ.

Vijaya Karnataka Web 15 Feb 2019, 6:54 pm
ಹೊಸದಿಲ್ಲಿ: ದೇಶ ಕಾಯುವ ಯೋಧರ ಬಲಿದಾನವಾಗಿ, ದೇಶಕ್ಕೇ ಆಪತ್ತಿನ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ರಾಜಕೀಯ ಪ್ರದರ್ಶಿಸಿರುವುದು, ನೆಟ್ಟಿಗರನ್ನು ಕೆರಳಿಸಿದೆ. "ನರೇಂದ್ರ ಮೋದಿ ಸರಕಾರದ ಅಡಿಯಲ್ಲಿ ಇದು 18ನೇ ದೊಡ್ಡ ಭಯೋತ್ಪಾದಕ ದಾಳಿಯಾಗಿದ್ದು, 56 ಇಂಚಿನ ಎದೆ ಯಾವಾಗ ಉತ್ತರಿಸುತ್ತದೆ ಅಥವಾ ಕಣ್ಣುಗಳು ಕೋಪದಿಂದ ಯಾವಾಗ ಕೆಂಪಗಾಗುತ್ತವೆ?" ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.
Vijaya Karnataka Web New Delhi: Senior Congress leader Randeep Surjewala gestures during a press conf...
Senior Congress leader Randeep Surjewala gestures during a press conference, in New Delhi, Friday. Dec 07, 2018.Photo/Kamal Kishore) (


ಬಲಿದಾನಗೈದ ಸಿಆರ್‌ಪಿಎಫ್ ಯೋಧರ ಪರವಾಗಿ ಇಡೀ ದೇಶವೇ ಒಗ್ಗಟ್ಟು ಪ್ರದರ್ಶಿಸಿರುವ ಈ ಹಂತದಲ್ಲಿ, ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುರ್ಜೇವಾಲಾ, "ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಈ ದಾಳಿಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಮೋದಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ. ಶೂನ್ಯ ರಾಜಕೀಯ ಕ್ರಿಯೆ ಮತ್ತು ಭಯೋತ್ಪಾದನೆ ತಡೆಗೆ ಶೂನ್ಯ ನೀತಿಯಿಂದಾಗಿ ಆಪತ್ಕರ ಪರಿಸ್ಥಿತಿ ಉಂಟಾಗಿದೆ. ಬಿಜೆಪಿಯು ನಾಲ್ಕು ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರವನ್ನು ಆಳಿತು. ಈಗ ರಾಜ್ಯಪಾಲರ ಮೂಲಕವೂ ಬಿಜೆಪಿಯೇ ಆಳುತ್ತಿದೆ. ಬಿಜೆಪಿಯೀಗ ಜಮ್ಮು ಮತ್ತು ಕಾಶ್ಮೀರವನ್ನು ಅವಸಾನದ ಅಂಚಿಗೆ ನೂಕಿದೆ" ಎಂದು ಸುರ್ಜೇವಾಲಾ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

ಯುಪಿಎಯ 55 ತಿಂಗಳ ಅವಧಿಗೆ ಹೋಲಿಸಿದರೆ ಕಳೆದ 55 ತಿಂಗಳಲ್ಲಿ ಪಾಕಿಸ್ತಾನವು 5000ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಇದು 1000% ಹೆಚ್ಚಳ. ಎಲ್ಲಿದೆ 56 ಇಂಚಿನ ಎದೆ ಎಂದು ಮೋದಿಯವರಿಗೆ ಸುರ್ಜೇವಾಲಾ ಟಾಂಗ್ ನೀಡಿದ್ದಾರೆ.

ಆದರೆ, ಭಾರತೀಯ ಟ್ವಿಟರ್ ಬಳಕೆದಾರರಂತೂ ಸುರ್ಜೇವಾಲಾ ವಿರುದ್ಧ ಮುಗಿಬಿದ್ದಿದ್ದಾರೆ. ದೇಶದ ಮೇಲೆ ನಡೆದಿರುವ ಅತಿದೊಡ್ಡ ಐಇಡಿ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದರ ವಿರುದ್ಧ ಅವರು ಹರಿಹಾಯ್ದಿದ್ದಾರೆ.
ಉದಾಹರಣೆಗೆ, ಈ ಮೇಲಿನ ಟ್ವೀಟ್‌ಗೆ ಬಂದಿರುವ ಕಾಮೆಂಟ್‌ಗಳನ್ನು ನೋಡಿದರೆ, ಟ್ವೀಟಿಗರ ಆಕ್ರೋಶ ಎದ್ದುಕಾಣುತ್ತಿದೆ.

ಕಾಂಗ್ರೆಸ್ ಸಹಿತ ಪಕ್ಷಾತೀತವಾಗಿ ಎಲ್ಲ ಮುಖಂಡರೂ ದಾಳಿಯನ್ನು ಖಂಡಿಸಿ, ಸರಕಾರದ ನಿರ್ಧಾರಕ್ಕೆ ಬದ್ಧ ಎಂದು ಬೆಂಬಲ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ