ಆ್ಯಪ್ನಗರ

ವೃಥಾ ಮೋದಿ ನಿಂದೆ ಸರಿಯಲ್ಲ

''ಮೋದಿ ಅವರ ಕ್ರಮಗಳನ್ನು ಆಯಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಕಾಣಬೇಕು. ವೈಯಕ್ತಿಕವಾಗಿ ಮೋದಿ ಅವರ ನಡೆಗಳನ್ನು ನಾವುಗಳು ನಿರ್ಧರಿಸಬಾರದು. ಅವರನ್ನು ಸದಾ ತಪ್ಪಿತಸ್ಥರಂತೆ ಕಾಣುವುದು ಸರಿಯಲ್ಲ. ಪ್ರತಿಪಕ್ಷಗಳ ಇಂತಹ ನಡೆಗಳಿಂದಲೇ ಮೋದಿ ಅವರಿಗೆ ಬಹಳ ಅನುಕೂಲವಾಗುತ್ತಿದೆ,'' ಎಂದು ಟ್ವೀಟ್‌ನಲ್ಲಿ ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ.

PTI 24 Aug 2019, 5:00 am
ಹೊಸದಿಲ್ಲಿ: ಎಲ್ಲ ವಿಚಾರಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವುದು ಸರಿಯಲ್ಲ, ಅವರ ದಿಟ್ಟ ಹಾಗೂ ಸರಿಯಾದ ನಿರ್ಧಾರಗಳನ್ನು ಶ್ಲಾಘಿಸಬೇಕು ಎಂಬ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರ ಹೇಳಿಕೆಗೆ ಹಿರಿಯ ಕಾಂಗ್ರೆಸ್‌ ನಾಯಕರಾದ ಅಭಿಷೇಕ್‌ ಮನು ಸಿಂಘ್ವಿ ಮತ್ತು ಶಶಿ ತರೂರ್‌ ಬೆಂಬಲ ಸೂಚಿಸಿದ್ದಾರೆ.
Vijaya Karnataka Web Ramesh


''ಮೋದಿ ಅವರ ಕ್ರಮಗಳನ್ನು ಆಯಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಕಾಣಬೇಕು. ವೈಯಕ್ತಿಕವಾಗಿ ಮೋದಿ ಅವರ ನಡೆಗಳನ್ನು ನಾವುಗಳು ನಿರ್ಧರಿಸಬಾರದು. ಅವರನ್ನು ಸದಾ ತಪ್ಪಿತಸ್ಥರಂತೆ ಕಾಣುವುದು ಸರಿಯಲ್ಲ. ಪ್ರತಿಪಕ್ಷಗಳ ಇಂತಹ ನಡೆಗಳಿಂದಲೇ ಮೋದಿ ಅವರಿಗೆ ಬಹಳ ಅನುಕೂಲವಾಗುತ್ತಿದೆ,'' ಎಂದು ಟ್ವೀಟ್‌ನಲ್ಲಿ ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪೂರಕವಾಗಿ ಸಂಸದ ತರೂರ್‌, '' ಕಳೆದ ಆರು ವರ್ಷಗಳಿಂದಲೂ ಮೋದಿ ಅವರ ಸರಿಯಾದ ಕ್ರಮಗಳನ್ನು ನಾವು ಮೆಚ್ಚಲೇಬೇಕು ಎಂದು ವಾದಿಸುತ್ತಿದ್ದೇನೆ. ಆ ರೀತಿ ಪ್ರತಿಪಕ್ಷಗಳು ನಡೆದುಕೊಂಡಲ್ಲಿ ಜನರಿಗೂ ನಮ್ಮ ಬಗ್ಗೆ ಗೌರವ ಹೆಚ್ಚಲಿದೆ. ಜತೆಗೆ ಮೋದಿ ಅವರು ತಪ್ಪು ನಿರ್ಧಾರ ಕೈಗೊಂಡಾಗ ನಾವು ಖಂಡಿಸಿದರೆ ಅಂಥ ಮಾತುಗಳಿಗೂ ಬೆಲೆ ಸಿಗಲಿದೆ. ಈಗಲಾದರೂ ಪ್ರತಿಪಕ್ಷ ನಾಯಕರು ಈ ಕುರಿತು ಚಿಂತಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಕೊಡುಗೆ ಒಪ್ಪಲಿ: ಇಬ್ಬರು ನಾಯಕರ ಅಭಿಪ್ರಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಟಾ ಮುಖರ್ಜಿ, '' ರಾಷ್ಟ್ರ ನಿರ್ಮಾಣ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಅದರಲ್ಲಿ ಈ ಹಿಂದಿನ ಹಲವು ಸರಕಾರಗಳ ಕೊಡುಗೆ ಇದೆ. ಹೀಗಾಗಿ ನೆಹರು ಮತ್ತು ಕಾಂಗ್ರೆಸ್‌ ಅನ್ನು ಟೀಕಿಸುವ ಧೋರಣೆಯನ್ನು ಮಿ.ಮೋದಿ ಮತ್ತು ಅವರ ತಂಡವೂ ಬಿಡಬೇಕು'', ಎಂದು ಪರೋಕ್ಷವಾಗಿ ಪ್ರಧಾನಿಗೆ ಕುಟುಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ