ಆ್ಯಪ್ನಗರ

ರಂಜಾನ್‌ನಲ್ಲಿ ಇರುವ ಕರೆಂಟ್‌ ದೀಪಾವಳಿಗೂ ಇರಲಿ: ಪ್ರಧಾನಿ ಹೇಳಿಕೆಗೆ ಕಿಡಿ

ರಂಜಾನ್‌ ಸಂದರ್ಭದಲ್ಲಿ ಕರೆಂಟ್‌ ಇರುವುದಾದರೆ, ದೀಪಾವಳಿಯಲ್ಲೂ ಇರಬೇಕು ಎಂಬ ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್‌, ಸಿಪಿಎಂ ಕಿಡಿಕಾರಿವೆ.

ಟೈಮ್ಸ್ ಆಫ್ ಇಂಡಿಯಾ 20 Feb 2017, 2:23 pm
ಹೊಸದಿಲ್ಲಿ: ರಂಜಾನ್‌ ಸಂದರ್ಭದಲ್ಲಿ ಕರೆಂಟ್‌ ಇರುವುದಾದರೆ, ದೀಪಾವಳಿಯಲ್ಲೂ ಇರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಹಾಗೂ ಸಿಪಿಎಂ ಕಿಡಿಕಾರಿವೆ.
Vijaya Karnataka Web congress left kejriwal slam modi for his communal irresponsible comment about ramzan
ರಂಜಾನ್‌ನಲ್ಲಿ ಇರುವ ಕರೆಂಟ್‌ ದೀಪಾವಳಿಗೂ ಇರಲಿ: ಪ್ರಧಾನಿ ಹೇಳಿಕೆಗೆ ಕಿಡಿ


ಕೋಮು ಭಾವನೆ ಕೆರಳಿಸುವ ಪ್ರಧಾನಿ ಮೋದಿ ಅವರ ರಂಜಾನ್‌ ಹೇಳಿಕೆ ಬೇಜವಾಬ್ದಾರಿಯುತವಾದುದು ಎಂದು ಪ್ರತಿಪಕ್ಷಗಳು ದೂರಿವೆ.

ಉತ್ತರ ಪ್ರದೇಶದ ಫತೇಫುರ್‌ ರ‍್ಯಾಲಿಯಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ, 'ಅಗರ್‌ ರಂಜಾನ್‌ ಮೇ ಬಿಜಲಿ ಅತಾ ಹೇ ತೋ ದಿವಾಲಿ ಮೇ ಭಿ ಆನಾ ಚಾಹಿಯೇ, ಭೇದ ಭಾವ ಹೋನಾ ನಹಿ ಚಾಯಿಹೇ (ರಂಜಾನ್‌ನಲ್ಲಿ ವಿದ್ಯುತ್‌ ಇದ್ದರೆ, ದೀಪಾವಳಿಯಲ್ಲೂ ಇರಬೇಕು. ಭೇದಭಾವ ಸಲ್ಲದು) ಎಂದಿದ್ದರು.

'ಕಬರಿಸ್ತಾನ್‌ (ಸಶ್ಮಾನ) ಇದ್ದರೆ, ಸಂಶಾನ್‌ (ರುದ್ರಭೂಮಿ)ವೂ ಇರಬೇಕು,'ಎಂದಿದ್ದರು.
धर्म के आधार पर भेदभाव नहीं होना चाहिए, अगर रमजान में बिजली मिलती है तो दिवाली में भी बिजली मिलनी चाहिए: पीएम @narendramodi फतेहपुर, यूपी pic.twitter.com/sFQVF6a9gN — BJP (@BJP4India) February 19, 2017
ಪ್ರಧಾನಿ ಅವರ ಈ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಪ್ರಧಾನಿ ಇಂಥ ತಪ್ಪು, ಬೇಜವಾಬ್ದಾರಿಯುತ ಹೇಳಿಕೆ ನೀಡಬಾರು. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ,' ಎಂದು ಕಾಂಗ್ರೆಸ್‌ ನಾಯಕರು ದೂರಿದ್ದಾರೆ.

'ಇಂಥ ಕೋಮು ಹೇಳಿಕೆ ಮೂಲಕ ಪ್ರಧಾನಿ ಹಿಂದೂ- ಮುಸಲ್ಮಾನರ ನಡುವೆ ಒಡಕು ಮೂಡಿಸುವ ಯತ್ನ ಮಾಡಿದ್ದಾರೆ,' ಎಂದು ಸಿಪಿಎಂ ನಾಯಕ ಸೀತಾರಾಂ ಯಚೂರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ